ಬೆಂಗಳೂರು: ಕುಡಿದ ಅಮಲಿನಲ್ಲಿ ಹಣದ ವಿಚಾರಕ್ಕೆ ಕಿರಿಕ್ ಆಗಿದ್ದು ಸ್ನೇಹಿತನ ಮೇಲೆ ಮಚ್ಚಿನಿಂದ ಈತ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.
ಈ ಘಟನೆ ಹೊಸಕೋಟೆ ತಾಲೂಕಿನ ಸೂಲಿಬೆಲೆ ಗ್ರಾಮದಲ್ಲಿ ನಡೆದಿದ್ದು ಬಸವರಾಜ್ ಎಂಬಾತನ ಮೇಲೆ ಹಲ್ಲೆ ಆರೋಪ ಇದ್ದು ನಂಜೇಗೌಡ ಎಂಬಾತನನ್ನು ಸಂತ್ರಸ್ತ ಎಂದು ಗುರುತಿಸಲಾಗಿದೆ.
ಯುವಕ ನಂಜೇಗೌಡ, ಹಲ್ಲೆಯಿಂದಾಗಿ ಗಂಭೀರವಾಗಿ ಗಾಯಗೊಂಡು ಆಸ್ವತ್ರೆ ಪಾಲಾಗಿದ್ದಾರೆ. ಇಬ್ಬರೂ ಈ ಹಿಂದೆ ಉತ್ತಮ ಸ್ನೇಹಿತರಾಗಿದ್ದು ಇತ್ತೀಚೆಗೆ ಹಣದ ವಿಚಾರದಿಂದಾಗಿ ಬೇರ್ಪಟ್ಟಿದ್ದರು. ದುಡ್ಡಿನ ವಿಚಾರದಿಂದಾಗಿ ಗೆಳೆಯರ ನಡುವೆ ಕಿರಿಕ್ ಉಂಟಾಗುತ್ತಿತ್ತು. ಇದೇ ರೀತಿ ಈ ರಾತ್ರಿಯೂ ನಂಜೇಗೌಡ ಎಣ್ಣೆ ಪಾರ್ಟಿ ಮಾಡುತ್ತಿದ್ದ ವೇಳೆ ಬಸವರಾಜ್ ಬಂದು ದಾಳಿ ಮಾಡಿದ್ದಾನೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಲಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.