More

    ಉಗ್ರ ಪರ ಬರವಣಿಗೆ ಪ್ರಕರಣ, ಶಾರಿಕ್ ಪ್ರಮುಖ ಆರೋಪಿ

    ಮಂಗಳೂರು: ಮಂಗಳೂರಿನ ಎರಡು ಕಡೆಗಳಲ್ಲಿ ಉಗ್ರ ಪರ ಗೋಡೆ ಬರಹ ಪ್ರಕರಣದಲ್ಲಿ ಮಹಮ್ಮದ್ ಶಾರಿಕ್ ಎಂಬಾತನೇ ಪ್ರಮುಖ ಆರೋಪಿ ಎನ್ನುವುದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
    ಬೆಂಗಳೂರಿನಲ್ಲಿದ್ದಾಗಲೇ ವಿದೇಶದಲ್ಲಿರುವ ವ್ಯಕ್ತಿಯೊಬ್ಬನಿಂದ ಬ್ರೈನ್‌ವಾಶ್‌ಗೊಳಗಾಗಿದ್ದು, ಜನರಲ್ಲಿ ಭೀತಿ ಮೂಡಿಸುವ ಕೃತ್ಯಗಳನ್ನು ನಡೆಸಲು ಪ್ರೇರಣೆ ಪಡೆದಿದ್ದ. ಅದರಂತೆ ತನ್ನೂರಿನವನೇ ಆದ ಮಾಝ್ ಮುನೀರ್ ಅಹ್ಮದ್‌ನನ್ನೂ ಸೇರಿಸಿಕೊಳ್ಳಲು ಮುಂದಾಗಿದ್ದ. ಆದರೆ ಮಾಝ್ ಈ ಕೃತ್ಯಗಳಿಗೆ ಸೇರಲು ಒಪ್ಪುತ್ತಿರಲಿಲ್ಲ. ಆದರೂ ಆತನನ್ನು ಒತ್ತಾಯಿಸಿದ ಶಾರಿಕ್ ಮೊದಲು ಕೋರ್ಟ್ ಆವರಣದಲ್ಲಿ ಉರ್ದುವಿನಲ್ಲಿ ಬರಹ ಬರೆದಿದ್ದ. ಆದರೆ ಅದು ಯಾರ ಗಮನಕ್ಕೂ ಬಾರದೆ, ಸುದ್ದಿಯಾಗಿರಲಿಲ್ಲ.

    ಆ ಬಳಿಕ ಮತ್ತೆ ಶಾರಿಕ್ ವಿದೇಶದಲ್ಲಿರುವ ವ್ಯಕ್ತಿಯನ್ನು ಸಂಪರ್ಕಿಸಿ ಮತ್ತಷ್ಟು ಸಂಚು ಹೂಡಿದ್ದ. ಅದರಂತೆ ನಗರದ ಸಿಸಿಟಿವಿ ಕ್ಯಾಮರಾ ಮತ್ತಿತರ ವಿಚಾರಗಳನ್ನು ತಿಳಿದುಕೊಂಡು, ಅಂತಿಮವಾಗಿ ಬಿಜೈನಲ್ಲಿ ಗೋಡೆ ಬರಹ ಬರೆಯಲು ಸಿದ್ಧತೆ ಮಾಡಿದ್ದ. ಆದರೆ ಅದಕ್ಕೂ ಬರಲು ಮಾಝ್ ಒಪ್ಪಿರದ ಕಾರಣ ಶಾರಿಕ್ ಮಾತ್ರವೇ ಹೋಗಿ ಬರೆದು ಬಂದಿದ್ದ. ಈ ವಿಚಾರ ಗಂಭೀರ ತಿರುವು ಪಡೆದದ್ದು ನೋಡಿ ಮಾಝ್ ಕಂಗಾಲಾಗಿದ್ದ, ತನ್ನ ಕುಟುಂಬಕ್ಕೂ ತಿಳಿಸಿದ್ದ ಎಂದು ಗೊತ್ತಾಗಿದೆ. ಈ ಪ್ರಕರಣಕ್ಕೆ ಪ್ರೇರಣೆ ನೀಡಿದ್ದ ಶಾರಿಕ್‌ನ ಬಂಧುವೊಬ್ಬನನ್ನೂ ಬಂಧಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

    ಇಂದು ಕೋರ್ಟ್‌ಗೆ ಹಾಜರು
    ಆರೋಪಿಗಳಿಬ್ಬರನ್ನು ಭಾನುವಾರ ಕೋವಿಡ್ ಟೆಸ್ಟ್‌ಗಾಗಿ ಪೊಲೀಸರ ವಶಕ್ಕೆ ನೀಡಲಾಗಿತ್ತು, ಅವರ ಕೋವಿಡ್ ವರದಿ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಡಿ.8ರಂದು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಆರೋಪಿಗಳ ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ಕಸ್ಟಡಿಗೆ ಕೇಳಲಿದ್ದಾರೆ ಎಂದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts