More

    ಕೆರೆ-ಕುಂಟೆ ಪುನರ ನಿರ್ಮಾಣ ಅಗತ್ಯ

    ಸಂಡೂರು: ನೀರಿನ ಮೂಲಗಳಾದ ಕೆರೆ ಮತ್ತು ಕುಂಟೆಗಳ ಪುನರ ನಿರ್ಮಾಣದ ಅಗತ್ಯವಿದೆ. ಇದರಿಂದ ರೈತರ ಭೂಮಿಗಳ ಅಂತರ್ಜಲ ಹೆಚ್ಚಿಸುತ್ತದೆ ಎಂದು ಜೆಎಸ್‌ಡಬ್ಲೂ ಉಪಾಧ್ಯಕ್ಷ ಸುನೀಲ್ ಕುಮಾರ್ ಸಿಂಗ್ ಹೇಳಿದರು,.

    ಇದನ್ನೂ ಓದಿ: ಧಾರಾಕಾರ ಮಳೆಗೆ ಕುಸಿದ ಮನೆಗೋಡೆ, ಜನ ಪ್ರಾಣಾಪಾಯದಿಂದ ಪಾರು, ಕೆರೆ-ಕುಂಟೆಗಳಲ್ಲಿ ಜಲರಾಶಿ

    ತಾಲೂಕಿನ ನಂದಿಹಳ್ಳಿ ಜೆಎಸ್‌ಡಬ್ಲೂ ಫೌಂಡೇಶನ್‌ನಿಂದ ಕೆರೆಯ ಹೂಳು ಮತ್ತು ಉನ್ನತೀಕರಣೆ ಕಾರ್ಯಕ್ರಮಕ್ಕೆ ಭೂಮಿಪೂಜೆ ನೆರವೇರಿಸಿ ಮಂಗಳವಾರ ಮಾತನಾಡಿದರು.

    ಕೆರೆಯ ನೀರಿನಿಂದ ದನ, ಕರು, ಕುರಿಗಳಿಗೆ ಕುಡಿಯುವ ನೀರು, ಬೇಸಾಯಕ್ಕೆ ನೀರನ್ನು ಒದಗಿಸಲಾಗುವುದು ಎಂದರು.

    ಜೆಎಸ್‌ಡಬ್ಲೂ ಫೌಂಡೇಶನ್ ಪೆದ್ದಣ್ಣ ಬೀಡಲ ಮಾತನಾಡಿ, ಕೆರೆಗಳ ಪುನಃಚೇತನ ಅಂಗವಾಗಿ ನಂದಿಹಳ್ಳಿ ಕುಂಟೆಯ ಸಾಮರ್ಥ್ಯವನ್ನು ಹೆಚ್ಚಿಸುವುದರ ಜತೆಗೆ ಕೆರೆಯ ಸುತ್ತಮುತ್ತ ರೈತರಿಗೆ ನೀರು ದೋರೆಯಲಿದೆ ಎಂದರು.

    ಮನ್ಸೂರ್ ಆಲಿ, ಸಂತೋಷ್ ಕುಮಾರ್, ರಾಜಶೇಖರ್, ಸುರೇಶ, ರಾಜೇಂದ್ರ, ಎಸ್.ಸಜ್ಜನ್, ಪುರಸಭೆ ಸದಸ್ಯ ಹನುಮೇಶ್, ಗ್ರಾಮದ ಮಂಜುನಾಥ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts