ತಿರುವನಂತಪುರಂ: ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ವಿಚಾರವಾಗಿ 2015ರ ಜನವರಿಯಲ್ಲಿ ಟೆನ್ನಿಸ್ ತಾರೆ ಮರಿಯಾ ಶರಪೋವಾ ನೀಡಿದ್ದ ಹೇಳಿಕೆಗೆ ನೆಟ್ಟಿಗರು ವಿರೋಧ ವ್ಯಕ್ತಪಡಿಸಿ, ನಿಂದಿಸಿದ್ದರು. ಅದರಲ್ಲೂ ವಿಶೇಷವಾಗಿ ಬಹುತೇಕ ಕೇರಳಿಗರೇ ಶರಪೋವಾರನ್ನು ಟಾರ್ಗೆಟ್ ಮಾಡಿದ್ದರು. ಇದೀಗ ಅದೇ ನೆಟ್ಟಿಗರು ಶರಪೋವಾರ ಫೇಸ್ಬುಕ್ ಖಾತೆಗೆ ತೆರಳಿ ಕ್ಷಮೆಯಾಚಿಸುತ್ತಿದ್ದಾರೆ.
ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಯಾರೆಂದು ನನಗೆ ತಿಳಿದಿಲ್ಲ ಎಂದು 2015ರಲ್ಲಿ ಮರಿಯಾ ಹೇಳಿದ್ದರು. ಇದರ ಬೆನ್ನಲ್ಲೇ ಆಕೆಯ ಮೇಲೆ ಮುಗಿಬಿದ್ದ ನೆಟ್ಟಿಗರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದರು. ಈ ಘಟನೆ ಆರು ವರ್ಷಗಳ ಹಿಂದೆ ನಡೆದಿತ್ತು. ಇದೀಗ ಅದೇ ವಿಚಾರ ಮತ್ತೊಮ್ಮೆ ಪ್ರಚಲಿತಕ್ಕೆ ಬಂದಿದೆ. ಅದಕ್ಕೂ ಸಚಿನ್ ಅವರೇ ಕಾರಣರಾಗಿದ್ದಾರೆ.
ಪಾಪ್ ಗಾಯಕಿ ರಹಾನ ಟ್ವೀಟ್ ಬಳಿ ರೈತರ ಪ್ರತಿಭಟನೆ ಅಂತಾರಾಷ್ಟ್ರಿಯ ಗಮನಸೆಳೆದಿದ್ದು, ದೆಹಲಿಯ ಕೆಲವು ಭಾಗದಲ್ಲಿ ಅಂತರ್ಜಾಲ ಸ್ಥಗಿತಗೊಳಿಸಿರುವುದಕ್ಕೆ ಪರ-ವಿರೋಧ ಚರ್ಚೆ ವ್ಯಕ್ತವಾಗುತ್ತಿರುವ ನಡುವೆಯೇ ಬುಧವಾರ ಟ್ವೀಟ್ ಮಾಡಿದ್ದ ಸಚಿನ್, ಭಾರತದ ಸಾರ್ವಭೌಮತ್ವವನ್ನು ರಾಜಿ ಮಾಡಲಾಗುವುದಿಲ್ಲ. ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಬಹುದು ಆದರೆ ಭಾಗವಹಿಸುವವರಲ್ಲ. ಭಾರತೀಯರಿಗೆ ಭಾರತ ತಿಳಿದಿದೆ ಮತ್ತು ಭಾರತ ಬಗ್ಗೆ ಅವರೇ ನಿರ್ಧರಿಸುತ್ತಾರೆ. ರಾಷ್ಟ್ರದ ಒಗ್ಗಟ್ಟಾಗಿ ಉಳಿದುಕೊಳ್ಳೋಣ ಎಂದು ಕೇಂದ್ರ ಸರ್ಕಾರ ನೀಡಿದ್ದ #IndiaTogether ಮತ್ತು #IndiaAgainstPropaganda ಎಂಬ ಹ್ಯಾಷ್ಟ್ಯಾಗ್ ಹಾಕಿ ಬರೆದುಕೊಂಡಿದ್ದರು.
ಇದೀಗ ಮರಿಯಾ ಶರಫೋವಾ ಫೇಸ್ಬುಕ್ ಪೇಜ್ ಹುಡುಕಿಕೊಂಡು ಹೋಗಿರುವ ಕೇರಳದ ನೆಟ್ಟಿಗರು, ಆಕೆಗೆ ಕ್ಷಮೆಯಾಚಿಸಿ ಸಾಲು ಸಾಲು ಟ್ವೀಟ್ ಮಾಡುತ್ತಿದ್ದಾರೆ. ಪ್ರೀತಿಯ ಮರಿಯಾ, ಸಚಿನ್ ಹೆಸರಿನಲ್ಲಿ ನಿಮ್ಮ ಮೇಲೆ ನಾವು ಮಾಡಿದ ಸೈಬರ್ ದಾಳಿಗೆ ಕ್ಷಮೆ ಇರಲಿ ಎಂದು ನೆಟ್ಟಿಗನೊಬ್ಬರ ಕಮೆಂಟಿಸಿದ್ದಾರೆ.
ಅಂದು ಪಕ್ವತೆ ಇಲ್ಲದೆ ನಾನು ಕೆಲವೊಂದು ಕಾಮೆಂಟ್ಗಳನ್ನು ಸಚಿನ್ ಪರವಾಗಿ ಮಾಡಿ ನಿಮ್ಮನ್ನು ನಿಂದಿಸಿದೆ. ನನ್ನ ಕ್ಷಮಿಸಿ ಮರಿಯಾ ಎಂದು ಮತ್ತೊಬ್ಬ ನೆಟ್ಟಿಗ ಟ್ವಿಟಿಸಿದ್ದಾರೆ. ಸಚಿನ್ ಗೊತ್ತಿಲ್ಲ ಎಂದು ನಾವೆಲ್ಲ ನಿಮ್ಮನ್ನು ನಿಂದಿಸಿದೆವು. ಸಚಿನ್ರನ್ನು ತಿಳಿಯದಿರುವುದೇ ಉತ್ತಮ ಎಂದು ಇನ್ನೋರ್ವ ನೆಟ್ಟಿಗ ಹೇಳಿದ್ದಾನೆ. ಹೀಗೆ ಅನೇಕ ಮಂದಿ ಶರಪೋವಾರ ಬಳಿ ಕ್ಷಮೆಯಾಚಿಸಿ ರೈತರ ಪ್ರತಿಭಟನೆಗೆ ನಿಲ್ಲಲಿಲ್ಲ ಎಂದು ಆರೋಪಿಸಿ ಸಚಿನ್ ನಡೆಯನ್ನು ಖಂಡಿಸಿದ್ದಾರೆ.
ಕೊನೆಯಲ್ಲಿ ನೆಟ್ಟಿಗನೊಬ್ಬ ವಯನಾಡಿಗೆ ಪ್ರವಾಸ ಮಾಡುವಂತೆ ಕೇಳಿಕೊಂಡಿದ್ದು, ಮೋಜಿನ ವಾಸ್ತವ್ಯಕ್ಕಾಗಿ ಎಲ್ಲಾ ವ್ಯವಸ್ಥೆಗಳನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ. (ಏಜೆನ್ಸೀಸ್)
ಫ್ರೆಂಡ್ಸ್ ಜತೆ ಡ್ಯಾನ್ಸ್ ಮಾಡಲು ಗಂಡನ ಒತ್ತಾಯ: ನಾಲ್ಕನೇ ಬಾರಿ ಕೈಕೊಟ್ಟ ಅದೃಷ್ಟ, ಮಹಿಳೆ ದುರಂತ ಸಾವು!
ಮಾಜಿ ಪ್ರಿಯಕರನನ್ನು ಇನ್ನೊಂದು ಬಾರಿ ತಬ್ಬಿಕೊಳ್ಳಬಹುದೇ?: ವರನನ್ನು ಕೇಳಿದ ವಧುವಿನ ಗತಿ ಏನಾಯ್ತು?
ಅತ್ತ ಅಮೆರಿಕದಲ್ಲಿ ಟೆಕ್ಕಿ ಪತಿ ವಾಸ: ಇತ್ತ ಮಗಳ ಜತೆ ಮಹಿಳೆ ನೇಣಿಗೆ ಶರಣಾಗಿದ್ದೇಕೆ?