More

    ಅನಾರೋಗ್ಯದ ನಡುವೆಯೂ ಆಡಿ ಆರ್​ಸಿಬಿ ಗೆಲುವಿನ ರೂವಾರಿ ಎನಿಸಿದ ಮೊಹಮದ್​ ಸಿರಾಜ್!​

    ಬೆಂಗಳೂರು: ಗುಜರಾತ್​ಗೆ ಆರಂಭದಲ್ಲೇ ಆಘಾತ ನೀಡುವ ಮೂಲಕ ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ವೇಗಿ ಮೊಹಮದ್​ ಸಿರಾಜ್​ (29ಕ್ಕೆ 2), ಅನಾರೋಗ್ಯದ ನಡುವೆ ಪಂದ್ಯ ಆಡಿದ್ದಾಗಿ ಬಹಿರಂಗಪಡಿಸಿದ್ದಾರೆ.

    “ನಾನು ಕಳೆದ ಕೆಲ ದಿನಗಳಿಂದ ಅಸ್ವಸ್ಥಗೊಂಡಿದ್ದೆ. ಈ ಪಂದ್ಯವನ್ನು ಆಡಲು ಸಾಧ್ಯವಾಗದಿರಬಹುದು ಎಂಬ ಭೀತಿಯಲ್ಲಿದ್ದೆ. ಬೆಳಗ್ಗೆ ಎದ್ದಾಗ ಸ್ವಲ್ಪ ಚೇತರಿಕೆ ಕಂಡಿದ್ದೆ. ದೇವರ ದಯೆಯಿಂದ ಆಡುವ ಅವಕಾಶವೂ ಲಭಿಸಿತು. ಏಕದಿನ ವಿಶ್ವಕಪ್​ ನಂತರದಲ್ಲಿ ವೈಟ್​ಬಾಲ್​ ಕ್ರಿಕೆಟ್​ನಲ್ಲಿ ಹೆಚ್ಚು ಆಡಿರಲಿಲ್ಲ. ಹೀಗಾಗಿ ನಾನು ಸ್ವಲ್ಪ ಲಯ ತಪ್ಪಿದ್ದೆ. ಹೆಚ್ಚು ಹೆಚ್ಚು ಅಭ್ಯಾಸ ನಡೆಸಿದ್ದರಿಂದ ಈ ಫಲ ದೊರೆತಿದೆ’ ಎಂದು ಸಿರಾಜ್​ ವಿವರಿಸಿದರು.

    ಐಪಿಎಲ್​ನಲ್ಲಿ ಕಳೆದ ಕೆಲ ಪಂದ್ಯಗಳಲ್ಲಿ ನೀರಸ ನಿರ್ವಹಣೆ ತೋರಿರುವ ನಡುವೆಯೂ ಮುಂಬರುವ ಟಿ20 ವಿಶ್ವಕಪ್​ಗೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ವೇಗಿ ಮೊಹಮದ್​ ಸಿರಾಜ್​, ಶನಿವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್​ಸಿಬಿ ಪರ ಅಮೋಘ ಬೌಲಿಂಗ್​ ನಿರ್ವಹಣೆ ತೋರುವ ಮೂಲಕ ತನ್ನ ಆಯ್ಕೆಯನ್ನು ಸಮರ್ಥಿಸಿಕೊಂಡರು. ಟಿ20 ವಿಶ್ವಕಪ್​ ತಂಡಕ್ಕೆ ಆಯ್ಕೆಯಾಗಿರುವುದನ್ನು ಪ್ರಶ್ನಿಸುತ್ತಿದ್ದವರಿಗೆ ದಿಟ್ಟ ಉತ್ತರವನ್ನೂ ನೀಡಿದರು. 4 ಓವರ್​ಗಳ ದಾಳಿಯಲ್ಲಿ 29 ರನ್​ಗಳಿಗೆ 2 ವಿಕೆಟ್​ ಪಡೆದ ಸಿರಾಜ್​, ಪ್ರಮುಖವಾಗಿ ಪವರ್​ಪ್ಲೇನಲ್ಲೇ ಗುಜರಾತ್​ ತಂಡದ ಸದ್ದಡಗಿಸಿದರು. ಇದಕ್ಕೆ ಅರ್ಹವಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts