ಮುಂಬೈ: 3ಡಿಯಲ್ಲಿ ನಿರ್ಮಾಣವಾಗುತ್ತಿರುವ ‘ರಾಮಾಯಣ’ದಲ್ಲಿ ಮಹೇಶ್ ಬಾಬು ರಾಮನ ಪಾತ್ರ ಮಾಡುತ್ತಿರುವ ವಿಷಯ ಗೊತ್ತು ತಾನೇ? ಗೊತ್ತಿಲ್ಲದಿದ್ದರೆ ಕೇಳಿ. ನಿರ್ಮಾಪಕ ಮಧು ಮಂಟೇನಾ ಬಾಲಿವುಡ್ನಲ್ಲೊಂದು ‘ರಾಮಾಯಣ’ ನಿರ್ಮಿಸುವುದಕ್ಕೆ ಮುಂದಾಗಿದ್ದಾರೆ. ರಾಮನ ಪಾತ್ರಕ್ಕೆ ಮಹೇಶ್ ಬಾಬು, ಸೀತೆಯ ಪಾತ್ರಕ್ಕೆ ದೀಪಿಕಾ ಪಡುಕೋಣೆ ಮತ್ತು ರಾವಣನ ಪಾತ್ರಕ್ಕೆ ಅವರು ಹೃತಿಕ್ ರೋಶನ್ ಅವರನ್ನು ಫಿಕ್ಸ್ ಮಾಡಿದ್ದರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಚಿತ್ರವು 2022ರಲ್ಲಿ ಪ್ರಾರಂಭವಾಗಬೇಕಿತ್ತು. ಇದೀಗ, ಆ ಚಿತ್ರದಿಂದ ಮಹೇಶ್ ಬಾಬು ಹೊರಬಂದಿರುವ ಸುದ್ದಿ ಇದೆ.
ಇದನ್ನೂ ಓದಿ: ಎರಡು ಮನೆಗಳನ್ನು ಮಾರಿದ್ರಂತೆ ಪ್ರಿಯಾಂಕಾ ಚೋಪ್ರಾ!
ಹೌದು, ‘ರಾಮಾಯಣ’ ಚಿತ್ರದಿಂದ ಮಹೇಶ್ ಬಾಬು ಹೊರಬಂದಿರುವ ವಿಷಯ ಇದೀಗ ಕೇಳಿಬಂದಿದೆ. ಚಿತ್ರದಲ್ಲಿ ನಟಿಸುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದ ಮಹೇಶ್, ಇದ್ದಕ್ಕಿದ್ದಂತೆ ಬ್ಯಾಕ್ಔಟ್ ಆಗಿದ್ದು ಏಕೆ ಎಂಬ ಪ್ರಶ್ನೆ ಬರಬಹುದು. ಅದಕ್ಕೂ ಕಾರಣವಿದೆ. ಆ ಕಾರಣ, ರಾಜಮೌಳಿ ಎಂದು ಹೇಳಲಾಗುತ್ತಿದೆ.
ರಾಜಮೌಳಿಗೂ, ಮಹೇಶ್ ಬಾಬು ಚಿತ್ರದಿಂದ ಹೊರಬರುವುದಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಸಹಜ. ಎಲ್ಲರಿಗೂ ಗೊತ್ತಿರುವಂತೆ, ‘ಆರ್ಆರ್ಆರ್’ ಚಿತ್ರದ ನಂತರ ಮಹೇಶ್ ಬಾಬು ಅಭಿನಯದ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ರಾಜಮೌಳಿ ಈಗಾಗಲೇ ಹೇಳಿಕೊಂಡಿದ್ದಾರೆ. ‘ಆರ್ಆರ್ಆರ್’ ಚಿತ್ರವು ಅಕ್ಟೋಬರ್ 13ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಿ, ಮುಂದಿನ ವರ್ಷದಿಂದ ಮಹೇಶ್ ಬಾಬು ಜತೆಗಿನ ಹೊಸ ಚಿತ್ರ ಪ್ರಾರಂಭವಾಗಲಿದೆಯಂತೆ.
‘ರಾಮಾಯಣ’ ಮತ್ತು ರಾಜಮೌಳಿ ನಿರ್ದೇಶನದ ಚಿತ್ರವು ಒಂದೇ ಕಾಲಕ್ಕೆ ಚಿತ್ರೀಕರಣ ಶುರುವಾಗಬೇಕಿರುವುದರಿಂದ, ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ಮಹೇಶ್ ಬಾಬುಗೆ ಎದುರಾಯಿತಂತೆ. ರಾಜಮೌಳಿ ನಿರ್ದೇಶನದಲ್ಲಿ ಕೆಲಸ ಮಾಡುವುದೇ ಅದೃಷ್ಟ ಎಂಬ ನಂಬಿಕೆ ಚಿತ್ರರಂಗದ ವಲಯದಲ್ಲಿ ಇರುವುದರಿಂದ, ಮಹೇಶ್ ಬಾಬು ಸಹಜವಾಗಿಯೇ ‘ರಾಮಾಯಣ’ ಚಿತ್ರವನ್ನು ರಾಜಮೌಳಿ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಬ್ಲೂ ಫಿಲ್ಮ್ ವಿಚಾರ ಶಿಲ್ಪಾಗೆ ಗೊತ್ತಿತ್ತಾ? ಪೊಲೀಸರಿಂದ ವಿಚಾರಣೆ- ಕುಂದ್ರಾಗೆ 27ರವರೆಗೆ ಜೈಲು
‘ರಾಮಾಯಣ’ ಚಿತ್ರದಿಂದ ಮಹೇಶ್ ಬಾಬು ಹೊರಬಂದಿರುವುದರಿಂದ, ಇದೀಗ ಚಿತ್ರತಂಡದವರು ರಾಮನ ಪಾತ್ರಕ್ಕೆ ಇನ್ನೊಬ್ಬ ಸೂಕ್ತ ಪಾತ್ರಧಾರಿಯ ಹುಡುಕಾಟದಲ್ಲಿದ್ದು, ರಾಮನಾಗಿ ಯಾರು ನಟಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಈ ಬಾರಿ ‘ಬಿಗ್ ಬಾಸ್’ನ ನಿರೂಪಣೆಯ ಜವಾಬ್ದಾರಿ ಕರಣ್ ಜೋಹರ್ ಹೆಗಲಿಗೆ …