ಕೊಡಗು: ಕಳೆದ ಎರಡು ದಿನಗಳಿಂದ ಸಾಧಾರಣ ಮಳೆಯಾಗುತ್ತಿದ್ದ ಕೊಡಗು ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಬಿರುಸು ಪಡೆದುಕೊಂಡಿದೆ.
ಜಿಲ್ಲೆಗೆ ಮುಂಗಾರು ಈಗಾಗಲೇ ಎಂಟ್ರಿ ಕೊಟ್ಟಿದ್ದು, ನಿನ್ನೆ ರಾತ್ರಿಯಿಂದ ಜಿಲ್ಲೆಯ ಸೋಮವಾರಪೇಟೆ, ಮಡಿಕೇರಿ, ಗೋಣಿಕೊಪ್ಪ, ಪೊನ್ನಂಪೇಟೆ, ಕೊಡ್ಲಿಪೇಟೆ ಸೇರಿದಂತೆ ಬಹುತೇಕ ಭಾಗದಲ್ಲಿ ಗಾಳಿ ಬೀಸುತ್ತಿದ್ದು ಉತ್ತಮ ಮಳೆಯಾಗುತ್ತಿದೆ.
ಗಾಳಿ ತೀವ್ರವಾಗಿ ಬೀಸುತ್ತಿರೋದ್ರಿಂದ ಚಳಿಯ ವಾತವರಣ ಹೆಚ್ಚಾಗಿದೆ. ಕೊಡಗಿನಲ್ಲಿ ಸುರಿಯುತ್ತಿರೋ ಮಳೆಯಿಂದಾಗಿ ಕೊಡಗಿನ ಜೀವ ನದಿಗಳಾದ ಕಾವೇರಿ, ಲಕ್ಷ್ಮಣ ಕೊಡದುತೀರ್ಥ ನದಿಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದೆ. ಇದನ್ನೂ ಓದಿ: VIDEO| ಥೇಟ್ ರಶ್ಮಿಕಾರನ್ನೇ ಹೋಲುವ ಟಿಕ್ಟಾಕ್ ಸುಂದರಿ: ವಿಡಿಯೋ ನೋಡಿದ್ರೆ ಅಚ್ಚರಿಯಾಗೋದು ಖಂಡಿತ!
ಉತ್ತಮ ಮಳೆಯಾಗುತ್ತಿರೋದ್ರಿಂದ ಕೃಷಿ ಚಟುವಟಿಕೆಗಳಿ ಗರಿಗೆದರಿದೆ. ಇನ್ನು ಮಡಿಕೇರಿ ಸುತ್ತ ಮುತ್ತ ಮಳೆಯ ಹನಿಗಳ ನಡುವೆ ದಟ್ಟವಾದ ಮಂಜು ಆವರಿಸಿ ಮನಸಿಗೆ ಮುದ ನೀಡುತ್ತಿದೆ.
ನಟಿ ರಮ್ಯಾ ಕೃಷ್ಣನ್ ಕಾರಿನಲ್ಲಿ ಪತ್ತೆಯಾಯ್ತು ನೂರಕ್ಕೂ ಹೆಚ್ಚು ಮದ್ಯದ ಬಾಟಲ್ಗಳು…!