More

    ಕಂಠಪೂರ್ತಿ ಕುಡಿದ ದಂಪತಿ; ಬಾವಿಗೆ ಹಾರಿದ ಪತ್ನಿಯನ್ನು ರಕ್ಷಿಸಿ ಬಳಿಕ ಹತ್ಯೆಗೈದ ಪತಿ!

    ಛತ್ತೀಸ್​​ಗಢ್: ದಂಪತಿಗಳ ನಡುವೆ ಜಗಳ ಸರ್ವೆಸಾಮಾನ್ಯ. ಇಂದು ಕಿತ್ತಾಡಿ ನಾಳೆ ಒಂದಾಗುವ ಜೋಡಿಗಳ ಮಧ್ಯೆ ಇಲ್ಲೊಂದು ಜೋಡಿ ಪ್ರಾಣವನ್ನೇ ಕಳೆದುಕೊಂಡಿದೆ.

    ಆಶಾ ಬಾಯಿ ಮೃತ ಮಹಿಳೆ. ಆರೋಪಿ ಪತಿ ಹೆಸರು ಶಂಕರ್​ ರಾಮ್.​ ಛತ್ತೀಸ್​ಗಢ್​​ನ ಜಶ್​ಪುರ್​ ಜಿಲ್ಲೆಯಲ್ಲಿ ಪತಿ ತನ್ನ ಪತ್ನಿಯನ್ನು ಹತ್ಯೆಗೈದಿದ್ದಾನೆ. ಲೈಂಗಿಕ ಕ್ರಿಯೆಗೆ ಬರುವಂತೆ ಆಕೆಯನ್ನು ಕೇಳಿದ್ದಕ್ಕೆ, ಅವಳು ಒಪ್ಪಲಿಲ್ಲ ಎಂಬ ಕಾರಣಕ್ಕೆ ಕೊಂದಿದ್ದಾನೆ.

    ಇದನ್ನೂ ಓದಿ: 77 ವರ್ಷದ ಬಳಿಕ ಗ್ರಾಮಕ್ಕೆ ಭೇಟಿ ಕೊಟ್ಟ 98 ವರ್ಷದ ವೃದ್ಧ!; ಮುಂದೆ ಆಗಿದ್ದೇನು?
    ದಂಪತಿ ರಾತ್ರಿ ಕಂಠಪೂರ್ತಿ ಮದ್ಯಪಾನ ಮಾಡಿದ ಬಳಿಕ ನಿದ್ದೆ ಮಾಡಲು ರೂಮ್​​ಗೆ ಹೋಗಿದ್ದಾರೆ. ಆಗ ಶಂಕರ್​ ರಾಮ್​ ತನ್ನ ಪತ್ನಿಯನ್ನು ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡಿದ್ದಾನೆ. ಆದರೆ ಆಶಾ ಬಾಯಿ ಒಪ್ಪಲಿಲ್ಲ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಕುಡಿದ ಅಮಲು, ಕೋಪದಲ್ಲಿದ್ದ ಆಶಾ ಬಾಯಿ ಹೋಗಿ ಬಾವಿಗೆ ಹಾರಿದ್ದಾಳೆ.

    ಪತಿ ರಾಮ್​ ಆಶಾಳನ್ನು ಬಾವಿಯಿಂದ ಮೇಲೆತ್ತಿ ಕರೆದುಕೊಂಡು ಬಂದು ಮತ್ತೆ ಲೈಂಗಿಕ ಕ್ರಿಯೆ​ಗಾಗಿ ಜಗಳ ತೆಗೆದಿದ್ದಾನೆ. ಶಂಕರ್​ ರಾಮ್ ಆಕೆಯ ಖಾಸಗಿ ಭಾಗದ ಮೇಲೆಯೇ ಹಲ್ಲೆ ಮಾಡಿ, ಕೊಂದಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ಶಂಕರ್​​ನನ್ನು ಅರೆಸ್ಟ್ ಮಾಡಿದ್ದಾರೆ.

    ಜೆಡಿಎಸ್ ಸೇರ್ಪಡೆಗೊಂಡ ಆಯನೂರು ಮಂಜುನಾಥ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts