ಮಂಗಳೂರು: ಯಾವುದೇ ಉನ್ನತ ಹುದ್ದೆಯನ್ನು ಅಲಂಕರಿಸಿದರೂ ನಡೆದುಬಂದ ಹಾದಿಯನ್ನು ಮರೆಯಬಾರದು ಎಂಬ ಮಾತಿಗೆ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ತಾಜಾ ಉದಾಹರಣೆಯಾಗಿದ್ದಾರೆ.
ಈಗ ಕೋರ್ಟಿಗೆ ಬೇಸಿಗೆ ರಜೆ ಇರುವುದರಿಂದ ನಟರಾಜ್ ಅವರು ತವರಲ್ಲಿ ಬೀಡುಬಿಟ್ಟಿದ್ದಾರೆ. ಆರಾಮಾಗಿ ಕಳೆಯಬೇಕಿದ್ದ ಸಮಯವನ್ನು ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸದುಪಯೋಗಪಡಿಸಿಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲ ಮೂಲದ ನಟರಾಜ್ ಅವರು ಟಿಲ್ಲರ್ ಹಿಡಿದು ಭೂಮಿ ಉಳುಮೆ ಮಾಡುತ್ತಿರುವ ವಿಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ. ಆಯಕಟ್ಟಿನ ಹುದ್ದೆಯಲ್ಲಿದ್ದರೂ ತಮ್ಮ ಮೂಲವನ್ನು ಮರೆತಿಲ್ಲ ಎಂಬ ಮೆಚ್ಚುಗೆಯ ಮಾತುಗಳು ಅವರ ಕುರಿತು ಕೇಳಿಬರುತ್ತಿವೆ.
VIDEO | ಕರೊನಾ ಲಸಿಕೆ ಪಡೆದವರಿಗೆ ‘ದೇಶಭಕ್ತ’ ಎಂದು ಬ್ಯಾಡ್ಜ್ ನೀಡುತ್ತಿರುವ ಪೊಲೀಸರು!
ಕಾಂಗ್ರೆಸ್ಗೆ ಕೈಕೊಟ್ಟು ಬಿಜೆಪಿ ಸೇರಿದ ಮಾಜಿ ಸಚಿವ ಜಿತಿನ್ ಪ್ರಸಾದ
ಲಸಿಕೆ ವಧುವಿಗೆ ಲಸಿಕೆ ವರ: ಮ್ಯಾಟ್ರಿಮೋನಿ ಕಾಲಮ್ ನೋಡಿ ತಬ್ಬಿಬ್ಬಾದ ಸಂಸದ ಶಶಿ ತರೂರ್!