ಬೆಂಗಳೂರು: ಕೆಜಿಎಫ್ನಲ್ಲಿ ಗರುಡನ್ನ ಸಾಯಿಸಿದ್ಮೇಲೆ ಮುಂದೇನಾಯ್ತು? ಎಂಬ ಸಾಲಿನಿಂದ ಶುರುವಾಗುವ ಕೆಜಿಎಫ್ 2 ಟ್ರೇಲರ್ ಮುಂದೇನು? ಎಂಬ ಕುತೂಹಲವನ್ನು ಕೆರಳಿಸುವಂತಿದ್ದು, ಮುಂದಿನ ಭಾಗವನ್ನು ನೋಡಲು ಉತ್ಸುಕರಾಗುವಂತೆ ಮಾಡುವಂತಿದೆ. ಇಂಥದ್ದೊಂದು ಕೌತುಕ ಮೂಡಿಸುವ ಟ್ರೇಲರ್ನಲ್ಲಿ ರಾಕಿಭಾಯ್ ಯಶ್ ಬಹುಭಾಷಾ ತಾರೆಯರ ಮುಂದೆ ಅಬ್ಬರಿಸಿದರು.
ಇಂದು ನಗರದ ಖಾಸಗಿ ಮಾಲ್ನಲ್ಲಿ ಘಟಾನುಘಟಿ ಸ್ಟಾರ್ಗಳ ಸಮ್ಮುಖದಲ್ಲಿ ಬಿಡುಗಡೆಯಾದ ಕೆಜಿಎಫ್ 2 ಟ್ರೇಲರ್ ರಿಲೀಸ್ ಕಾರ್ಯಕ್ರಮ ಬಹುಭಾಷಾ ತಾರೆಯರ ಸಂಗಮದಂತೆ ಇತ್ತು. ವರ್ಣರಂಜಿತ ಅದ್ದೂರಿ ಕಾರ್ಯಕ್ರಮದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಟ್ರೇಲರ್ ಬಿಡುಗಡೆ ಮಾಡಲಾಯಿತು.
ಸಚಿವ ಡಾ.ಅಶ್ವತ್ಥನಾರಾಯಣ, ಶಿವರಾಜ್ಕುಮಾರ್, ಹಿಂದಿ ಚಿತ್ರರಂಗದ ಸಂಜಯ್ ದತ್, ರವೀನಾ ಟಂಡನ್, ಕರಣ್ ಜೋಹರ್, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಸೇರಿ ಹಲವರು ಈ ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿದರು.
ಟ್ರೇಲರ್ ಬಿಡುಗಡೆ ಮಾಡಿದ ಶಿವರಾಜಕುಮಾರ್, ಮೊದಲ ದಿನವೇ ಸಿನಿಮಾ ನೋಡಲು ಉತ್ಸುಕನಾಗಿದ್ದೇನೆ ಎಂದರು. ಯಶ್ ಜತೆ ತಮಸ್ಸು ಸಿನಿಮಾದಲ್ಲಿ ಅಭಿನಯಿಸಿದ್ದನ್ನು ಸ್ಮರಿಸಿಕೊಂಡರು. ಟ್ರೇಲರ್ ಹಾಲಿವುಡ್ ಲೆವೆಲ್ನಲ್ಲಿ ಮೂಡಿಬಂದಿದೆ ಎಂದು ಅಶ್ವತ್ಥನಾರಾಯಣ ತಂಡದ ಡೆಡಿಕೇಷನ್ ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.
ಇದು ಎಂಟು ವರ್ಷದ ಕನಸು. ಈಗ ನಿಮ್ಮ ಮುಂದೆ ಬಂದಿದ್ದೇವೆ. ಕೆಜಿಎಫ್ ಕನ್ನಡ ಸಿನಿಮಾಗೆ ಇಡೀ ಭಾರತದಲ್ಲೇ ಒಂದು ಸ್ಥಾನ ಮಾಡಿಕೊಟ್ಟಿದೆ. ನನ್ನ ಜತೆ ವಿಶ್ವದ ದ ಬೆಸ್ಟ್ ಟೆಕ್ನಿಕಲ್ ಟೀಮ್ ಇದೆ. ಬಸ್ರೂರಿನಲ್ಲಿ ರವಿ ಸ್ಟುಡಿಯೋ ಕಟ್ಟಿಸಿದ್ದಾರೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಅವರು ಚಿತ್ರದ ಕುರಿತು ಹಾಗೂ ತಮ್ಮ ತಂಡದ ಕುರಿತು ಮಾತನಾಡಿದರು.
ಎಂಟು ವರ್ಷಗಳಲ್ಲಿ ಯಶ್ಗೆ ಎರಡು ಮಕ್ಕಳು ಹುಟ್ಟಿದವು, ಈಗ ಕೆಜಿಎಫ್ 2 ಕೂಡ ಬರ್ತಿದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದರು. ಈ ಚಿತ್ರಕ್ಕೆ ಶುಭಕೋರಿದ, ಬೆಂಬಲಿಸಿದ ಎಲ್ಲರಿಗೂ ನಿರ್ಮಾಪಕರು ಧನ್ಯವಾದ ತಿಳಿಸಿದರು.
ಮಹಿಳೆಯ ಬಗೆಗಿನ ಮನಸ್ಥಿತಿ ಬದಲಾಗಿದೆ..; ವಿಜಯವಾಣಿ ಸೆಲೆಬ್ರಿಟಿ ಕಾರ್ನರ್ನಲ್ಲಿ ಪ್ರಿಯಾಂಕಾ ಉಪೇಂದ್ರ