More

    ಶಾಸಕ ಎಸ್.ಆರ್.ವಿಶ್ವನಾಥ್ ವಿಚಾರಕ್ಕೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತೆಯರ ನಡುವೆ ಜಡೆ ಜಗಳ!

    ಬೆಂಗಳೂರು: ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ವಿಚಾರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತೆಯರು ಕಿತ್ತಾಡಿಕೊಂಡಿದ್ದಾರೆ. ಕಾಂಗ್ರೆಸ್​ ಕಾರ್ಯಕರ್ತೆ ಮಾಡಿದ್ದ ವಾಟ್ಸ್​ಆ್ಯಪ್​ ಮೆಸೇಜ್​ ಜಡೆ ಜಗಳಕ್ಕೆ ಕಾರಣವಾಗಿದ್ದು, ಎರಡೂ ಪಕ್ಷದ ಕಾರ್ಯಕರ್ತೆಯರು ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ.

    ಎಸ್​.ಆರ್​. ವಿಶ್ವನಾಥ್​ ಕುರಿತು ಬಿಜೆಪಿ ಮಹಿಳಾ ಕಾರ್ಯಕರ್ತರ ಮೊಬೈಲ್‌ಗೆ ಕಾಂಗ್ರೆಸ್​ ಕಾರ್ಯಕರ್ತೆ ಭಾಗ್ಯ ಮೆಸೇಜ್​ ಮಾಡಿದ್ದರು. ಅಭಿಮಾನಿಗಳ ಮುಂದೆ ಮಾತ್ರ ವಿಶ್ವನಾಥ್ ಪವರ್, ಆದರೆ, ವಿಶ್ವನಾಥ್​ನಿಂದ ನೊಂದಿರುವ ಭಾಗ್ಯಳ ಮುಂದೆ ಆತನ ಪವರ್ ಆಫ್ ಆಗುತ್ತದೆ. ಪವರ್ ಇಲ್ಲದಿರುವ ವಿಶ್ವನಾಥ್, ಈ ಭೂಮಿ ಮೇಲೆ ಇರುವುದಕ್ಕೆ ನಾನೇ ಕಾರಣ ಎಂದು ಪೋಸ್ಟರ್ ಹಾಕಿ ಭಾಗ್ಯ ಮೆಸೇಜ್​ ಮಾಡಿದ್ದರು.

    ಮೆಸೇಜ್ ಹಾಕಿದ ಕೂಡಲೇ ಭಾಗ್ಯ ವಿಳಾಸ ತಿಳಿದುಕೊಂಡು ಅವರ ಮನೆಯ ಬಳಿ ಬಿಜೆಪಿ ಕಾರ್ಯಕರ್ತರು ತೆರಳಿದ್ದಾರೆ. ಅನಿತಾ, ಲಕ್ಷ್ಮೀ, ವೀಣಾ, ಶಕುಂತಲಾ ಅರ್ಚನಾ ಮುಂತಾದ ಬಿಜೆಪಿ ಕಾರ್ಯಕರ್ತೆಯರು ಭಾಗ್ಯಾನ ಮೀಟ್ ಮಾಡಲು ಹೋಗಿದ್ದರು. ಈ ವೇಳೆ ನಮ್ಮ ಶಾಸಕನ ಬಗ್ಗೆ ಯಾಕೆ ಈ ರೀತಿ ಶಬ್ದ ಬಳಸ್ತಿದ್ಯಾ ಎಂದು ಕೇಳಿದ್ದು, ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಅಲ್ಲದೆ, ಎರಡೂ ಪಕ್ಷದ ಕಾರ್ಯಕರ್ತೆಯರು ಕೈ-ಕೈ ಮಿಲಾಯಿಸಿಕೊಂಡಿದ್ದಾರೆ.

    ಸದ್ಯ ಈ ಘಟನೆ ಸಂಬಂಧ ಯಲಹಂಕ ಠಾಣೆಗೆ ದೂರು ನೀಡಿರುವ ಬಿಜೆಪಿ ಕಾರ್ಯಕರ್ತೆಯರು ಭಾಗ್ಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

    ರವಿವರ್ಮ ಆಕ್ಷನ್​ನಲ್ಲಿ ವಿಜಯಾನಂದ; ವಿಂಗ್ ಕಮಾಂಡರ್ ಅಭಿನಂದನ್ ವೆಬ್​ಸರಣಿಯಲ್ಲಿ ಕನ್ನಡಿಗನ ಕಮಾಲ್

    ಬಾಲ್ಯಕ್ಕೆ ಸ್ಮಾರ್ಟ್​ಫೋನ್ ಕೊಳ್ಳಿ: ವಿಡಿಯೋ, ಗೇಮಿಂಗ್, ಸೋಷಿಯಲ್ ಮೀಡಿಯಾ ವ್ಯಸನ; ಶೇ.47 ಮಕ್ಕಳಲ್ಲಿ ಗೀಳು

    ಪತಿಯ ಸ್ನೇಹಿತನ ಜತೆ 2ನೇ ಮದುವೆಗೆ ತಯಾರಿ! ನಟಿ ಮೀನಾ ಕೊಟ್ಟ ಸ್ಪಷ್ಟನೆ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts