ಮಂಗಳೂರು: ಯಾರನ್ನೋ ಬಲೆಗೆ ಕೆಡವಿಕೊಳ್ಳಲು ಹೋಗಿ ತಾವೇ ಸಿಲುಕಿಕೊಳ್ಳುವಂಥ ಪ್ರಕರಣವನ್ನು ನೆನಪಿಸುವಂಥ ಘಟನೆ ಇದು. ಇಲ್ಲೊಂದು ಕಡೆ ಕೋಳಿಯನ್ನು ಹಿಡಿಯಲು ಹೋದ ಚಿರತೆ ತಾನೇ ಬಾವಿಗೆ ಬಿದ್ದುಬಿಟ್ಟಿದೆ.
ದಕ್ಷಿಣಕನ್ನಡ ಜಿಲ್ಲೆಯ ಕಡಬದ ಕೊಂಬಾರು ಎಂಬಲ್ಲಿನ ರಾಮಯ್ಯ ಎನ್ನುವವರ ಮನೆಯ ಬಾವಿಗೆ ಈ ಚಿರತೆ ಬಿದ್ದುಬಿಟ್ಟಿದೆ. ಕೋಳಿಯನ್ನು ಹಿಡಿಯಲೆಂದು ಅಟ್ಟಿಸಿಕೊಂಡು ಬಂದಿದ್ದ ಚಿರತೆ ಆಯತಪ್ಪಿ ಬಾವಿಯೊಳಕ್ಕೆ ಬಿದ್ದಿದೆ.
ಇದನ್ನೂ ಓದಿ: ಕಾಲೇಜು ಪ್ರಾಂಶುಪಾಲರು-ಉಪನ್ಯಾಸಕರು ಬೋಧನೆ ಅವಧಿಯಲ್ಲಿ ಜೀನ್ಸ್ ಪ್ಯಾಂಟ್-ಟಿ ಶರ್ಟ್ ಧರಿಸದಂತೆ ಆದೇಶ; ಮುಂದಾ?
ಬಾವಿಯ ನೀರಿನಲ್ಲಿ ಬಿದ್ದು ಮೈ ಒದ್ದೆಯಾಗಿ ಚಳಿಯಿಂದ ನಡುಗುತ್ತಿರುವ ಚಿರತೆಯ ರಕ್ಷಣಗಾಗಿ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಚಿರತೆ ರಕ್ಷಣೆಯ ಕಾರ್ಯಾಚರಣೆ ಆರಂಭವಾಗಿದ್ದು, ಸ್ಥಳೀಯರ ಕುತೂಹಲ ಕೆರಳಿಸಿದೆ.
ಒಂದೇ ಕುಟುಂಬದ ಐವರಿಂದ ಆತ್ಮಹತ್ಯೆ ಯತ್ನ; ಇಬ್ಬರು ಮಹಿಳೆಯರ ಸ್ಥಿತಿ ಚಿಂತಾಜನಕ
ಪುನೀತ್ ಸಾವಿನಿಂದ ಖಿನ್ನತೆಗೆ ಒಳಗಾಗಿ ಊಟ-ತಿಂಡಿ ಬಿಟ್ಟಿದ್ದ ಅಭಿಮಾನಿಯ ಸಾವು!