More

    ಯಾಕ್ರೀ ಕೀ ಕಿತ್ತುಕೊಳ್ತೀರಿ.. ನೀವೇನು ಬೈಕ್​ಗೆ ಬಂಡವಾಳ ಹಾಕಿದ್ದೀರಾ? ಪೊಲೀಸರಿಗೆ ಅವಾಜ್​ ಹಾಕಿದ ಭೂಪ!

    ಮಂಡ್ಯ: ಅನಾವಶ್ಯಕವಾಗಿ ಓಡಾಡುತ್ತಿದ್ದವರ ಬೈಕ್ ಕೀ ಕಿತ್ತುಕೊಂಡ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಪೊಲೀಸರನ್ನೇ ಪ್ರಶ್ನಿಸಿ ಅವಾಜ್ ಹಾಕಿದ ಘಟನೆ ಮಂಡ್ಯದ ನೂರಡಿ ರಸ್ತೆಯಲ್ಲಿ ನಡೆದಿದೆ.

    ಯಾಕ್ರೀ ಕೀ ಕಿತ್ತುಕೊಳ್ಳುತ್ತೀರಿ? ನೀವೇನು ಬೈಕ್​ಗೆ ಬಂಡವಾಳ ಹಾಕಿದ್ದೀರಾ? ಎಂದು ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿ ಪೊಲೀಸರನ್ನು ಪ್ರಶ್ನಿಸಿದರು. ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ಪೊಲೀಸರು ನೀನು ರಸ್ತೆಯಲ್ಲಿ ನಿಂತು ಕೆಲಸ ಮಾಡು ಬಾ ಗೊತ್ತಾಗುತ್ತದೆ ಎಂದರು.

    ಈ ವೇಳೆ ಪೊಲೀಸರು ಮತ್ತು ವ್ಯಕ್ತಿಯ ನಡುವೆ ವಾಗ್ವಾದ ನಡೆಯಿತು. ಈ ವೇಳೆಗೆ ಸ್ಥಳಕ್ಕೆ ಬಂದ ಮಂಡ್ಯ ಪಶ್ಚಿಮ ಠಾಣೆ ಪಿಎಸ್ಐ ವೆಂಕಟೇಶ್, ನೀನ್ಯಾಕೆ ಇಲ್ಲಿ ನಿಂತಿದ್ದೀಯಾ ಎಂದು ವ್ಯಕ್ತಿಯನ್ನು ಪ್ರಶ್ನಿಸುತ್ತಾರೆ. ಆಗಲೂ ತನ್ನ ಮಾತನ್ನು ಮುಂದುವರಿಸಿದ್ದಾಗ, ಆತನನ್ನು ಜೀಪ್​ಗೆ ಹತ್ತಿಸಿಕೊಂಡು ಪೊಲೀಸರು ಕರೆದೊಯ್ದರು.

    ನಿಮ್ಮ ಜೀವನ ಶೈಲಿಯನ್ನೇ ಬದಾಲಾಯಿಸುವಂತಹ ಕ್ರೀಡಾಪಟುವಿನ ಸ್ಫೂರ್ತಿದಾಯಕ ಕತೆಯಿದು..!

    ಜಿಂದಾಲ್​ಗೆ 3667 ಎಕರೆ ಭೂಮಿ ನೀಡುತ್ತಿರುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿದ ಬಿಜೆಪಿ ಶಾಸಕರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts