More

    ದಸರೆಗೂ ಮೊದಲೇ ‘ದಸರಾ’ ಮುಗಿಸಿದ ನೀನಾಸಂ ಸತೀಶ್​-ಶರ್ಮಿಳಾ ಮಾಂಡ್ರೆ..!

    ಬೆಂಗಳೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರೆಯ ಈ ವರ್ಷದ ಆಚರಣೆಗೆ ಇದೀಗ ತಯಾರಿಯಷ್ಟೇ ಶುರುವಾಗಿದ್ದರೆ, ಅತ್ತ ನಟ ನೀನಾಸಂ ಸತೀಶ್ ಹಾಗೂ ಶರ್ಮಿಳಾ ಮಾಂಡ್ರೆ ದಸರೆಗೂ ಮೊದಲೇ ‘ದಸರಾ’ ಮುಗಿಸಿದ್ದಾರೆ. ಅರ್ಥಾತ್ ಸತೀಶ್​-ಶರ್ಮಿಳಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ದಸರಾ’ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

    ಅರವಿಂದ್ ಶಾಸ್ತ್ರಿ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ನೀನಾಸಂ ಸತೀಶ್​ ನಾಯಕನಾಗಿದ್ದರೆ, ಶರ್ಮಿಳಾ ಮಾಂಡ್ರೆ ನಾಯಕಿಯಾಗಿ ನಟಿಸುತ್ತಿರುವುದಷ್ಟೇ ಅಲ್ಲದೆ, ನಿರ್ಮಾಪಕಿಯಾಗಿ ಬಂಡವಾಳವನ್ನೂ ಹೂಡಿದ್ದಾರೆ. ‘ವೈತರಣಿ’ ಎಂಬ ಶೀರ್ಷಿಕೆಯಲ್ಲಿ ಶುರುವಾಗಿದ್ದ ಈ ಸಿನಿಮಾದ ಹೆಸರನ್ನು ಬಳಿಕ ‘ದಸರಾ’ ಎಂದು ಬದಲಿಸಲಾಗಿತ್ತು.

    ಎರಡು ವರ್ಷಗಳ ಹಿಂದೆಯೇ ಈ ಚಿತ್ರ ಆರಂಭಗೊಂಡಿದ್ದರೂ ಕರೊನಾ ಕಾರಣದಿಂದ ಚಿತ್ರೀಕರಣ ಸ್ಥಗಿತಗೊಂಡಿತ್ತು. ಈ ನಡುವೆ ನಟಿ-ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ಕಾರು ಅಪಘಾತಕ್ಕೆ ಒಳಗಾಗಿದದ್ದರಿಂದಲೂ ಚಿತ್ರೀಕರಣಕ್ಕೆ ಸ್ವಲ್ಪಮಟ್ಟಿಗೆ ಹಿನ್ನಡೆಯಾಗಿತ್ತು. ಅದಾಗ್ಯೂ ಎಲ್ಲ ಅಡೆತಡೆಗಳ ನಡುವೆಯೂ ಚಿತ್ರತಂಡ ಶೂಟಿಂಗ್ ಪೂರ್ಣಗೊಳಿಸಿದೆ. ಈ ಚಿತ್ರಕ್ಕಾಗಿ ಲಂಡನ್​ನಲ್ಲಿ 20 ದಿನ ಹಾಗೂ ಕರ್ನಾಟಕದಲ್ಲಿ 45 ದಿನಗಳು ಸೇರಿ ಒಟ್ಟು 65 ದಿನಗಳ ಚಿತ್ರೀಕರಣ ನಡೆಸಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.

    ದಸರೆಗೂ ಮೊದಲೇ 'ದಸರಾ' ಮುಗಿಸಿದ ನೀನಾಸಂ ಸತೀಶ್​-ಶರ್ಮಿಳಾ ಮಾಂಡ್ರೆ..!
    ನಿರ್ದೇಶಕ ಅರವಿಂದ್ ಶಾಸ್ತ್ರಿ, ನಟ ನೀನಾಸಂ ಸತೀಶ್, ನಟಿ-ನಿರ್ಮಾಪಕಿ ಶರ್ಮಿಳಾ ಮಾಂಡ್ರೆ ಮತ್ತಿತರರು.

    ದಸರಾದಲ್ಲಿ ಪತ್ತೇದಾರಿ ಸತೀಶ್

    ರಾಜೂ ತಾಳಿಕೋಟಿ ವಿರುದ್ಧ ಕೇಸ್​: ಸೋದರಳಿಯನ ಪತ್ನಿಗೆ ಹಲ್ಲೆ ಮಾಡಿ ಬಲವಂತವಾಗಿ ವಿಷ ಕುಡಿಸಿದ್ರಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts