ಮೈಸೂರು: ಜೆಡಿಎಸ್ ದಳಪತಿಗಳ ನಡುವೆಯೇ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದ್ದ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ (ಮೈಮುಲ್) ಆಡಳಿತ ಮಂಡಳಿಯ 15 ನಿರ್ದೇಶಕ ಸ್ಥಾನಗಳಿಗೆ ಮಂಗಳವಾರ ಮತದಾನ ನಡೆಯಿತು.
ಆಲನಹಳ್ಳಿಯ ಕೆಎಂಎಫ್ ತರಬೇತಿ ಕೇಂದ್ರದ ಆವರಣದಲ್ಲಿ ಬೆಳಗ್ಗೆ 9ರಿಂದ 4 ಗಂಟೆಯವರೆಗೆ ಮತದಾನ ನಡೆಯಿತು. ಸಂಜೆ 4.30ರಿಂದ ಮತ ಎಣಿಕೆ ಕಾರ್ಯ ಆರಂಭವಾಗಿ ಫಲಿತಾಂಶ ಪ್ರಕಟಗೊಂಡಿದೆ.
ಜೆಡಿಎಸ್ ಒಂದು ಸ್ಥಾನಕ್ಕೆ ಸೀಮಿತ ಸಾಧನೆ ಮಾಡಿದರೆ, ಜೆಡಿಎಸ್- ಕಾಂಗ್ರೆಸ್ ಮೈತ್ರಿ ಮೂರು ಸ್ಥಾನಗಳಿಗೆ ಸೀಮಿತವಾಯಿತು. ಗೆದ್ದ ಇಬ್ಬರು ಕಾಂಗ್ರೆಸ್ ಬೆಂಬಲಿತರು, ಒಬ್ಬರು ಮಾತ್ರ ಜೆಡಿಎಸ್ ಅಭ್ಯರ್ಥಿಗಳು. ಉಳಿದ 12 ಸ್ಥಾನಗಳನ್ನು ಶಾಸಕ ಜಿಟಿ ದೇವೇಗೌಡ ಬೆಂಬಲಿಗರಾಗಿದ್ದಾರೆ.
ಇದನ್ನೂ ಓದಿ: ಬ್ಯಾಂಕ್ ಮುಷ್ಕರ; ಕೇಂದ್ರ ಸರ್ಕಾರದ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಖರ್ಗೆ
ಒಟ್ಟಾರೆ ಚುನಾವಣೆಯಲ್ಲಿ ಜಿಟಿಡಿ ಬಣಕ್ಕೆ ಮೇಲುಗೈಯಾಗಿದ್ದು, ಶಾಸಕ ಜಿ.ಟಿ.ದೇವೇಗೌಡ ಬಣ ಮೈಮುಲ್ ಗದ್ದುಗೆ ಏರಿದೆ. ಹುಣಸೂರು ಉಪವಿಭಾಗದಲ್ಲಿ ಎಂಟಕ್ಕೆ ಎಂಟೂ ಸ್ಥಾನಗಳನ್ನು ಶಾಸಕ ಜಿ.ಟಿ.ದೇವೇಗೌಡ ಬಣ ಗೆದ್ದಿದೆ. ಮೈಸೂರು ವಿಭಾಗದಲ್ಲಿ ಜಿಟಿಡಿ ತಂಡಕ್ಕೆ 4 ಸ್ಥಾನ ಲಭಿಸಿವೆ. ಖುದ್ದು ಎಚ್.ಡಿ.ಕೆ. ಪ್ರಚಾರ ಮಾಡಿದರೂ ಜೆಡಿಎಸ್ಗೆ ಗೆಲುವಿನ ಖುಷಿ ಲಭಿಸಲಿಲ್ಲ. ಸ್ವಪಕ್ಷದ ವಿರುದ್ಧವೇ ಶಾಸಕ ಜಿಟಿಡಿ ಗೆದ್ದಂತಾಗಿದೆ.
ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ರಚನೆಯಾದ ಬಳಿಕ ನಿರ್ದೇಶಕ ಸ್ಥಾನಗಳು ಕಡಿಮೆಯಾದ ಹಿನ್ನೆಲೆಯಲ್ಲಿ ಬೈಲಾ ತಿದ್ದುಪಡಿ ಮಾಡಿ ಆರು ಸ್ಥಾನಗಳನ್ನು ಹೆಚ್ಚಿಸಲಾಗಿದೆ. ಹೊಸದಾಗಿ ಮೈಸೂರು ಉಪ ವಿಭಾಗದಿಂದ 7 ಮತ್ತು ಹುಣಸೂರು ಉಪ ವಿಭಾಗಕ್ಕೆ 8 ಸ್ಥಾನಗಳು ಸೇರಿದಂತೆ ಒಟ್ಟು 15 ನಿರ್ದೇಶಕರ ಸ್ಥಾನಗಳಿವೆ. ಈ ಪೈಕಿ ಮಹಿಳೆಯರಿಗೆ ನಾಲ್ಕು ಸ್ಥಾನಗಳನ್ನು ಮೀಸಲಿರಿಸಲಾಗಿತ್ತು. ಎರಡೂ ವಿಭಾಗಗಳಿಂದ ಚುನಾವಣಾ ಕಣದಲ್ಲಿ ಒಟ್ಟು 29 ಸ್ಪರ್ಧಿಗಳಿದ್ದರು. 1047 ಮತದಾರರಿದ್ದರು.
ಸಿಡಿಯಲ್ಲಿರುವ ಹುಡುಗಿಗೆ ಈಗಾಗಲೇ ರಕ್ಷಣೆ ಸಿಕ್ಕಿದೆ: ಯಾರಿಂದ ಎಂಬುದನ್ನು ಎಚ್ಡಿಕೆ ಹೇಳಿದ್ರು ನೋಡಿ..