More

    ಅಯ್ಯಪ್ಪ ಭಕ್ತರಿದ್ದ ಮಿನಿಬಸ್ ಅಪಘಾತ, ಹಲವರಿಗೆ ಗಾಯ


    ಬೆಳ್ತಂಗಡಿ: ಮುಂಡಾಜೆ ಗ್ರಾಮದ ಮಂಗಳೂರು ವಿಲ್ಲುಪೂರ ರಾಷ್ಟ್ರೀಯ ಹೆದ್ದಾರಿಯ ಕಾಪು ಚಡಾವು ಉಳ್ಳಾಲ್ತಿ ಕಟ್ಟೆ ಬಳಿ ನಿಯಂತ್ರಣ ತಪ್ಪಿದ ಅಯ್ಯಪ್ಪ ಭಕ್ತರಿದ್ದ ಮಿನಿ ಬಸ್ ಶುಕ್ರವಾರ ಅಪಘಾತಕ್ಕೀಡಾಗಿ 18 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಐವರ ಸ್ಥಿತಿ ಗಂಭೀರವಿದೆ.

    ಬಳ್ಳಾರಿ ಜಿಲ್ಲೆಯ ಕೂಡ್ಲಗಿ ತಾಲೂಕಿನ ಚಿಕ್ಕಜೋಗಿಹಳ್ಳಿಯ 21ಮಂದಿ ಬಸ್‌ನಲ್ಲಿ ಶಬರಿಮಲೆಗೆ ಯಾತ್ರೆ ಹೊರಟಿದ್ದರು, ಕಾಪು ಚಡಾವು ಬಳಿ ಬಸ್‌ನ ಬ್ರೇಕ್ ವಿಫಲಗೊಂಡು ಅಪಘಾತ ಸಂಭವಿಸಿದೆ.
    ಘಟನೆಯಲ್ಲಿ ವೀರೇಶ್ ಆಚಾರ್ಯ(38),ಕೆ.ಎಸ್. ರಾಹುಲ್(6)ಗೌತಮ್(6)ಸುನೀಲ್ ನಾಯ್ಕ(33)ಜಲಂದರ್(25) ಎಂಬುವರು ಗಂಭೀರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಪಾಂಡುರಂಗ(25), ಶಶಿ ಕುಮಾರ್(25)ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ, ತನ್ಮಯಿ(9), ರಾಜು ನಾಯ್ಕ(42),ಮಂಜುನಾಥ್(29), ಎಂ.ಕೆ.ಸೋಮಶೇಖರ್(15), ವಿಕ್ರಮ್ (30), ಕಾರ್ತಿಕ್(27), ಜೆ.ಎಂ.ರಾಘು ನಾಯ್ಕ(30), ಲೋಕಪ್ಪ(40), ಅಜ್ಜಪ್ಪ(34),ಕರಿಯ ಗೌಡ(39) ಹಾಗೂ ಎನ್.ಕೆ.ಬಸವರಾಜ್(40) ಅವರನ್ನು ಕಕ್ಕಿಂಜೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
    ಅಪಘಾತದ ಮಾಹಿತಿ ತಿಳಿದೊಡನೆ ಆಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಿದವು. ಮುಂಡಾಜೆ ಗ್ರಾಪಂ ಸದಸ್ಯ ಗಣೇಶ ಬಂಗೇರ, ಜಗದೀಶ್ ನಾಯ್ಕ ಹಾಗೂ ಸಮಾಜಸೇವಕ ಸಚಿನ್ ಭಿಡೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts