ಸುಶಾಂತ್ ಸಾವಿನ ಬೆನ್ನಲ್ಲೇ ಬಾಲಿವುಡ್ನಲ್ಲಿನ ನೆಪೋಟಿಸಂ ಬಗ್ಗೆ ಹಲವಾರು ಕಲಾವಿದರು ಮುಕ್ತವಾಗಿ ಮಾತನಾಡುತ್ತಿದ್ದಾರೆ. ಹೊರಗಿನ ಪ್ರತಿಭೆಗಳಿಗೆ ಬಾಲಿವುಡ್ನಲ್ಲಿ ಮನ್ನಣೆ ನೀಡುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದಷ್ಟು ಸಂಸ್ಥೆಗಳು ಇಡೀ ಬಾಲಿವುಡ್ ಅನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ದರ್ಬಾರ್ ಮಾಡುತ್ತಿವೆ ಎಂದೂ ಆರೋಪಗಳು ಕೇಳಿಬರುತ್ತಿವೆ. ಇದೀಗ ಅದೇ ನೆಪೋಟಿಸಂ ಬಗ್ಗೆ ಎಂಎನ್ಸಿ ಪಕ್ಷದ ರಾಜ್ ಠಾಕ್ರೆ ಮಾತನಾಡಿದ್ದಾರೆ.
ಇದನ್ನೂ ಓದಿ: ತಂದೆಯಿಲ್ಲದ ಮುಸ್ಲಿಂ ಯುವತಿ ಮದುವೆಗೆ ಸುದೀಪ್ ನೆರವು
ಬಾಲಿವುಡ್ನಲ್ಲಿ ನೆಪೋಟಿಸಂ ರೀತಿಯ ಘಟನೆಗಳು ನಡೆದರೆ, ಶೀಘ್ರ ನಮ್ಮ ಗಮನಕ್ಕೆ ತನ್ನಿ. ಸರಿಯಾದ ಪಾಠ ಕಲಿಸಲಾಗುವುದೆಂದು ಖಡಕ್ಕಾಗಿ ಪ್ರತಿಕ್ರಿಯಿಸಿದ್ದಾರೆ. ಸುಶಾಂತ್ ನಿಧನದ ಬಳಿಕ ನೆಪೋಟಿಸಂ ವಿಚಾರ ಭಾರೀ ಸದ್ದು ಮಾಡುತ್ತಿದ್ದು, ರಾಜ್ ಠಾಕ್ರೆ ಸಹ ದನಿಗೂಡಿಸಿದ್ದಾರೆ. ‘ಬಾಲಿವುಡ್ ಇಂಡಸ್ಟ್ರಿಯಲ್ಲಿ ಕಲಾವಿದರಿಗೆ ಈ ರೀತಿಯ ನೆಪೋಟಿಸಂನ ಅನುಭವ ಆದರೆ, ತಕ್ಷಣ ನಮ್ಮ ಪಕ್ಷದ ಗಮನಕ್ಕೆ ತನ್ನಿ. ನಮ್ಮ ಪಕ್ಷ ಅಂಥವರಿಗೆ ತಕ್ಕ ಪಾಠ ಕಲಿಸುತ್ತದೆ’ ಎಂದು ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಓಟಿಟಿ ವೇದಿಕೆಯತ್ತ ಪ್ರಿಯಾಂಕಾ ಉಪೇಂದ್ರ ‘ಸೇಂಟ್ ಮಾರ್ಕ್ಸ್ ರಸ್ತೆ’
ಇನ್ನು ನೆಪೋಟಿಸಂನ ಶಾಶ್ವತವಾಗಿ ನಿರ್ಮೂಲನೆ ಮಾಡುವ ಉದ್ದೇಶದಿಂದ ಸುಶಾಂತ್ ಕುಟುಂಬದಿಂದ ನೆಪೋಮೀಟರ್ ಹೆಸರಿನ ಆ್ಯಪ್ ಅಭಿವೃದ್ಧಿಪಡಿಸಲಾಗಿತ್ತು. ನೆಪೋಮೀಟರ್ ಆ್ಯಪ್ನಲ್ಲಿ ಒಟ್ಟು 5 ಕೆಟಗೆರಿ ಮಾಡಲಾಗಿದೆ. ಆ ಪೈಕಿ ನಿರ್ಮಾಪಕರು, ಮುಖ್ಯ ಪಾತ್ರಧಾರಿಗಳು, ಪೋಷಕ ಕಲಾವಿದರು, ನಿರ್ದೇಶಕರು, ಬರಹಗಾರರು. ಇದರಲ್ಲಿ ಅವರವರ ಹಿನ್ನೆಲೆಯನ್ನೂ ನೀಡಲಾಗುತ್ತಿದ್ದು, ಎಷ್ಟು ಪ್ರಮಾಣದಲ್ಲಿ ಹೊರಗಿನ ಕಲಾವಿದರನ್ನು, ತಾಂತ್ರಿಕ ವರ್ಗದವರನ್ನು ಬಳಸಿಕೊಂಡಿದ್ದಾರೆಂಬುದು ಗೊತ್ತಾಗುತ್ತದೆ.
ನೆಪೋಮೀಟರ್ ಆ್ಯಪ್ ಅಭಿವೃದ್ಧಿಪಡಿಸಿದ್ದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಸುಶಾಂತ್ ಸಿಂಗ್ಗೆ ಆದ ಸ್ಥಿತಿ ಇನ್ಯಾರಿಗೂ ಬರುವುದು ಬೇಡ ಎಂದು ನೆಟ್ಟಿಗರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್)