ಝಾನ್ಸಿ: 38 ವರ್ಷ ವಯಸ್ಸಿನ ವಲಸೆ ಕಾರ್ಮಿಕರೊಬ್ಬರ ಮೃತದೇಹವು ಉತ್ತರ ಪ್ರದೇಶದ ಝಾನ್ಸಿ ರೈಲ್ವೆ ನಿಲ್ದಾಣ ರೈಲೊಂದರ ಟಾಯ್ಲೆಟ್ನಲ್ಲಿ ಗುರುವಾರ ಸಂಜೆ ಪತ್ತೆಯಾಗಿದೆ. ಮೂರು ದಿನಗಳವರೆಗೆ ಮೃತದೇಹ ರೈಲಿನಲ್ಲೇ ಇತ್ತು ಎನ್ನಲಾಗಿದ್ದು, ರೈಲು ಶುಚಿಗೊಳಿಸುವ ಸಿಬ್ಬಂದಿಯಿಂದ ಪ್ರಕರಣ ಬೆಳಕಿಗೆ ಬಂದಿದೆ.
ಇದನ್ನೂ ಓದಿ: 2ನೇ ಮದುವೆಯನ್ನು ಪ್ರಶ್ನಿಸಿದ ಪತ್ನಿ-ಮಗಳನ್ನೇ ಹಿಗ್ಗಾಮುಗ್ಗಾ ಥಳಿಸಿದ ಭೂಪ!
ಮೃತ ವ್ಯಕ್ತಿಯನ್ನು ಪೂರ್ವ ಉತ್ತರ ಪ್ರದೇಶದ ಬಾಸ್ತಿ ಜಿಲ್ಲೆಯ ನಿವಾಸಿ ಮೋಹನ್ ಲಾಲ್ ಶರ್ಮ ಎಂದು ಗುರುತಿಸಲಾಗಿದೆ. ಮುಂಬೈ ದಿನಗೂಲಿ ನೌಕರನಾಗಿದ್ದ ಶರ್ಮ ಲಾಕ್ಡೌನ್ನಿಂದ ಕೆಲಸವಿಲ್ಲದೇ ಮುಂಬೈ ತೊರೆದಿದ್ದ ಎಂದು ತಿಳಿದುಬಂದಿದೆ.
ಇತರೆ ಕಾರ್ಮಿಕರೊಂದಿಗೆ ಬಾಸ್ತಿಯಿಂದ 70 ಕಿ.ಮೀ ದೂರದಲ್ಲಿರುವ ಗೋರಖ್ಪುರ ತಲುಪಲು ಜಿಲ್ಲಾಡಳಿತ ಕಳಹಿಸಿದ್ದ ಟ್ರೈನ್ನಲ್ಲಿ ತವರಿಗೆ ಮರಳುತ್ತಿದ್ದರು. ಗೋರಖ್ಪುರವೇ ಅಂತಿಮ ನಿಲ್ದಾಣವಾಗಿತ್ತಾ ಎಂಬುದರ ಬಗ್ಗೆ ಇನ್ನು ಸ್ಪಷ್ಟವಿಲ್ಲ. ಶರ್ಮ ಮೇ 23ರಂದು ಹೇಗೋ ಝಾನ್ಸಿ ತಲುಪಿದ್ದ. ಮತ್ತೆ ಗೋರಖ್ಪುರಕ್ಕೆ ಹೋಗಿದ್ದ ಟ್ರೈನ್ ಬುಧವಾರ ಮರಳಿ ಝಾನ್ಸಿಗೆ ಬಂದಿತ್ತು. ಗುರುವಾರ ಟ್ರೈನ್ ಶುಚಿಗೊಳಿಸುವಾಗ ಶರ್ಮ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ: ಬಿಎಸ್ವೈ ನಮ್ಮ ಸಿಎಂ ಅಷ್ಟೇ, ನನ್ನ ನಾಯಕರು ವಾಜಪೇಯಿ, ಪ್ರಧಾನಿ ಮೋದಿ: ಬಸನಗೌಡ ಪಾಟೀಲ್ ಯತ್ನಾಳ್
ಕೆಲಸವಿಲ್ಲದೇ ಆತ ಊರಿಗೆ ಮರಳುತ್ತಿದ್ದ ಎಂಬುದನ್ನು ಊರಿನ ಮುಖ್ಯಸ್ಥ ಮಾಹಿತಿ ನೀಡಿದ್ದಾರೆ. ಶವವನ್ನು ಪರೀಕ್ಷೆ ನಡೆಸಿ ಕರೊನಾ ವೈರಸ್ ಸೋಂಕು ಇಲ್ಲದಿರುವುದನ್ನು ದೃಢಪಡಿಸಿಕೊಂಡು ಶವವವನ್ನು ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಳೆದ ಎರಡು ತಿಂಗಳಿಂದ ಸುಮಾರು 20 ಲಕ್ಷ ವಲಸೆ ಕಾರ್ಮಿಕರು ವಾಪಸ್ಸಾಗಿದ್ದು, ಅವರ ಆರೋಗ್ಯ ತಪಾಸಣೆಯೇ ಒಂದು ಸವಾಗಿದೆ. (ಏಜೆನ್ಸೀಸ್)