More

    ಕುಚಿಕು ಗೆಳೆಯರ ಮನಸ್ತಾಪಕ್ಕೆ ಬ್ರೇಕ್​! ಸಿಕ್ಕೇ ಬಿಡ್ತು ಕಿಚ್ಚ-ದಚ್ಚು ಮತ್ತೆ ಒಂದಾಗುವ ಮುನ್ಸೂಚನೆ

    ಬೆಂಗಳೂರು: ಸ್ಯಾಂಡಲ್​ವುಡ್​ನಲ್ಲಿ ಒಂದು ಕಾಲದಲ್ಲಿ ಸ್ನೇಹಿತರಾಗಿ ಮಿಂಚಿದ್ದ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಮತ್ತು ಕಿಚ್ಚ ಸುದೀಪ್​ ದೂರಾಗಿ ವರ್ಷಗಳೇ ಕಳೆಯಿತು. ಆದರೂ ಸಹ ಇಬ್ಬರ ಅಭಿಮಾನಿಗಳು ಯಾವಾಗ ಒಂದಾಗ್ತಾರೆ ಎಂದು ಕಾಯುತ್ತಿರುವ ನಡುವೆಯೇ ಒಂದು ಆಶಾದಾಯಕ ಬೆಳವಣಿಗೆ ಸ್ಯಾಂಡಲ್​ವುಡ್​ ಅಂಗಳದಲ್ಲಿ ನಡೆದಿದೆ.

    ಹೌದು, ದರ್ಶನ್​ ಮತ್ತು ಸುದೀಪ್​ ಒಂದೇ ಸ್ಥಳದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಇಷ್ಟು ನಾನೆಲ್ಲೂ-ನೀನೆಲ್ಲೂ ಅಂತಿದ್ದ ಇಬ್ಬರು ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಒಂದೇ ಸ್ಥಳದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವುದು ಇಬ್ಬರ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಶೀಘ್ರದಲ್ಲೇ ಇಬ್ಬರು ಮತ್ತೆ ಒಂದಾಗುವ ಲಕ್ಷಣಗಳು ಗೋಚರಿಸುತ್ತಿವೆ ಎಂಬ ಚರ್ಚೆಗಳು ಸಹ ಆರಂಭವಾಗಿದೆ.

    ಇದನ್ನೂ ಓದಿ: ಡಾಲಿ ತಾರಾ ಹುಟ್ಟುಹಬ್ಬ ; ಯಶ್​, ನಿಖಿಲ್​, ರಕ್ಷಿತ್​, ವಿಜಿ, ಯೋಗಿ ಸೇರಿ ಹಲವು ಸೆಲೆಬ್ರಿಟಿಗಳು ಭಾಗಿ

    ಒಂದೇ ಸ್ಥಳದಲ್ಲಿ ಕಿಚ್ಚ-ದಚ್ಚು

    ಇಂದು ಸುಮಲತಾ ಅಂಬರೀಷ್​ ಅವರ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ನಿನ್ನೆ ಚಿತ್ರರಂಗದವರಿಗಾಗಿ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಪಾರ್ಟಿ ಆಯೋಜನೆ ಮಾಡಲಾಗಿತ್ತು. ಇದಕ್ಕೆ ಸುದೀಪ್​ಗೂ ಸಹ ಆಹ್ವಾನವನ್ನು ನೀಡಲಾಗಿತ್ತು. ದರ್ಶನ್​ ಸಹ ಪಾರ್ಟಿಗೆ ಆಗಮಿಸಿದ್ದರು. ಅನೇಕ ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದರ್ಶನ್​ ಮತ್ತು ಸುದೀಪ್​ ಒಂದೇ ಸ್ಥಳದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

    Sudeep and Darshan

    ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ

    ಯಾವುದೇ ಕಾರ್ಯಕ್ರಮದಲ್ಲೂ ಅಥವಾ ಮದುವೆ, ಸಮಾರಂಭಗಳಲ್ಲೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರಲಿಲ್ಲ. ಅಂಬರೀಷ್​ ನಿಧನರಾದಾಗಲೂ ಇಬ್ಬರು ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಅಲ್ಲದೆ, ಅಭಿಷೇಕ್​ ಅಂಬರೀಷ್​ ಮದುವೆ ಸಂದರ್ಭದಲ್ಲೂ ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಯಾವುದೇ ಕಾರ್ಯಾಕ್ರಮಗಳಲ್ಲೂ ಸುದೀಪ್​ ಬಂದು ಹೋದ ಬಳಿಕ ದರ್ಶನ್​ ಅಥವಾ ದರ್ಶನ್​ ಬಂದು ಹೋದ ಬಳಿಕ ಸುದೀಪ್​ ಬರುತ್ತಿದ್ದರು. ಇಬ್ಬರ ನಡೆಯಿಂದ ಅಭಿಮಾನಿಗಳಿಗೆ ಬೇಸರವಾಗುತ್ತಿತ್ತು. ಇಬ್ಬರು ಮತ್ತೆ ಒಂದಾಗಬೇಕು ಅಂತಾ ಆಗಾಗ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಸಹ ನಡೆಸಿದ್ದಾರೆ.

    ಸುದೀಪ್​ ಟ್ವೀಟ್​

    ಇದರ ನಡುವೆ ಕ್ರಾಂತಿ ಸಿನಿಮಾ ಪ್ರಚಾರದ ಸಂದರ್ಭದಲ್ಲಿ ದರ್ಶನ್​ ಅವರ ಮೇಲೆ ಚಪ್ಪಲಿ ಎಸೆತ ಪ್ರಕರಣದ ವೇಳೆ ಸುದೀಪ್​ ಪ್ರತಿಕ್ರಿಯೆ ನೀಡಿದ್ದರು. ಘಟನೆಯನ್ನು ಖಂಡಿಸಿದ್ದರು. ಇದಕ್ಕೆ ದರ್ಶನ್​ ಸಹ ಧನ್ಯವಾದ ತಿಳಿಸಿದ್ದರು. ಇದು ಕೂಡ ಇಬ್ಬರ ನಡುವೆ ಮನಸ್ತಾಪ ಕರಗಿದೆ ಎಂಬುದರ ಸೂಚನೆ ನೀಡಿತು. ಆಗಲೂ ಅಭಿಮಾನಿಗಳು ತುಂಬಾ ಖುಷಿಯಾಗಿದ್ದರು. ಅಂದಿನಿಂದಲೂ ಅಭಿಮಾನಿಗಳಲ್ಲಿ ಇಬ್ಬರು ಮತ್ತೆ ಒಂದಾಗುವ ಆಶಾ ಭಾವನೆ ಇದೆ.

    Sudeep and Darshan 1

    ಸುಮಲತಾ ಸಂಧಾನ

    ಇದೀಗ ಇಬ್ಬರು ಒಂದೇ ಸ್ಥಳದಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವುದು ಅಭಿಮಾನಿಗಳಲ್ಲಿ ಖುಷಿ ಇಮ್ಮಡಿಯಾಗಿದೆ. ಇಬ್ಬರು ಮತ್ತೆ ಒಂದಾಗುತ್ತಾರೆ ಎಂಬ ಆಸೆ ಮತ್ತೆ ಬಲವಾಗಿ ಚಿಗುರಿದೆ. ಇದರ ನಡುವೆ ಸುಮಲತಾ ಅಂಬರೀಷ್​ ಅವರು ತಾವೇ ಮುಂದೆ ನಿಂತು ದರ್ಶನ್​ ಮತ್ತು ಸುದೀಪ್​ ನಡುವೆ ಸಂಧಾನ ಮಾಡಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿದೆ. ರಾಕ್​ಲೈನ್​ ವೆಂಕಟೇಶ್​, ಸುಮಲತಾ ಅಂಬರೀಷ್​ ಸುದೀಪ್​ ಮತ್ತು ದರ್ಶನ್​ ಇಬ್ಬರನ್ನು ಮತ್ತೆ ಒಂದು ಮಾಡಲಿದ್ದಾರೆ ಎನ್ನಲಾಗುತ್ತದೆ. ಅದಕ್ಕೆ ಪುಷ್ಠಿ ನೀಡುವಂತೆ ನಿನ್ನೆ ರಾತ್ರಿ ಸುಮಲತಾ ಅಂಬರೀಷ್​ ಬರ್ತಡೇಯಲ್ಲಿ ಕಿಚ್ಚ-ದಚ್ಚು ಒಟ್ಟಿಗೆ ಕಾಣಿಸಿಕೊಂಡಿರುವುದು ಬಹಳ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಅಲ್ಲದೆ, ಅಭಿಮಾನಿಗಳಲ್ಲೂ ಆಸೆ ಚಿಗುರಿದೆ.

    ಇದನ್ನೂ ಓದಿ: ಚಿನ್ನದ ಮೇಲೆ ನೀರಜ್​ ಕಣ್ಣು; ಜಾವೆಲಿನ್​ ಎಸೆತದಲ್ಲೂ ಇಂದು ಭಾರತ-ಪಾಕಿಸ್ತಾನ ಸೆಣಸಾಟ!

    ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ವಿಡಿಯೋವನ್ನು ಶೇರ್​ ಮಾಡಿಕೊಂಡು ಕಿಚ್ಚ-ದಚ್ಚು ಮತ್ತೆ ಒಂದಾಗಬೇಕು ಎಂದು ಆಗ್ರಹಿಸುತ್ತಿದ್ದಾರೆ. ನಿಮ್ಮನ್ನು ಒಟ್ಟಿಗೆ ನೋಡಲು ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

    Darshan and Sudeep 2

    2017ರ ದರ್ಶನ್​ ಟ್ವೀಟ್​

    2017ರಲ್ಲಿ ದರ್ಶನ್​ ಟ್ವೀಟ್​ ಮಾಡಿ, ನಾನು ಮತ್ತು ಸುದೀಪ್​ ಇನ್ಮುಂದೆ ಸ್ನೇಹಿತರಲ್ಲ. ನಾವಿಬ್ಬರು ಕನ್ನಡ ಇಂಡಸ್ಟ್ರಿಗೆ ದುಡಿಯುವ ನಟರಷ್ಟೆ. ಈ ಬಗ್ಗೆ ಯಾವುದೇ ವದಂತಿ ಹರಡಬೇಡಿ. ಇದು ಇಲ್ಲಿಗೆ ಮುಗಿಯಲಿ ಎಂದಿದ್ದರು. ಈ ಒಂದು ಟ್ವೀಟ್​ ಇಡೀ ಕರ್ನಾಟಕದಾದ್ಯಂತ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಅನೇಕರಿಗೆ ಸಿಡಿಲು ಬಡಿದಂತಾಯಿತು. ಅಷ್ಟು ಚೆನ್ನಾಗಿದ್ದ ಇಬ್ಬರ ನಡುವೆ ಏನು ನಡೆಯಿತು ಎಂಬ ಪ್ರಶ್ನೆ ಇಂದಿಗೂ ಅನೇಕರ ಮನದಲ್ಲಿ ಇಂದಿಗೂ ಉಳಿದಿದೆ.

    ಎಂಟರ್​ಟೇನ್​ಮೆಂಟಲ್ಲ ಎನ್​ಲೈಟನ್​ಮೆಂಟ್​; ರಾಜಕೀಯ ಇಲ್ಲದ ಸಿನಿಮಾಗಳೇ ಇಲ್ಲ

    ವಿಷ ಕುಡಿದು ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಮಹಿಳಾ SI ನಿಗೂಢ ಕಣ್ಮರೆ! 2 ದಿನದ ಬಳಿಕ ಕಾದಿತ್ತು ಅಚ್ಚರಿ

    ಹಾಲಿನ ಅಡ್ಡಪರಿಣಾಮಗಳು: ಈ ಸಮಸ್ಯೆಗಳಿಂದ ಬಳಲುತ್ತಿರುವವರು ರಾತ್ರಿ ಹಾಲು ಕುಡಿಯದಿರುವುದು ಉತ್ತಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts