More

    ಬಹುಭಾಷಾ ತಾರೆಯರ ಸಮ್ಮುಖದಲ್ಲಿ ಅಬ್ಬರಿಸಿದ ರಾಕಿಭಾಯ್: ಕೆಜಿಎಫ್​2 ಟ್ರೇಲರ್ ರಿಲೀಸ್..​

    ಬೆಂಗಳೂರು: ಕೆಜಿಎಫ್​ನಲ್ಲಿ ಗರುಡನ್ನ ಸಾಯಿಸಿದ್ಮೇಲೆ ಮುಂದೇನಾಯ್ತು? ಎಂಬ ಸಾಲಿನಿಂದ ಶುರುವಾಗುವ ಕೆಜಿಎಫ್ 2 ಟ್ರೇಲರ್ ಮುಂದೇನು? ಎಂಬ ಕುತೂಹಲವನ್ನು ಕೆರಳಿಸುವಂತಿದ್ದು, ಮುಂದಿನ ಭಾಗವನ್ನು ನೋಡಲು ಉತ್ಸುಕರಾಗುವಂತೆ ಮಾಡುವಂತಿದೆ. ಇಂಥದ್ದೊಂದು ಕೌತುಕ ಮೂಡಿಸುವ ಟ್ರೇಲರ್​ನಲ್ಲಿ ರಾಕಿಭಾಯ್ ಯಶ್ ಬಹುಭಾಷಾ ತಾರೆಯರ ಮುಂದೆ ಅಬ್ಬರಿಸಿದರು.

    ಇಂದು ನಗರದ ಖಾಸಗಿ ಮಾಲ್​ನಲ್ಲಿ ಘಟಾನುಘಟಿ ಸ್ಟಾರ್​ಗಳ ಸಮ್ಮುಖದಲ್ಲಿ ಬಿಡುಗಡೆಯಾದ ಕೆಜಿಎಫ್​ 2 ಟ್ರೇಲರ್​ ರಿಲೀಸ್ ಕಾರ್ಯಕ್ರಮ ಬಹುಭಾಷಾ ತಾರೆಯರ ಸಂಗಮದಂತೆ ಇತ್ತು. ವರ್ಣರಂಜಿತ ಅದ್ದೂರಿ ಕಾರ್ಯಕ್ರಮದಲ್ಲಿ ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳ ಟ್ರೇಲರ್ ಬಿಡುಗಡೆ ಮಾಡಲಾಯಿತು.
    ಸಚಿವ ಡಾ.ಅಶ್ವತ್ಥನಾರಾಯಣ, ಶಿವರಾಜ್​ಕುಮಾರ್, ಹಿಂದಿ ಚಿತ್ರರಂಗದ ಸಂಜಯ್​ ದತ್, ರವೀನಾ ಟಂಡನ್, ಕರಣ್ ಜೋಹರ್, ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರನ್ ಸೇರಿ ಹಲವರು ಈ ಕಾರ್ಯಕ್ರಮದ ಕಳೆಯನ್ನು ಹೆಚ್ಚಿಸಿದರು.

    ಟ್ರೇಲರ್​ ಬಿಡುಗಡೆ ಮಾಡಿದ ಶಿವರಾಜಕುಮಾರ್, ಮೊದಲ ದಿನವೇ ಸಿನಿಮಾ ನೋಡಲು ಉತ್ಸುಕನಾಗಿದ್ದೇನೆ ಎಂದರು. ಯಶ್​ ಜತೆ ತಮಸ್ಸು ಸಿನಿಮಾದಲ್ಲಿ ಅಭಿನಯಿಸಿದ್ದನ್ನು ಸ್ಮರಿಸಿಕೊಂಡರು. ಟ್ರೇಲರ್ ಹಾಲಿವುಡ್ ಲೆವೆಲ್​ನಲ್ಲಿ ಮೂಡಿಬಂದಿದೆ ಎಂದು ಅಶ್ವತ್ಥನಾರಾಯಣ ತಂಡದ ಡೆಡಿಕೇಷನ್​ ತುಂಬಾ ಚೆನ್ನಾಗಿದೆ ಎಂದು ಮೆಚ್ಚುಗೆ ಸೂಚಿಸಿದರು.

    ಇದು ಎಂಟು ವರ್ಷದ ಕನಸು. ಈಗ ನಿಮ್ಮ ಮುಂದೆ ಬಂದಿದ್ದೇವೆ. ಕೆಜಿಎಫ್ ಕನ್ನಡ ಸಿನಿಮಾಗೆ ಇಡೀ ಭಾರತದಲ್ಲೇ ಒಂದು ಸ್ಥಾನ ಮಾಡಿಕೊಟ್ಟಿದೆ. ನನ್ನ ಜತೆ ವಿಶ್ವದ ದ ಬೆಸ್ಟ್​ ಟೆಕ್ನಿಕಲ್ ಟೀಮ್​ ಇದೆ. ಬಸ್ರೂರಿನಲ್ಲಿ ರವಿ ಸ್ಟುಡಿಯೋ ಕಟ್ಟಿಸಿದ್ದಾರೆ ಎಂದು ನಿರ್ದೇಶಕ ಪ್ರಶಾಂತ್ ನೀಲ್ ಅವರು ಚಿತ್ರದ ಕುರಿತು ಹಾಗೂ ತಮ್ಮ ತಂಡದ ಕುರಿತು ಮಾತನಾಡಿದರು.

    ಎಂಟು ವರ್ಷಗಳಲ್ಲಿ ಯಶ್​ಗೆ ಎರಡು ಮಕ್ಕಳು ಹುಟ್ಟಿದವು, ಈಗ ಕೆಜಿಎಫ್ 2 ಕೂಡ ಬರ್ತಿದೆ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದರು. ಈ ಚಿತ್ರಕ್ಕೆ ಶುಭಕೋರಿದ, ಬೆಂಬಲಿಸಿದ ಎಲ್ಲರಿಗೂ ನಿರ್ಮಾಪಕರು ಧನ್ಯವಾದ ತಿಳಿಸಿದರು.

    ಮಹಿಳೆಯ ಬಗೆಗಿನ ಮನಸ್ಥಿತಿ ಬದಲಾಗಿದೆ..; ವಿಜಯವಾಣಿ ಸೆಲೆಬ್ರಿಟಿ ಕಾರ್ನರ್​ನಲ್ಲಿ ಪ್ರಿಯಾಂಕಾ ಉಪೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts