More

    ಹಾರರ್ ಥ್ರಿಲ್ಲರ್ `ಕೆಂಪುಸೀರೆ’. ಅಘೋರಿ ಪಾತ್ರದಲ್ಲಿ ಕೆಜಿಎಫ್ ವಾನರಂ, ಅಯ್ಯಪ್ಪ ಶರ್ಮಾ!

    ತಾಯಿ ಮಗಳ ಸಂಬoಧದ ಸುತ್ತ ನಡೆಯುವ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ `ಕೆಂಪು ಸೀರೆ’. ಸದ್ಯ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರಕ್ಕೆ ಸುಮನ್ ಬಾಬು ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಜತೆಗೆ ಸುಮನ್ ವೆಂಕಟಾದ್ರಿ ಪ್ರೊಡಕ್ಷನ್ ಬ್ಯಾನರ್‌ನ ಅಡಿಯಲ್ಲಿ ಸುಮನ್ ಬಾಬು ತಾವೇ ಈ ಚಿತ್ರವನ್ನು ನಿರ್ಮಾಣ ಸಹ ಮಾಡಿದ್ದಾರೆ. ಕನ್ನಡದ ಜತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ನಿರ್ಮಾಣವಾಗಿರುವ `ಕೆಂಪು ಸೀರೆ’ ಚಿತ್ರದಲ್ಲಿ ಟೈಟಲ್ ಹೇಳುವಂತೆಯೇ ಒಂದು ಕೆಂಪು ಸೀರೆ ಪ್ರಮುಖ ಪಾತ್ರವಹಿಸುತ್ತದೆ.

    ಇದನ್ನೂ ಓದಿ :ಕನ್ನಡ ಹಬ್ಬದ ಜತೆ ಅಪ್ಪು ಹಬ್ಬ; ಪುನೀತ್ ಸರ್ ನೆನಪು ಖುಷಿ ಮೂಡಿಸಬೇಕು..

    ತನ್ನ ಮಗಳ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ತಾಯಿ ಕೆಂಪು ಸೀರೆ ಉಟ್ಟುಕೊಂಡಿದ್ದಾಗಲೇ ಕೊಲೆಯಾಗುತ್ತಾಳೆ. ತಾಯಿಯ ನಂತರ ಆಕೆಯ ಮಗಳನ್ನೂ ಸಹ ಹಂತಕರು ಕೊಂದುಬಿಡುತ್ತಾರೆ. ಆನಂತರ ಮಗಳ ಆತ್ಮ ಕೆಂಪು ಸೀರೆ ಉಟ್ಟಿದ್ದ ತನ್ನ ತಾಯಿಯ ಆತ್ಮವನ್ನು ಹುಡುಕುತ್ತಿರುತ್ತದೆ. ಹೀಗೆ ಹಾರರ್ ಹಿನ್ನೆಲೆಯಲ್ಲಿ ನಡೆಯುವ ತಾಯಿ ಮಗಳ ಸೆಂಟಿಮೆoಟ್ ಕಥೆಯನ್ನು ನಿರ್ದೇಶಕ ಸುಮನ್ ಬಾಬು ಈ ಚಿತ್ರದ ಮೂಲಕ ಹೇಳಲು ಹೊರಟಿದ್ದಾರೆ. ವಿಶೇಷವಾಗಿ ಈ ಚಿತ್ರದಲ್ಲಿ ೩೦ ನಿಮಿಷಗಳ ಗ್ರಾಫಿಕ್ಸ್ ಬಳಸಿಕೊಂಡು ಕೆಂಪು ಸೀರೆ, ಅಘೋರಿ ಪಾತ್ರಗಳನ್ನು ತೆರೆಯ ಮೇಲೆ ತರಲಾಗಿದೆ. ದಸರಾ ಹಬ್ಬದ ವೇಳೆಗೆ ಈ ಚಿತ್ರವನ್ನು ತೆರೆಗೆ ತರು ಯೋಜನೆ ಚಿತ್ರತಂಡದ್ದು.

    ಹಾರರ್ ಥ್ರಿಲ್ಲರ್ `ಕೆಂಪುಸೀರೆ'. ಅಘೋರಿ ಪಾತ್ರದಲ್ಲಿ ಕೆಜಿಎಫ್ ವಾನರಂ, ಅಯ್ಯಪ್ಪ ಶರ್ಮಾ!

    ಇದನ್ನೂ ಓದಿ :ಸಿದ್ದು ಮೂಲಿಮನಿ ‘ಓಮಿನಿ’ ಟ್ರೇಲರ್ ಬಿಡುಗಡೆ! ಶುಭಾಶಯ ಕೋರಿದ ಗೃಹಸಚಿವರು

    ನಾಯಕನಾಗಿ ಖುದ್ದು ನಿರ್ದೇಶಕ ಕಮ್ ನಿರ್ಮಾಪಕ ಸುಮನ್ ಬಾಬು, ಅವರಿಗೆ ನಾಯಕಿಯಾಗಿ ಕಾರುಣ್ಯ ಚೌಧರಿ ನಟಿಸಿದ್ದು ಅಘೋರಿ ಪಾತ್ರದಲ್ಲಿ ನಟ ಸಾಯಿಕುಮಾರ್ ಸಹೋದರ ಅಯ್ಯಪ್ಪ ಶರ್ಮಾ ಅಭಿನಯಿಸಿದ್ದಾರೆ. ಉಳಿದಂತೆ ಸಂಜನಾ ಶೆಟ್ಟಿ, ಆಲಿ, ಶ್ರೀಕಾಂತ್ (ಶ್ರೀ ರಾಮ್), ಅಜಯ್, ಜೀವಾ, ಬೇಬಿ ಸಾಯಿ ತೇಜಸ್ವಿನಿ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು ಪ್ರಮೋದ್ ಸಂಗೀತ ನೀಡಿದ್ದಾರೆ. ಚಿನ್ನು ಅವರ ಹಿನ್ನೆಲೆ ಸಂಗೀತ, ಚಂದ್ರು ಅವರ ಛಾಯಾಗ್ರಹಣ, ಸಂಗೋಪಿ ವಿಮನ ಅವರ ಸಂಭಾಷಣೆ, ಅಜಯ್ ಶಿವಶಂಕರ್ ಅಕುಲ್ ಅವರ ನೃತ್ಯ ಸಂಯೋಜನೆ ಹಾಗೂ ವೆಂಕಟಪ್ರಭು ಅವರ ಸಂಕಲನ ಈ `ಕೆಂಪು ಸೀರೆ’ ಚಿತ್ರಕ್ಕಿದೆ.

    ಹಾರರ್ ಥ್ರಿಲ್ಲರ್ `ಕೆಂಪುಸೀರೆ'. ಅಘೋರಿ ಪಾತ್ರದಲ್ಲಿ ಕೆಜಿಎಫ್ ವಾನರಂ, ಅಯ್ಯಪ್ಪ ಶರ್ಮಾ!

    ಮಾಲ್ಡೀವ್ಸ್​ನಲ್ಲಿ ಕತ್ರಿನಾ ಹುಟ್ಟುಹಬ್ಬ; ಹ್ಯಾಟ್ರಿಕ್ ಚಿತ್ರಗಳಲ್ಲಿ ಬಾಲಿವುಡ್ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts