ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹಿತಾಸಕ್ತಿಯ ಅಡಕತ್ತರಿಗೆ ಸಿಲುಕಿಕೊಂಡಿದ್ದಾರೆ. ಮಧ್ಯಪ್ರದೇಶ ರಾಜ್ಯ ಕ್ರಿಕೆಟ್ ಸಂಸ್ಥೆಯ ಸಂಜೀವ್ ಗುಪ್ತಾ ವಿರಾಟ್ ಕೊಹ್ಲಿ ವಿರುದ್ಧ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ನೈತಿಕ ಸಮಿತಿ ಅಧಿಕಾರಿ ಡಿ.ಕೆ. ಜೈನ್ಗೆ ದೂರು ಕೊಟ್ಟಿದ್ದಾರೆ.
ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ನಾಯಕರಾಗಿರುವ ಹೊರತಾಗಿಯೂ ಕೆಲವೊಂದು ವಾಣಿಜ್ಯ ಸಂಸ್ಥೆಗಳನ್ನು ಹೊಂದಿದ್ದಾರೆ. ಲೋಧಾ ಸಮಿತಿಯ ಶಿಫಾರಸಿನ ಅನ್ವಯ ಇದು ಹಿತಾಸಕ್ತಿಗೆ ಎಡೆಮಾಡಿಕೊಡುತ್ತದೆ. ಬಿಸಿಸಿಐನ ನಿಯಮ 38(1)(iii)ನಂತೆ ಓದಲಾಗಿರುವ 38(4)(ಎ)-ಆಟಗಾರ ಮತ್ತು 38(4)(o) ಗುತ್ತಿಗೆಯ ವ್ಯಾಪ್ತಿಗೆ ಅವರು ಒಳಪಡುತ್ತಾರೆ. ವಾಣಿಜ್ಯ ಸಂಸ್ಥೆಗಳನ್ನು ಹೊಂದಿರುವ ಕಾರಣ ಅದು ಸುಪ್ರೀಂಕೋರ್ಟ್ ಪ್ರತಿಪಾದಿಸಿರುವ ಬಿಸಿಸಿಐನ ನಿಯಮ 38(4) ಅನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಅವರು ಯಾವುದಾದರೂ ಒಂದು ಹುದ್ದೆಯನ್ನು ತೊರೆಯಬೇಕಾಗುತ್ತದೆ ಎಂದು ನೈತಿಕ ಸಮಿತಿಗೆ ರವಾನಿಸಿರುವ ಮೇಲ್ನಲ್ಲಿ ಅವರು ಆರೋಪಿಸಿದ್ದಾರೆ.
ಇವರ ಪ್ರಕಾರ ಟೀಂ ಇಂಡಿಯಾದ ನಾಯಕನಾಗಿರುವ ವಿರಾಟ್ ಕೊಹ್ಲಿ ಅವರು ವಿರಾಟ್ ಕೊಹ್ಲಿ ಸ್ಪೋರ್ಟ್ಸ್ ಎಲ್ಎಲ್ಪಿ ಕಂಪನಿಯಲ್ಲಿ ನಿರ್ದೇಶಕರಾಗಿದ್ದಅರೆ. ಅಮಿತ್ ಅರ್ಜುನ್ ಸಜ್ದೇಹ್ ಇದರ ಮಾಲೀಕರಾಗಿದ್ದಾರೆ. ಕಾರ್ನರ್ಸ್ಟೋನ್ ವೆಂಚರ್ ಪಾರ್ಟನರ್ಸ್ ಎಲ್ಎಲ್ಪಿ ಎಂಬ ಸಂಸ್ಥೆಯಲ್ಲಿ ವಿರಾಟ್ ಕೊಹ್ಲಿ ನಿರ್ದೇಶಕರಾಗಿದ್ದರೆ ಅಮಿತ್ ಅರುಣ್ ಸಜ್ದೇಹ್ ಮತ್ತು ಬಿನಯ್ ಭರತ್ ಖೀಂಜಿ ಮಾಲೀಕರಾಗಿದ್ದಾರೆ ಎಂಬುದು ಸಂಜೀವ್ ಗುಪ್ತಾ ಅವರ ಆರೋಪವಾಗಿದೆ.
ಇದನ್ನೂ ಓದಿ: 25ನೇ ಜನ್ಮದಿನದ ಸಂಭ್ರಮದಲ್ಲಿ ಪಿವಿ ಸಿಂಧು, ಬ್ಯಾಡ್ಮಿಂಟನ್ ತಾರೆಯ ಈ 25 ಸಾಧನೆಗಳ ಬಗ್ಗೆ ನಿಮಗೆ ಗೊತ್ತೇ?
ಲೋಧಾ ಸಮಿತಿಯ ಶಿಫಾರಸುಗಳು ಮತ್ತು ಸುಪ್ರೀಂಕೋರ್ಟ್ ಮಾನ್ಯ ಮಾಡಿರುವ ಬಿಸಿಸಿಐನ ಸಂವಿಧಾನವನ್ನು ಎಲ್ಲರೂ ನೂರಕ್ಕೆ ನೂರು ಪಾಲನೆಯಾಗಬೇಕು ಎಂಬುದಷ್ಟೇ ನನ್ನ ಉದ್ದೇಶ. ಯಾರು ಅದೆಷ್ಟೇ ಶ್ರೀಮಂತರು, ದೊಡ್ಡವರು, ಪ್ರಭಾವಿಗಳು ಆಗಿದ್ದರೂ ನಾನು ಅದನ್ನು ಕೇರ್ ಮಾಡುವುದಿಲ್ಲ. ಏಕೆಂದರೆ ಯಾರೂ ಕೂಡ ಈ ನೆಲದ ಕಾನೂನಿಗಿಂತ ದೊಡ್ಡವರಲ್ಲ ಎಂದು ಸಂಜೀವ್ ಗುಪ್ತಾ ಹೇಳಿದ್ದಾರೆ.
ಇದಕ್ಕೂ ಮುನ್ನು ಸಂಜೀವ್ ಗುಪ್ತಾ ಅವರು ಈಗ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಸೇರಿ ಹಲವರ ವಿರುದ್ಧ ಹಿತಾಸಕ್ತಿಯ ದೂರು ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ್ದ ಅವರೆಲ್ಲರೂ ತಮ್ಮ ಹೆಚ್ಚುವರಿ ಹುದ್ದೆಗಳನ್ನು ಬಿಟ್ಟು ಕೆಳಗಿಳಿದಿದ್ದರು.
‘ಅಲ್ಹಾನ ಸಂತೃಪ್ತಿಗಾಗಿ ದೇವಾಲಯದ ಗೋಡೆ ಕೆಡವಿದ್ದೇನೆ- ತುಂಬಾ ಖುಷಿಯಾಗುತ್ತಿದೆ’