ಗದಗ: ಲೋಕಾಯುಕ್ತ ಡಿವೈಎಸ್ಪಿ ವಿಜಯ ಬಿರಾದಾರ ಅವರು ಜಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದರ ಜೊತೆಗೆ ವೈದ್ಯಾಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಕೆಲವು ಸಲಹೆ ಸೂಚನೆ, ಎಚ್ಚರಿಕೆ ನೀಡಿದ್ದಾರೆ.
ಜಿಮ್ಸ್ಗೆ ಭೇಟಿ ನೀಡಿದ ಲೋಕಾಯುಕ್ತ ಅಧಿಕಾರಿಗಳು ಮೊದಲು ಸಾರ್ವಜನಿಕರು ಚೀಟಿ ಪಡೆಯುವ, ರಕ್ತ ಪರೀೆ ಮಾಡಿಸುವ ಹಾಗೂ ಸ್ಕಾನಿಂಗ್ ಮಾಡಿಸುವಲ್ಲಿ ಇರುವ ಸಮಸ್ಯೆಗಳನ್ನು ಪರಿಶೀಲಿಸಿದರು. ಅಲ್ಲದೇ, ಚೀಟಿ ನೀಡುವಲ್ಲಿ, ರಕ್ತ ಪರೀೆ ಮಾಡುವಲ್ಲಿ ಹಾಗೂ ಸ್ಕಾನಿಂಗ್ ಮಾಡುವಲ್ಲಿ ಅನವಶ್ಯಕ ವಿಳಂಬ ನೀತಿ ಅನುಸರಿಸುವುದು, ಪರೀೆ ಪಡೆಯಲು ಹೊರಗೆ ಕಳಿಸುವ ದೂರುಗಳು ಕಂಡು ಬಂದರೆ ನಿರ್ದಾಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಜೊತೆಗೆ ರೋಗಿಗಳು ಚೀಟಿ ಪಡೆಯಲು ಹೆಚ್ಚಿಗೆ ಕೌಂಟರ್ ತೆರೆಯಲು ಸೂಚಿಸಿದರು.
ಸ್ಥಳದಲ್ಲಿ ಓರ್ವ ರೋಗಿಯು ಮಂಗಳವಾರ ಸಂಜೆ ಜಿಮ್ಸ್ಗೆ ದಾಖಲಾಗಿ, ಸ್ಕಾ$ನಿಂಗ್ ಮಾಡಿಸದ್ದರೂ ವರದಿ ನೀಡಲು ಸತಾಯಿಸುತ್ತಿರುವ ಕುರಿತು ಮಾಹಿತಿ ನೀಡಿದ್ದರಿಂದ ಲೋಕಾ ಅಧಿಕಾರಿಗಳು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಂತರ ಜನನ&ಮರಣ ಪ್ರಮಾಣ ಪತ್ರ ನೀಡಲು ಸಾರ್ವಜನಿಕರನ್ನು ವಿನಾಃ ಕಾರಣ ಅಲೆದಾಡಿಸಬಾರದು, ಎಲ್ಲ ವೈದ್ಯರು, ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಹಾಜರಾಗಬೇಕು. ಅನವಶ್ಯಕವಾಗಿ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸೂಚಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಜಿಮ್ಸ್ ಆವರಣದಲ್ಲಿ ಕಸ, ನೀರಿನ ಬಾಟಲ್ಗಳು ಕಂಡು ಬಂದಿದ್ದು, ಸ್ವಚ್ಛಗೊಳಿಸುವಂತೆ ಲೋಕಾಯುಕ್ತ ಅಧಿಕಾರಿ ವಿಜಯ ಬಿರಾದಾರ ಅವರು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.