More

    ನಟಿ ಕಂಗನಾ​ಗೆ ಕ್ರಿಕೆಟಿಗ ಮನೋಜ್​ ತಿವಾರಿ ಬೆಂಬಲ

    ನವದೆಹಲಿ: ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಬಳಿಕ ಬಾಲಿವುಡ್​ನಲ್ಲಿನ ಸ್ವಜನಪಕ್ಷಪಾತದ ಬಗ್ಗೆ ಆರೋಪಗಳನ್ನು ಮಾಡಿರುವ ನಟಿ ಕಂಗನಾ ರಣಾವತ್​ಗೆ ಕ್ರಿಕೆಟಿಗ ಮನೋಜ್​ ತಿವಾರಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸುಶಾಂತ್​ ಸಾವಿನ ಹಿಂದಿನ ಸತ್ಯ ಹೊರಬರಬೇಕೆಂದು ಹೇಳಿದ್ದಾರೆ.

    ಕಂಗನಾ ವಿರುದ್ಧ ಹೇಳಿಕೆಗಳನ್ನು ನೀಡುತ್ತಿರುವವರ ವಿರುದ್ಧ ಟ್ವಿಟರ್​ನಲ್ಲಿ ಕಿಡಿಕಾರಿರುವ ಬಂಗಾಳದ ಬ್ಯಾಟ್ಸ್​ಮನ್​ ಮನೋಜ್​ ತಿವಾರಿ, ಅವರೆಲ್ಲರೂ ತಮ್ಮ ಬಣ್ಣವನ್ನು ತಾವೇ ಬಯಲು ಮಾಡುತ್ತಿದ್ದಾರೆ ಎಂದಿದ್ದಾರೆ. ‘ಕಂಗನಾ ರಣಾವತ್​ ಮೇಲೆ ದಾಳಿ ಮಾಡುತ್ತಿರುವವರು ತಮ್ಮ ಬಣ್ಣವನ್ನು ತಾವೇ ಬಯಲು ಮಾಡುತ್ತಿದ್ದಾರೆ. ಆದರೆ ಕರ್ಮ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ. ನಿಮಗೆ ನಿಜಕ್ಕೂ ಅರ್ಹವಾದುದು ಏನೋ, ಅದು ಸಿಕ್ಕೇ ಸಿಗುತ್ತದೆ. ಸುಶಾಂತ್​ ಸಾವಿನ ಹಿಂದಿನ ಸತ್ಯ ತಿಳಿಯಬೇಕು’ ಎಂದು 34 ವರ್ಷದ ಮನೋಜ್​ ತಿವಾರಿ ಟ್ವೀಟಿಸಿದ್ದಾರೆ. ಅವರು ಭಾರತ ಪರ 12 ಏಕದಿನ ಮತ್ತು 3 ಟಿ20 ಪಂದ್ಯಗಳನ್ನು ಆಡಿದ್ದಾರೆ.

    ಇದನ್ನೂ ಓದಿ: ಕೊನೆಗೂ ಕಂಗನಾಗೆ ಸಮನ್ಸ್​ ಕೊಟ್ಟ ಮುಂಬೈ ಪೊಲೀಸ್

    ಮನೋಜ್​ ತಿವಾರಿ ಅವರು ಇಂಡಿಯಾ ವಾಂಟ್​ ಸುಶಾಂತ್​ ಟ್ರುತ್​ ಎಂಬ ಹ್ಯಾಷ್​​ಟ್ಯಾಗ್​ ಕೂಡ ಬಳಸುತ್ತಿದ್ದು, ಸ್ವಜನಪಕ್ಷಪಾತದ ಬಗೆಗಿನ ಚರ್ಚೆಯ ನಡುವೆ ಸುಶಾಂತ್​ ಸಾವಿನ ಹಿಂದಿನ ಸತ್ಯ ಮರೆಯಾಗಬಾರದು ಎಂದೂ ಮತ್ತೊಂದು ಟ್ವೀಟ್​ನಲ್ಲಿ ಹೇಳಿದ್ದಾರೆ. ಕಂಗನಾ ಮತ್ತು ಇತರರ ನಡುವಿನ ಕಾದಾಟ ಮುಂದುವರಿಯಬಹುದು. ಆದರೆ ಸದ್ಯದ ವಿಷಯದ ಮೇಲಿನ ಗಮನ ಬೇರೆಡೆಗೆ ಹೋಗುವುದು ಬೇಡ. ಕಂಗನಾಗೆ ಬೆಂಬಲ ನೀಡುವುದು ಸಾಧ್ಯವಾಗದೆ ಇದ್ದರೆ ಬಾಯಿ ಮುಚ್ಚಿಕೊಂಡಿರಿ ಎಂದು ಮನೋಜ್​ ತಿವಾರಿ ಹೇಳಿದ್ದಾರೆ.

    ಇದಲ್ಲದೆ ಡಿಜಿಟಲ್​ ಮಾಧ್ಯಮದ ಮೂಲಕ ಪ್ರತಿಭಟನೆ ನಡೆಸುತ್ತಿರುವ ಸುಶಾಂತ್​ ಸಿಂಗ್​ ರಜಪೂತ್ ಅಭಿಮಾನಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಮನೋಜ್​ ತಿವಾರಿ, ಕೇವಲ 5 ಗಂಟೆಗಳಲ್ಲಿ 1.11 ದಶಲಕ್ಷ ಟ್ವೀಟ್​ಗಳು ಬಂದಿರುವುದು ಅವರು ಎಷ್ಟು ಪ್ರೀತಿಸಲ್ಪಡುತ್ತಿದ್ದರು ಎಂಬುದನ್ನು ತೋರಿಸುತ್ತಿದೆ ಎಂದಿದ್ದಾರೆ.

    ಕಂಗನಾ ಇಷ್ಟೆಲ್ಲಾ ಮಾಡಿದ್ದು ತಮಾಷೆಗಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts