ಪನ್ನಾ: ಗಣಿ ಅಗೆಯುತ್ತಿದ್ದ ಕಾರ್ಮಿಕನೋರ್ವ ಒಂದು ಕ್ಷಣ ಶಾಕ್ಗೆ ಒಳಗಾಗಿದ್ದಲ್ಲದೆ, ರಾತ್ರೋರಾತ್ರಿ ಶ್ರೀಮಂತನಾಗಿದ್ದಾನೆ.
ಪನ್ನಾ ಜಿಲ್ಲೆಯಲ್ಲಿ ವಜ್ರದ ಗಣಿಯೊಂದರಲ್ಲಿ ಅಷ್ಟೇನೂ ಆಳವಿಲ್ಲದ ಕಡೆಯಲ್ಲಿ ಸುಬಾಲ್ ಎಂಬ ಕಾರ್ಮಿಕ ಅಗೆಯುತ್ತಿದ್ದರು. ಆಗ ಅವರಿಗೆ ಮೂರು ವಜ್ರದ ತುಂಡುಗಳು ಸಿಕ್ಕಿವೆ. ಅದನ್ನವರು ಸೀದಾ ಪನ್ನಾದ ವಜ್ರ ಮೌಲ್ಯಮಾಪನ ಅಧಿಕಾರಿ ಆರ್.ಕೆ.ಪಾಂಡೆ ಅವರ ಬಳಿ ತೆಗೆದುಕೊಂಡು ಹೋಗಿ ಕೊಟ್ಟಿದ್ದಾರೆ. ಇದನ್ನೂ ಓದಿ: ‘ಆಗಸ್ಟ್ 5’ ‘ಆಗಸ್ಟ್ 15’- ಈ ಬಾರಿ ಪ್ರಧಾನಿ ನರೇಂದ್ರ ಮೋದಿಯನ್ನು ಪರೋಕ್ಷವಾಗಿ ವಿರೋಧಿಸಿದ ದೀದಿ
ಪಾಂಡೆಯವರು ನೀಡಿರುವ ಮಾಹಿತಿಯ ಪ್ರಕಾರ ಇದು ಸುಮಾರು 30-35 ಲಕ್ಷ ರೂ.ಬೆಲೆಬಾಳುತ್ತವೆ. ಹಾಗೇ 7.5 ಕ್ಯಾರೆಟ್ ತೂಕ ಹೊಂದಿವೆ.
ಸರ್ಕಾರದ ನಿಯಮದಂತೆ ವಜ್ರದ ಹರಾಜು ಪ್ರಕ್ರಿಯೆ ನಡೆಯುತ್ತದೆ. ನಂತರ 12 ಪರ್ಸಂಟ್ ತೆರಿಗೆ ಕಡಿತ ಮಾಡಿ, ಉಳಿದ 88 ಪರ್ಸಂಟ್ ಸುಬಾಲ್ ಅವರಿಗೆ ಸೇರುತ್ತದೆ ಎಂದು ಪಾಂಡೆ ಮಾಹಿತಿ ನೀಡಿದ್ದಾರೆ. ಕಳೆದ ತಿಂಗಳು ಕಾರ್ಮಿಕನೋರ್ವನಿಗೆ 10.69 ಕ್ಯಾರೆಟ್ ತೂಕದ ವಜ್ರ ಸಿಕ್ಕಿತ್ತು.(ಏಜೆನ್ಸೀಸ್)
ನದಿ ಪ್ರವಾಹದಲ್ಲಿ ಮುಳುಗುತ್ತಿದೆ ಪ್ರಸಿದ್ಧ ದೇವಾಲಯ; ಸ್ಥಳೀಯರೂ ಆತಂಕದಲ್ಲಿ