More

    ರೈತರ ಪರ ನಿಂತ ಮಿಯಾಗೆ ಊಟ ಪಾರ್ಸೆಲ್​! ಮತ್ತೆ ರೈತರ ಬಗ್ಗೆ ದನಿ ಎತ್ತಿದ ನೀಲಿತಾರೆ

    ವಾಷಿಂಗ್ಟನ್​: ಭಾರತದ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಟ್ರೋಲಿಗರ ಬಾಯಿಗೆ ಸಿಕ್ಕಿದ್ದ ನೀಲಿ ತಾರೆ ಮಿಯಾ ಖಲೀಫಾ ಇದೀಗ ಮತ್ತೊಮ್ಮೆ ರೈತರ ಪರ ದನಿ ಎತ್ತಿದ್ದಾರೆ. ಅಷ್ಟಕ್ಕೂ ಈ ಬಾರಿ ಏನಿದೆ ಅವರ ಮಾತು ಎಂದು ತಿಳಿಯಲು ಮುಂದೆ ಓದಿ.

    ಅಂದ ಹಾಗೆ ಭಾನುವಾರದಂದು ಮಿಯಾ ಖಾನ್​ಗೆ ಮಧ್ಯಾಹ್ನದ ವಿಶೇಷ ಊಟವನ್ನು ಭಾರತೀಯ ಮೂಲದ ಕೆನಡಿಯನ್​ ಕವಯಿತ್ರಿ ರೂಪಿ ಕೌರ್​ ಮಾಡಿದ್ದರಂತೆ. ಅದರ ವಿಡಿಯೋವನ್ನು ಮೊದಲು ಹಂಚಿಕೊಂಡಿದ್ದ ಮಿಯಾ ರೂಪಿಗೆ ಧನ್ಯವಾದ ತಿಳಿಸಿದ್ದರು. ಗುಲಾಬ್​ ಜಾಮೂನು, ಸಮೋಸ, ಆಲೂ ಕರಿ ಒಳಗೊಂಡಿದ್ದ ಭಾರತೀಯ ಊಟ ಅದಾಗಿತ್ತು. ಈ ವಿಡಿಯೋ ಹಂಚಿಕೊಂಡ ಸ್ವಲ್ಪ ಸಮಯದಲ್ಲೇ ಊಟದ ತಟ್ಟೆಯ ಮತ್ತೊಂದು ಫೋಟೋ ಹಂಚಿಕೊಂಡ ಮಿಯಾ “ರೈತರಿಗಾಗಿ ಕೂಗು” ಎಂದು ಬರೆದುಕೊಂಡಿದ್ದಾರೆ.

    ಈಗಾಗಲೇ ರೈತರ ಪರ ಧ್ವನಿ ಎತ್ತಿ, ಟ್ರೋಲ್​ಗೆ ಒಳಗಾಗಿದ್ದರೂ ನಾನು ನನ್ನ ಮಾತನ್ನು ಹಿಂಪಡೆಯುವುದಿಲ್ಲ ಎಂದು ಈ ಮೂಲಕ ಆಕೆ ಹೇಳಿಕೊಂಡಿದ್ದಾರೆ. ಮಿಯಾ ಅವರ ಈ ನಿಲುವಿಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೆ ಹಲವರು ಮತ್ತೆ ಕಾಲೆಳೆಯಲು ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಹಿಮ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆ; ಮೃತರ ಕುಟುಂಬಕ್ಕೆ ತಲಾ ಆರು ಲಕ್ಷ ರೂ. ಪರಿಹಾರ

    ಮಂಗಳಮುಖಿಯಾಗಿ ಬದಲಾದ ಡಬ್ಲ್ಯೂಡಬ್ಲ್ಯೂಇ ಸ್ಟಾರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts