ಮುಂಬೈ: ‘ನಾನು ಚಿತ್ರ ವಿಮರ್ಶೆ ಮಾಡುವುದನ್ನು ತಡೆಯುವುದನ್ನು ಬಿಟ್ಟು, ಮುಂದೆ ಒಳ್ಳೆಯ ಸಿನಿಮಾಗಳನ್ನು ಮಾಡಿ’ ಎಂದು ನಟ ಹಾಗೂ ಆನ್ಲೈನ್ ವಿಮರ್ಶಕ ಕೆಆರ್ಕೆ, ಸಲ್ಮಾನ್ ಖಾನ್ಗೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಹಣ್ಣು ಬೇಕಾ ಮಾವಿನಹಣ್ಣು…. ರೀಲ್ ಅಲ್ಲ ಇದು ರಿಯಲ್: ತೋಟದಲ್ಲಿ ಫುಲ್ ಬಿಜಿ ಈ ತುಮಕೂರು ಬೆಡಗಿ
ಸಲ್ಮಾನ್ ಖಾನ್ ವೃತ್ತಿಜೀವನದಲ್ಲೇ ಅತ್ಯಂತ ಕೆಟ್ಟ ಚಿತ್ರ ‘ರಾಧೇ’ ಎಂದು ಆನ್ಲೈನ್ನಲ್ಲಿ ವಿಮರ್ಶೆ ಮಾಡಿದ್ದ ನಟ ಮತ್ತು ವಿಮರ್ಶಕ ಕಮಾಲ್ ಆರ್ ಖಾನ್ ಅಲಿಯಾಸ್ ಕೆಆರ್ಕೆ ಮೇಲೆ ಸಲ್ಮಾನ್ ಖಾನ್ ಮಾನನಷ್ಟ ಮೊಕದ್ದಮೆ ಹೂಡಿದ್ದು, ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಮುಂಬೈನ ಸಿಟಿ ಸಿವಿಲ್ ಕೋರ್ಟ್ನಲ್ಲಿ ಸಲ್ಮಾನ್ ಖಾನ ಪರ ವಕೀಲರು ಕೇಸ್ ದಾಖಲಿಸಿದ್ದಾರೆ.
‘ರಾಧೇ’ ಚಿತ್ರವು ಮೇ 13ರಂದು ಓಟಿಟಿ ಮತ್ತು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರವನ್ನು ದುಬೈನ ಚಿತ್ರಮಂದಿರದಲ್ಲಿ ವೀಕ್ಷಿಸಿದ ಕೆಆರ್ಕೆ, ಚಿತ್ರ ಬಹಳ ಕೆಟ್ಟದಾಗಿದೆ ಎಂದು ಕಣ್ಣೀರು ಹಾಕಿದ್ದರು. ಚಿತ್ರ ನೋಡಿದ ಹಲವರು, ಕೆಆರ್ಕೆ ಮಾತು ಸರಿಯಾಗಿದೆ ಎಂದು ಅನುಮೋದಿಸಿದ್ದರು. ಕೆಆರ್ಕೆ ವಿಮರ್ಶೆಯಿಂದ ತಮಗೆ ಮಾನಹಾನಿಯಾಗಿದೆ ಎಂದು ಸಲ್ಮಾನ್ ಕೇಸ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಸಂಜಯ್ ಲೀಲಾ ಬನ್ಸಾಲಿಯ ಡಾಕು ರಾಣಿ ದೀಪಿಕಾ?
ತಮ್ಮ ಮೇಲೆ ಕೇಸ್ ದಾಖಲಿಸುವ ಮೂಲಕ ಸಲ್ಮಾನ್ ತಮ್ಮ ಹತಾಶೆ ಹೊರಹಾಕಿದ್ದಾರೆ ಎಂದು ಕೆಆರ್ಕೆ ಹೇಳಿಕೊಂಡಿದ್ದಾರೆ. ‘ನಾನು ಇಲ್ಲಿ ಸಲ್ಮಾನ್ ಅವರ ವೃತ್ತಿಜೀವನವನ್ನು ಹಾಳು ಮಾಡುವುದಕ್ಕೆ ಬಂದಿಲ್ಲ ಅಥವಾ ಅವರನ್ನು ನೋಯಿಸುವುದಕ್ಕೆ ಬಂದಿಲ್ಲ. ನನ್ನ ವಿಮರ್ಶೆಗಳು ಅವರಿಗೆ ಇಷ್ಟವಾಗಲಿಲ್ಲವೆಂದರೆ, ಇನ್ನು ಮುಂದೆ ನಾನು ಅವರ ಚಿತ್ರಗಳ ವಿಮರ್ಶೆ ಮಾಡುವುದಿಲ್ಲ. ಅಷ್ಟೇ ಅಲ್ಲ, ಈಗಿರುವ ಚಿತ್ರದ ವಿಮರ್ಶೆಯನ್ನು ಸಹ ಅಳಿಸಿ ಹಾಕುತ್ತೇನೆ. ಇಷ್ಟಕ್ಕೂ ನಾನು ವಿಮರ್ಶೆಗಳನ್ನು ಮಾಡುವುದು ನನ್ನ ಅಭಿಮಾನಿಗಳಿಗೋಸ್ಕರವೇ ಹೊರತು, ಬೇರೆ ಯಾರಿಗೂ ಅಲ್ಲ. ನಾನು ಚಿತ್ರ ವಿಮರ್ಶೆ ಮಾಡುವುದನ್ನು ತಡೆಯುವುದನ್ನು ಬಿಟ್ಟು, ಮುಂದೆ ಒಳ್ಳೆಯ ಸಿನಿಮಾಗಳನ್ನು ಮಾಡಿ’ ಎಂದು ಸಲ್ಮಾನ್ಗೆ ಸಲಹೆ ನೀಡಿದ್ದಾರೆ.
ನಾನ್ಯಾವತ್ತೂ ಅವರನ್ನು ನೋಡೇ ಇಲ್ಲ … ವದಂತಿಗಳಿಗೆ ತೆರೆ ಎಳೆದ ಕ್ರಿಸ್ಟೋಫರ್