ತಿರುವನಂತಪುರಂ: ಫೇಸ್ಬುಕ್ನಲ್ಲಿ ಮನಸೋಇಚ್ಛೆ ಪೋಸ್ಟ್ ಮಾಡುವ ಅಭ್ಯಾಸ ಇದ್ದರೆ ಈ ಸುದ್ದಿಯನ್ನೊಮ್ಮೆ ಓದಿ. ಬೇಕಾಬಿಟ್ಟಿ ಪೋಸ್ಟ್ ಮಾಡುವ ಮೊದಲು ಹತ್ತು ಬಾರಿ ಯೋಚಿಸಿ ಪೋಸ್ಟ್ ಮಾಡಿ. ಏಕೆಂದರೆ ಈ ರೀತಿಯ ಪೋಸ್ಟ್ ಮಾಡುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರ ಸಿದ್ಧವಾಗಿದೆ.
ಇದನ್ನೂ ಓದಿ: VIDEO| ನೀರು ಕುಡಿದ ಕಾಡಾನೆಗಳು ರಾತ್ರಿಯೀಡಿ ಚೀರಾಡುತ್ತಲೇ ಇದ್ದವು! ಸ್ಥಳಕ್ಕೆ ಹೋದ ಸಿಬ್ಬಂದಿಗೆ ಶಾಕ್
ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆ, ನಿಂದನೆ, ಅವಮಾನಕರ ಮತ್ತು ಮಾನಹಾನಿಕರ ಪೋಸ್ಟ್ಗಳನ್ನು ಹಾಕುವವರ ವಿರುದ್ಧ ಕೇರಳ ಸರ್ಕಾರ ಹೊಸ ಕಾನೂನೊಂದನ್ನು ಮಾಡಿದೆ. ಈ ಕಾನೂನಿನ ಪ್ರಕಾರ ಈ ರೀತಿಯ ಪೋಸ್ಟ್ ಮಾಡುವವರಿಗೆ ಐದು ವರ್ಷಗಳ ಜೈಲು ಮತ್ತು 10 ಸಾವಿರ ರೂಪಾಯಿ ದಂಡ ವಿಧಿಸಬಹುದಾಗಿದೆ.
ಇದನ್ನೂ ಓದಿ: ವಿಷವಿಕ್ಕಿ ಹುಲಿ ಕೊಂದ ದುರುಳರು? ಹೆತ್ತಮ್ಮನನ್ನು ಕಳೆದುಕೊಂಡ ಮರಿಗಳ ರೋದನ
ಸರ್ಕಾರದ ಈ ಕಾನೂನಿಗೆ ವಿರೋಧ ಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿವೆ. ಇದು ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿರುವ ರೀತಿ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ದೂರಿವೆ. ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಅವರು ಸರ್ಕಾರದ ಈ ನಿರ್ಧಾರದಿಂದ ಆಘಾತಕ್ಕೊಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)