More

    ಕಾಟೇರ ಸಿನಿಮಾ ಯಾವಾಗ ನೋಡ್ತೀರಾ? ಸುದೀಪ್​ ಕೊಟ್ಟ ಉತ್ತರ ನೋಡಿ ಗೊಂದಲಕ್ಕೀಡಾದ ಫ್ಯಾನ್ಸ್​

    ಬೆಂಗಳೂರು: ನಟ ದರ್ಶನ್​​ ಅಭಿನಯದ ಕಾಟೇರ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ಭರ್ಜರಿ ಸೌಂಡ್​ ಮಾಡುತ್ತಿದೆ. ನಾನ್​ ಪ್ಯಾನ್​ ಇಂಡಿಯಾ ಸಿನಿಮಾವೊಂದು ಗಲ್ಲಾಪೆಟ್ಟಿಗೆಯಲ್ಲಿ 150 ಕೋಟಿ ರೂ. ಗಳಿಕೆಯತ್ತ ಮುನ್ನುಗ್ಗುತ್ತಿದೆ. ಈ ಮೂಲಕ ದರ್ಶನ್​ ಅವರು ಬಾಕ್ಸ್​ ಆಫೀಸ್​ ಸುಲ್ತಾನ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.

    1970 ಮತ್ತು 80ರ ದಶಕದಲ್ಲಿನ ಜಮಿನ್ದಾರ ಹಾಗೂ ಜಾತಿ ಪದ್ಧತಿ ಆಧಾರಿತ ಸಿನಿಮಾವನ್ನು ಇಡೀ ರಾಜ್ಯವೇ ಒಪ್ಪಿ, ಪ್ರೀತಿಯಿಂದ ಅಪ್ಪಿಕೊಂಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಕಾಟೇರ ಸಿನಿಮಾದ ಸೆಲೆಬ್ರಿಟಿ ಶೋ ಸಹ ಏರ್ಪಡಿಸಲಾಗಿತ್ತು. ಈ ವೇಳೆ ಉಪೇಂದ್ರ, ಶ್ರೀಮುರುಳಿ, ನೀನಾಸಂ ಸತೀಶ್​, ಡಾಲಿ ಧನಂಜಯ್​ ಹಾಗೂ ನೆನಪಿರಲಿ ಪ್ರೇಮ್​ ಸೇರಿದಂತೆ ಸ್ಯಾಂಡಲ್​ವುಡ್​ನ ಕಲಾವಿದರು ಸಿನಿಮಾ ವೀಕ್ಷಣೆ ಮಾಡಿ ಮೆಚ್ಚಿಕೊಂಡರು.

    ಸುದೀಪ್​ ಮತ್ತು ದರ್ಶನ್​ ಬಗ್ಗೆ ಹೇಳಬೇಕಿಲ್ಲ. ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ನಲ್ಲಿ ಕುಚಿಕು ಗೆಳೆಯರಂತಿದ್ದ ಇಬ್ಬರು ಕಾರಣಾಂತರಗಳಿಂದ ದೂರವಾಗಿದ್ದಾರೆ. ಇದರ ಬಗ್ಗೆ ಕೇಳಿದಾಗಲೆಲ್ಲ ಅಭಿಮಾನಿಗಳಲ್ಲಿ ಬೇಸರ ಉಂಟಾಗುತ್ತದೆ. ಆದರೆ, ಇತ್ತೀಚಿಗೆ ಸುದೀಪ್​ ಮತ್ತು ದರ್ಶನ್​ ಮತ್ತೆ ಒಂದಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಸುಮಲತಾ ಅಂಬರೀಷ್​ ಬರ್ತಡೇಯಲ್ಲಿ ಒಂದೇ ವೇದಿಕೆಯಲ್ಲಿ ಇಬ್ಬರು ಕಾಣಿಸಿಕೊಂಡಿದ್ದರು. ಅಲ್ಲದೆ, ನಾವಿಬ್ಬರು ಜಗಳವಾಡಿಲ್ಲ ಎನ್ನುವ ಮೂಲಕ ಸುದೀಪ್​, ದರ್ಶನ್ ಬಗ್ಗೆ ಮಾತನಾಡಿದ್ದರು. ದರ್ಶನ್​ ಮೇಲೆ ಚಪ್ಪಲಿ ಎಸೆತ ಪ್ರಕರಣದ ವೇಳೆ ಸುದೀಪ್​ ಅದನ್ನು ಖಂಡಿಸಿದ್ದರು. ಇದಕ್ಕೆ ದರ್ಶನ್​ ಕೂಡ ಧನ್ಯವಾದಗಳನ್ನು ಹೇಳಿದ್ದರು. ಸಂದರ್ಶನದಲ್ಲಿಯೂ ದರ್ಶನ್​, ಸುದೀಪ್​ ಹೆಸರು ಹೇಳಿದ್ದಾರೆ. ಇದನೆಲ್ಲ ನೋಡಿದರೆ ಕಾಲಾನಂತರದಲ್ಲಿ ಮನಸ್ತಾಪಗಳು ಕರಗಿ ಇಬ್ಬರು ಮತ್ತೆ ಒಂದಾಗುತ್ತಾರೆ ಎಂಬ ಭರವಸೆಯು ಕೂಡ ಅಭಿಮಾನಿಗಳಲ್ಲಿ ಇನ್ನೂ ಜೀವಂತವಾಗಿದೆ.

    ಕಾಟೇರ​ ಬಗ್ಗೆ ಮಾತು
    ತಾಜಾ ಸಂಗತಿ ಏನೆಂದರೆ, ಸುದೀಪ್​ ಅವರು ಕಾಟೇರ ಸಿನಿಮಾ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ. #AskKichcha ಹ್ಯಾಸ್​ಟ್ಯಾಗ್​ ಅಡಿಯಲ್ಲಿ ಅಭಿಮಾನಿಗಳ ಜತೆಯಲ್ಲಿ ಸುದೀಪ್​ ಸಂವಾದ ನಡೆಸಿದ್ದಾರೆ. ಈ ವೇಳೆ ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ಕಾಟೇರ ಸಿನಿಮಾವನ್ನು ಯಾವಾಗ ನೋಡ್ತೀರಾ ಎಂದು ಅಭಿಮಾನಿಯೊಬ್ಬ ಪ್ರಶ್ನಿಸಿದ್ದು, ಇದಕ್ಕೆ ಸುದೀಪ್​ ನೀಡಿದ ಉತ್ತರ ಅಭಿಮಾನಿಗಳನ್ನು ಗೊಂದಲಕ್ಕೆ ದೂಡಿದೆ.

    ಸುದೀಪ್​ ಕೊಟ್ಟ ಉತ್ತರವೇನು?
    ನಾನು ನೋಡಿಲ್ಲ ಎಂದು ಯಾರೊಬ್ಬರು ನಿಮಗೆ ಹೇಳಿಲ್ಲವೇ ಎನ್ನುವ ಅರ್ಥದಲ್ಲಿ ಸುದೀಪ್​ ಹೇಳಿದಂತಿದೆ. ಆದರೆ, ಕಿಚ್ಚ ಯಾವ ಅರ್ಥದಲ್ಲಿ ಹೇಳಿದ್ದಾರೆ ಎಂಬ ಗೊಂದಲ ಮಾತ್ರ ಅಭಿಮಾನಿಗಳಲ್ಲಿ ಹಾಗೇ ಇದೆ. ಇದಕ್ಕೆ ನೀವೊಬ್ಬರೇ ಅರ್ಥ ಹೇಳಲು ಸಾಧ್ಯ ಎಂದು ಫ್ಯಾನ್ಸ್​ ಟ್ವೀಟ್​ ಮಾಡಿದ್ದಾರೆ. ಸುದೀಪ್ ಸರ್ ಹೇಳಿದ್ದು ಅರ್ಥ ಆಗಲಿಲ್ಲ ಯಾರಾದ್ರೂ ಕನ್ನಡದಲ್ಲಿ ಹೇಳಿ ಎಂದು ಕೇಳಿದ್ದಾರೆ.

    2017ರ ದರ್ಶನ್​ ಟ್ವೀಟ್​

    2017ರಲ್ಲಿ ದರ್ಶನ್​ ಟ್ವೀಟ್​ ಮಾಡಿ, ನಾನು ಮತ್ತು ಸುದೀಪ್​ ಇನ್ಮುಂದೆ ಸ್ನೇಹಿತರಲ್ಲ. ನಾವಿಬ್ಬರು ಕನ್ನಡ ಇಂಡಸ್ಟ್ರಿಗೆ ದುಡಿಯುವ ನಟರಷ್ಟೆ. ಈ ಬಗ್ಗೆ ಯಾವುದೇ ವದಂತಿ ಹರಡಬೇಡಿ. ಇದು ಇಲ್ಲಿಗೆ ಮುಗಿಯಲಿ ಎಂದಿದ್ದರು. ಈ ಒಂದು ಟ್ವೀಟ್​ ಇಡೀ ಕರ್ನಾಟಕದಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಅನೇಕರಿಗೆ ಸಿಡಿಲು ಬಡಿದಂತಾಯಿತು. ಅಷ್ಟು ಚೆನ್ನಾಗಿದ್ದ ಇಬ್ಬರ ನಡುವೆ ಏನು ನಡೆಯಿತು ಎಂಬ ಪ್ರಶ್ನೆ ಇಂದಿಗೂ ಅನೇಕರ ಮನದಲ್ಲಿ ಇಂದಿಗೂ ಉಳಿದಿದೆ.

    ಕುಚಿಕು ಗೆಳೆಯರ ಮನಸ್ತಾಪಕ್ಕೆ ಬ್ರೇಕ್​! ಸಿಕ್ಕೇ ಬಿಡ್ತು ಕಿಚ್ಚ-ದಚ್ಚು ಮತ್ತೆ ಒಂದಾಗುವ ಮುನ್ಸೂಚನೆ

    ಕಿಚ್ಚ-ದಚ್ಚು ಅಭಿಮಾನಿಗಳಿಗೆ ಭಾರಿ ಆಘಾತ ನೀಡಿದ ದಿನವಿದು: ಎಲ್ಲವೂ ಮೊದಲಿನಂತಾಗುವುದೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts