ರಾಮನಗರ: ಪ್ರವಾಸಿ ತಾಣಗಳಲ್ಲಿ ಅಹಾರಕ್ಕಾಗಿ ಪ್ರವಾಸಿಗರನ್ನೇ ಅವಲಂಬಿಸಿದ್ದ ಮಂಗಗಳು ಲಾಕ್ಡೌನ್ ಹಿನ್ನೆಲೆಯಲ್ಲಿ ಆಹಾರ ಇಲ್ಲದೆ ಪರಿತಪಿಸುತ್ತಿವೆ.
ಆಹಾರ ಇಲ್ಲದೆ ಮಂಗಗಳು ದುಸ್ಥಿತಿಯಲ್ಲಿರುವುದನ್ನು ಗಮನಿಸಿದ ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಶ್ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಜಿಲ್ಲೆಯ ಆಯ್ದ ಪ್ರವಾಸಿ ತಾಣಗಳಲ್ಲಿರುವ ಮಂಗಗಳಿಗೆ ಆಹಾರ ನೀಡುತ್ತಿದ್ದಾರೆ.
ಕೆಂಗಲ್, ಮುತ್ತತ್ತಿ, ಸಾವನದುರ್ಗ, ರೇವಣಸಿದ್ದೇಶ್ವರಬೆಟ್ಟಿ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ತೆರಳಿ ಮಂಗಗಳಿಗೆ ಬಾಳೇಹಣ್ಣು, ಬನ್ ಹಾಗೂ ಬಿಸ್ಕೆಟ್ ನೀಡುತ್ತಿದ್ದಾರೆ.
ಪ್ರವಾಸಿ ತಾಣದಲ್ಲಿರುವ ಬೀಡಾಡಿ ದನ, ನವಿಲುಗಳಿಗೂ ಆಹಾರ ಸಿಗುವಂತೆ ನೋಡಿಕೊಂಡಿದ್ದಾರೆ.
ಸಂಘ ಸಂಸ್ಥೆಗಳು ಕೂಡ ಕೈಜೋಡಿಸಬೇಕು ಎಂದು ರುದ್ರೇಶ್ ಮನವಿ ಮಾಡಿದ್ದಾರೆ.
ಮತ್ತಿತರ ಪ್ರಾಣಿಗಳಿಗೆ ಆಹಾರ ಒದಗಿಸಿ ಮಾನವೀಯತೆ ಮೆರೆದಿದ್ದಾರೆ. ಯಾವುದೇ ಸಂಘಸಂಸ್ಥೆಗಳು ಪ್ರಾಣಿಗಳ ಹಸಿವು ಇಂಗಿಸಲು ಮುಂದಾಗುವಂತೆಯೂ ರುದ್ರೇಶ್ ಮನವಿ ಮಾಡಿದ್ದಾರೆ. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವರದೇಗೌಡ ಹಾಗೂ ತಂಡ ಇದಕ್ಕೆ ಸಾಥ್ ನೀಡಿದೆ.
ಕ್ಯಾನ್ಸರ್ ಪೀಡಿತ ಪತ್ನಿಯನ್ನು ಕೂರಿಸಿಕೊಂಡು 140 ಕಿ.ಮೀ.ದೂರ ಬೈಸಿಕಲ್ ತುಳಿದ ಪತಿ