More

    ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿ ಮುಖಕ್ಕೆ ಆ್ಯಸಿಡ್​ ಎರಚಿದ ದುರುಳ

    ಲಖನೌ: ತನ್ನನ್ನು ಮದುವೆಯಾಗಲು ನಿರಾಕರಿಸಿದಳು ಎಂಬ ಕಾರಣಕ್ಕೆ ದುರುಳನೋರ್ವ ಯುವತಿಯ ಮುಖದ ಮೇಲೆ ಆ್ಯಸಿಡ್​ ಎರಚಿ ವಿಕೃತಿ ಮೆರೆದಿರುವ ಘಟನೆ ಉತ್ತರಪ್ರದೇಶದ ಅಯೋಧ್ಯೆಯ ಹೈದರ್​ಗಂಜ್​ ಎಂಬ ಪ್ರದೇಶದಲ್ಲಿ ನಡೆದಿದೆ.

    ಆ್ಯಸಿಡ್​ ದಾಳಿಗೊಳಗಾದ 20 ವರ್ಷದ ಯುವತಿ ಸ್ಥಿತಿ ಗಂಭೀರವಾಗಿದ್ದು, ಆಕೆಯನ್ನು ಲಖನೌನಲ್ಲಿರುವ ಟ್ರಾಮಾ ಸೆಂಟರ್​ನಲ್ಲಿ ದಾಖಲಿಸಲಾಗಿದೆ. ಆರೋಪಿ ರಾಜ್​ಕರಣ್​ ಶರ್ಮಾ(25)ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಅಯೋಧ್ಯೆ ರೇಂಜ್​ ಇನ್ಸ್​ಪೆಕ್ಟರ್​ ಜನರಲ್​ ಪ್ರವೀಣ್​ ಕುಮಾರ್​ ಆರೋಪಿ ಯುವಕ ಹಾಗೂ ಗಾಯಾಳು ಯುವತಿ ಕುಟುಂಬಗಳು ಇನಾಯತ್​ ನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದವು. ರಾಜ್​ಕಿರಣ್​ ಹಾಗೂ ಯುವತಿಗೆ ಮದುವೆ ನಿಶ್ವಯ ಮಾಡಲಾಗಿತ್ತಾದರೂ ಕಾರಣಾಂತರತಗಳಿಂದ ಮುರಿದು ಬಿದ್ದಿತ್ತು.

    ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿ ಮುಖಕ್ಕೆ ಆ್ಯಸಿಡ್​ ಎರಚಿದ ದುರುಳ

    ಇದನ್ನೂ ಓದಿ: ಬಿಜೆಪಿ ಶಾಸಕನ ಹೆಸರಿನಲ್ಲಿ ನಕಲಿ ಖಾತೆ ಸೃಜಿಸಿ ಮಹಿಳೆಯರಿಗೆ ಮೆಸೇಜ್; ಆರೋಪಿ ಸೆರೆ

    ಇದರಿಂದ ತೀವ್ರವಾಗಿ ಕುಪಿತಗೊಂಡಿದ್ದ ಆರೋಪಿಯು ಸೋಮವಾರ ತಡರಾತ್ರಿ ಯುವತಿಯ ಮನೆಗೆ ನುಗ್ಗಿ ಎಲ್ಲರೂ ಗಾಢನಿದ್ರೆಯಲ್ಲಿರುವಾಗ ಆಕೆಯ ಮುಖದ ಮೇಲೆ ಆ್ಯಸಿಡ್​ ಎರಚಿ ಪರಾರಿಯಾಗಿದ್ದಾನೆ. ವಿಚಾರ ತಿಳಿದು ಕಾರ್ಯಪ್ರವೃತ್ತರಾದ ಅಧಿಕಾರಿಗಳ ತಂಡ ಆರೋಪಿಯನ್ನು ಘಟನೆ ನಡೆದ 24 ಘಂಟೆಯೊಳಗೆ ಬಂಧಿಸಿದ್ದಾರೆ.

    ಯುವತಿ ಸ್ಥಿತಿ ಗಂಭಿರವಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿಯನ್ನು ಮುಂದಿನ ಎರಡ್ಮೂರು ದಿನಗಳಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು. 15-20 ದಿನದೊಳಗೆ ಆರೋಪಿಗೆ ಶಿಕ್ಷೆಯಾಗಲಿದೆ ಎಂದು ಅಯೋಧ್ಯೆ ರೇಂಜ್​ ಇನ್ಸ್​ಪೆಕ್ಟರ್​ ಜನರಲ್​ ಪ್ರವೀಣ್​ ಕುಮಾರ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts