ಭುವನೇಶ್ವರ(ಒಡಿಶಾ): ಅಂಗುಲ್ನಲ್ಲಿ ವ್ಯಕ್ತಿಯೊಬ್ಬ ಕಾಡಾನೆಯ ಬಾಲವನ್ನು ಎಳೆಯುವ ಮೂಲಕ ಪ್ರಚೋದಿಸಿದ್ದು, ವಿಡಿಯೋ ವೈರಲ್ ಆದ ನಂತರ ಆತನನ್ನು ಬಂಧಿಸಲಾಗಿದೆ
ಇದನ್ನೂ ಓದಿ: 12ವರ್ಷದ ಬಾಲೆಗೆ 21ಲಕ್ಷ ರೂ.ಬಹುಮಾನ – ಅಮೆರಿಕಾದ ಭಾರತೀಯ ಮೂಲದ ಈ ಪೋರಿ ಆವಿಷ್ಕರಿಸಿದ್ದು ಹೈಸ್ಪೀಡ್ ಸ್ಮೋಕ್ ಡಿಟೆಕ್ಟರ್!
ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ನಂತರ ಒಡಿಶಾದ ಅಂಗುಲ್ ಜಿಲ್ಲೆಯಲ್ಲಿ ಕಾಡು ಆನೆಯ ಬಾಲವನ್ನು ಎಳೆಯುವ ಮೂಲಕ ಜನರ ಮೇಲೆ ದಾಳಿ ಮಾಡಲು ಪ್ರೇರೇಪಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ. ಘಟನೆಯು ನ. 5ರಂದು ನಡೆದಿತ್ತು.
ಆನೆ ಗದ್ದೆಯಲ್ಲಿ ನಿಂತಿದ್ದಾಗ ಸ್ಥಳೀಯರು ಅದನ್ನು ಸುತ್ತುವರಿದಿದ್ದರು. ಆಗ ಆರೋಪಿಯು ಅದರ ಬಾಲವನ್ನು ಎಳೆದು ಜನರ ಕಡೆಗೆ ಬರುವಂತೆ ಪ್ರೇರೇಪಿಸಿದ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಇದಾದ ಬಳಿಕ ಆರೋಪಿ ದೀಪಕ್ ಸಾಹುವನ್ನು ಬಂಧಿಸಲಾಗಿದೆ. ಅರಣ್ಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಸುಶಾಂತ್ ನಂದಾ, “ಹಮಾರಿ ನೋ ಟಾಲರೆನ್ಸ್ ನಹೀ ಹೈ… ಯಾ ತೋ ಹಾಥಿ ಅಪಕ್ ಕುಚಲ್ ದೇಗಾ ಯಾ ಹಮಾರೆ ಕಾನುನ್ (ಇಚ್ಚಾ) ಕೋ ಕುಚಲ್ ದೇಂಗೆ” ಎಂದು X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದರರ್ಥ “ನಮಗೆ ಸಹಿಷ್ಣುತೆ ಇಲ್ಲ… ಒಂದೋ ಮೊಂಡುತನದ ಜನರು ಇಂತಹ ಕೆಲಸಗಳನ್ನು ಮಾಡಲು ಸಾಧ್ಯ. ಅವರು ನಮ್ಮ ಕಾನೂನನ್ನು (ವಿಲ್) ಪುಡಿಮಾಡುತ್ತಿದ್ದಾರೆ.”