More

    ಕಾಂಗ್ರೆಸ್​​ಗೆ ಕೈಕೊಟ್ಟು ಬಿಜೆಪಿ ಸೇರಿದ ಮಾಜಿ ಸಚಿವ ಜಿತಿನ್​ ಪ್ರಸಾದ

    ನವದೆಹಲಿ : ಮಾಜಿ ಕೇಂದ್ರ ಸಚಿವ ಮತ್ತು ಎರಡು ಬಾರಿ ಕಾಂಗ್ರೆಸ್ ಸಂಸದರಾಗಿರುವ ಜಿತಿನ್ ಪ್ರಸಾದ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆಯನ್ನು ಎದುರಿಸಲಿರುವ ಉತ್ತರಪ್ರದೇಶದಲ್ಲಿ, ಇದು ಕಾಂಗ್ರೆಸ್​ ಪಕ್ಷಕ್ಕೆ ಭಾರೀ ಹೊಡೆತವಾಗಿದೆ.

    ಬಿಜೆಪಿ ಮುಖಂಡ ಹಾಗೂ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ದೆಹಲಿ ನಿವಾಸಕ್ಕೆ ಇಂದು ಬೆಳಿಗ್ಗೆ ಭೇಟಿ ನೀಡಿದ ಪ್ರಸಾದ, ಅಧಿಕೃತವಾಗಿ ಬಿಜೆಪಿ ಸೇರಿದರು. 2004 ರಲ್ಲಿ ಶಹಜಹಾನ್​ಪುರ್ ಮತ್ತು 2009 ರಲ್ಲಿ ಢೌರಾಹ್ರ ಲೋಕಸಭಾ ಕ್ಷೇತ್ರಗಳಿಂದ ಗೆದ್ದು ಬಂದಿದ್ದ ಜಿತಿನ್​ಪ್ರಸಾದ 2014 ರಲ್ಲಿ ಸೋಲನುಭವಿಸಿದ್ದರು.

    ಇದನ್ನೂ ಓದಿ: ನಕ್ಕರಾ ಸಿಎಂ ಸಾಹೇಬ್ರು… ಬಿಗಿಮೋರೆಯ ಮೊಗದಲ್ಲಿ ಚೆಂದದ ನಗು ಹರಿಸಿದ ಮಹಿಳೆ…

    ಕಾಂಗ್ರೆಸ್​ ಪಕ್ಷದಲ್ಲಿ ಸಂಘಟನಾತ್ಮಕ ಬದಲಾವಣೆಗಳಾಗಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದ ಜಿ23 ಮುಖಂಡರಲ್ಲಿ ಜಿತಿನ್​ ಪ್ರಸಾದ ಕೂಡ ಒಬ್ಬರಾಗಿದ್ದರು. (ಏಜೆನ್ಸೀಸ್)

    ಹಾಸನ, ಶಿವಮೊಗ್ಗಕ್ಕೆ ಸಿಎಂ ಯಡಿಯೂರಪ್ಪ ಪ್ರವಾಸ

    ಒಂದು ಹಣ್ಣಿಗೆ 1,000 ರೂ. ಬೆಲೆ ಬಾಳುವ ನೂರ್​ಜಹಾನ್ ಮಾವಿನಹಣ್ಣು!

    ನೂತನ ಜಿಲ್ಲಾಧಿಕಾರಿ ಗೌತಮ್ ಬಗಾದಿ ಅಧಿಕಾರ ಹಸ್ತಾಂತರಕ್ಕೂ ಬಾರದ ರೋಹಿಣಿ ಸಿಂಧೂರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts