ನವದೆಹಲಿ: ಭಾರತಕ್ಕೆ ಬೇಕಾಗಿರುವ ಉಗ್ರ ಹಫೀಜ್ ಸಯೀದ್ ನಾಯಕತ್ವದ ಲಷ್ಕರ್ ಏ ತೊಯ್ಬಾ(ಎಲ್ಇಟಿ) ಸಂಘಟನೆ ಇದೀಗ ಹೊಸ ಹೆಸರಿನೊಂದಿಗೆ ಹೊಸ ಅವತಾರವನ್ನು ಎತ್ತಿದೆ. ಪ್ಯಾರಿಸ್ ಮೂಲದ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ನಿರ್ಬಂಧದಿಂದ ಪಾರಾಗುವುದಕ್ಕೆ ಪಾಕಿಸ್ತಾನಕ್ಕೆ ಇದ್ದುದು ಇದೊಂದೇ ದಾರಿ!
ಜಾಗತಿಕವಾಗಿ COVID19 ಪರಿಸ್ಥಿತಿಯ ತೀವ್ರತೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅದನ್ನು ತಡೆಯುವುದಕ್ಕೆ ಬೇಕಾದ ಅನೇಕ ಮುಂಜಾಗ್ರತಾ ಕ್ರಮಗಳನ್ನು ರಾಷ್ಟ್ರಗಳು ತೆಗೆದುಕೊಂಡಿವೆ. ಇದರಲ್ಲಿ ದಿಗ್ಬಂಧನ, ಪ್ರಯಾನ ನಿರ್ಬಂಧ, ನಿಗದಿತ ಭೌಗೋಳಿಕ ವ್ಯಾಪ್ತಿಯನ್ನೆ ಸೀಲ್ಡೌನ್ ಮಾಡುವ ಕೆಲಸಗಳೂ ಆಗಿವೆ. ಈ ಹಿನ್ನೆಲೆಯಲ್ಲಿ ಹೈ ರಿಸ್ಕ್ ಪ್ರದೇಶಗಳಲ್ಲಿನ ಪರಾಮರ್ಶೆಯನ್ನು ನಾಲ್ಕು ತಿಂಗಳ ಮಟ್ಟಿಗೆ ಮುಂದೂಡಲಾಗುತ್ತಿದೆ. ಹೀಗಾಗಿ ಜೂನ್ ತಿಂಗಳಲ್ಲಿ ನಿಗದಿತ ಪರಾಮರ್ಶೆಗಳು ನಡೆಯಲ್ಲ ಎಂದು ಎಫ್ಎಟಿಎಫ್ ಪ್ರಕಟಿಸಿದೆ.
ಇದನ್ನೂ ಓದಿ: ಬೂದು ಪಟ್ಟಿಯಲ್ಲೇ ಪಾಕ್ ಮುಂದುವರಿಕೆ: ಎಫ್ಎಟಿಎಫ್ನಿಂದ ಶುಕ್ರವಾರ ಅಂತಿಮ ನಿರ್ಧಾರ
ಇದೇ ವೇಳೆ ಪಾಕಿಸ್ತಾನಕ್ಕೂ ಎಫ್ಎಟಿಎಫ್ ಪರಾಮರ್ಶೆಯಿಂದ ವಿನಾಯಿತಿ ಸಿಕ್ಕಿದೆ. ಆದಾಗ್ಯೂ, ಅದಕ್ಕೆ ಸಂಬಂಧಿಸಿದ ಕ್ರಿಯಾ ಯೋಜನೆಯನ್ನು ಪಾಕಿಸ್ತಾನ ಸೆಪ್ಟೆಂಬರ್ ತಿಂಗಳ ಒಳಗೆ ಪೂರೈಸಬೇಕಾಗಿದೆ. ಪಾಕಿಸ್ತಾನಕ್ಕೆ ನೀಡಲಾಗಿದ್ದ 27 ಅಂಶಗಳ ಕ್ರಿಯಾ ಯೋಜನೆಯ ಡೆಡ್ಲೈನ್ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಕೊನೆಗೊಂಡಿದೆ.
ಕಳೆದ ಫೆಬ್ರವರಿಯಲ್ಲಿ ಪಾಕಿಸ್ತಾನಕ್ಕೆ ಕ್ರಿಯಾ ಯೋಜನೆ ಜಾರಿಗೊಳಿಸುವುದಕ್ಕೆ ಮತ್ತೆ ಅವಕಾಶ ಸಿಕ್ಕಿತ್ತು. ಆದರೆ, ಬೂದುಪಟ್ಟಿಯಿಂದ ಕಪ್ಪು ಪಟ್ಟಿಗೆ ಸೇರಿಸುವ ಷರತ್ತಿನ ಎಚ್ಚರಿಕೆಯೂ ಅಲ್ಲಿತ್ತು. ಪಾಕಿಸ್ತಾನ ಎಫ್ಎಟಿಎಫ್ನ ಬೂದು ಪಟ್ಟಿಗೆ ಸೇರಿದ್ದರ ಪರಿಣಾಮ ಇಸ್ಲಾಮಾಬಾದ್ಗೆ 10 ಶತಕೋಟಿ ಡಾಲರ್ ನಷ್ಟ ಉಂಟಾಗಿದೆ. ಒಂದೊಮ್ಮೆ ಕ್ರಿಯಾ ಯೋಜನೆ ಜಾರಿಗೊಳಿಸುವಲ್ಲಿ ವಿಫಲವಾದರೆ ಕಪ್ಪುಪಟ್ಟಿಗೆ ಸೇರಲಿದೆ.
ಇದನ್ನೂ ಓದಿ: ಉಗ್ರರಿಗೆ ಹಣಕಾಸು ನೆರವು ಸಿಗದಂತೆ ಕ್ರಮ ತೆಗೆದುಕೊಳ್ಳಲು ಪಾಕ್ ವಿಫಲ: ಎಚ್ಚರಿಕೆ ನೀಡಿದ ಎಫ್ಎಟಿಎಫ್
ಎಫ್ಎಟಿಎಫ್ನ ನಿಬಂಧನೆಗಳನ್ನು ಪೂರೈಸುವುದಕ್ಕಾಗಿ ಪಾಕಿಸ್ತಾನ ಈಗ ಸಕ್ರಿಯವಾಗಿರುವ ಭಯೋತ್ಪಾದಕ ಸಂಘಟನೆಗಳ ಹೆಸರು ಬದಲಾಯಿಸುವ ಕೆಲಸಕ್ಕೆ ಮುಂದಾಗಿದೆ. ಇದರಂತೆ ಉಗ್ರ ಹಫೀಜ್ ಸಂಸ್ಥಾಪಕನಾಗಿರುವ ಎಲ್ಇಟಿ ಇನ್ನು ದ ರೆಸಿಸ್ಟೆನ್ಸ್ ಫ್ರಂಟ್(ಟಿಆರ್ಎಫ್) ಎಂದು ಗುರುತಿಸಿಕೊಳ್ಳಲಿದೆ. ಈ ಉಗ್ರ ಸಂಘಟನೆ ಜಮ್ಮು-ಕಾಶ್ಮೀರದಲ್ಲಿ ಅನೇಕ ಉಗ್ರ ದಾಳಿಗಳಿಗೆ ಹೊಣೆಗಾರನಾಗಿದೆ. ಲಷ್ಕರ್ ಏ ತೊಯ್ಬಾ ಅಥವಾ ಎಲ್ಇಟಿ ವಿಶ್ವಸಂಸ್ಥೆಯಿಂದ ನಿಷೇಧ ಎದುರಿಸುತ್ತಿದ್ದರೆ, ಅದರ ಹೆಸರು ಬದಲಾಯಿಸಿದರೆ ಅಂತಹ ನಿಷೇಧ ಯಾವುದೂ ಲಾಗೂ ಆಗಲ್ಲ ಎಂಬುದು ಪಾಕಿಸ್ತಾನದ ಲೆಕ್ಕಾಚಾರ.
ಈಗ ಪಾಕಿಸ್ತಾನ ಇದೇ ಉಗ್ರರನ್ನು ಕಾಶ್ಮೀರದ ಗಡಿಯ ಮೂಲಕ ಅಕ್ರಮವಾಗಿ ಭಾರತಕ್ಕೆ ಕಳುಹಿಸುವುದಕ್ಕೆ ಪ್ರಯತ್ನಿಸುತ್ತಿರುವುದು. ಹಾಗಾಗಿಯೇ ಆ ಭಾಗದಲ್ಲಿ ಪದೇಪದೆ ಕದನ ವಿರಾಮ ಉಲ್ಲಂಘನೆ, ಅಪ್ರಚೋದಿತ ಗುಂಡಿನ ದಾಳಿ ನಡೆಯುತ್ತಿರುವುದು. ಮೊಟ್ಟ ಮೊದಲ ಬಾರಿಗೆ ಟಿಆರ್ಎಫ್ ದಾಳಿ ಕಳೆದ ವರ್ಷ ಆಗಸ್ಟ್ 5ರಂದು ಆಗಿತ್ತು. ಅಂದು ಅನುಚ್ಚೇಧ 370 ರದ್ದುಗೊಳಿಸಿದ್ದಕ್ಕೆ ಪ್ರತಿಯಾಗಿ ಇದು ನಡೆದಿತ್ತು ಎಂಬುದನ್ನು ಸೇನಾ ಮೂಲಗಳು ಉಲ್ಲೇಖಿಸಿವೆ. (ಏಜೆನ್ಸೀಸ್)
ಉಗ್ರ ಸಂಘಟನೆಗಳಿಗೆ 8,000 ಶಂಕಿತ ವ್ಯವಹಾರ ವರದಿ: ಪಾಕ್ಗೆ ಎಚ್ಚರಿಕೆ ನೀಡಿದ ಎಫ್ಎಟಿಎಫ್
ವೈರಲ್ ಆಯ್ತು ರಿಷಿ ಕಪೂರ್ ಮತ್ತು ಇರ್ಫಾನ್ ಖಾನ್ ಜತೆಗೆ ಇರುವ ಒಂದು ಫೋಟೊ!