More

    ಕಾಂತಾರ ಮತ್ತು ಪುಷ್ಪಾ ಸಿನಿಮಾ ಬಾಲಿವುಡ್​ನ ನಾಶ ಮಾಡುತ್ತಿವೆ ಎಂದ ಅನುರಾಗ್​ ಕಶ್ಯಪ್​

    ಬೆಂಗಳೂರು: ಕಾಂತಾರ ಸಿನಿಮಾ ಜಗತ್ತಿನಾದ್ಯಂತ ಜನರ ಗಮನ ಸೆಳೆಯುತ್ತಾ ಕೋಟಿ ಕೋಟಿ ಬಾಚುತ್ತಿದೆ. ಇನ್ನೂ ಈ ಸಿನಿಮಾ ಬಗ್ಗೆ ಮಾತುಗಳು ನಿಲ್ಲುತ್ತಿಲ್ಲ. ಇತ್ತೀಚೆಗಷ್ಟೆ ಜಯಾ ಬಚ್ಚನ್​, ರಿಷಭ್ ಶೆಟ್ರ ಡ್ರೆಸ್​ ಕೋಡ್​ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಕೆಲ ದಿನಗಳ ಹಿಂದೆ, ಸಂದರ್ಶನ ಒಂದರಲ್ಲಿ ಖ್ಯಾತ ನಿರ್ದೇಶಕ ಅನುರಾಗ್​ ಕಶ್ಯಪ್​ ಕಾಂತಾರ ಹಾಗೂ ಪುಷ್ಪಾ ಸಿನಿಮಾಗಳ ಬಗ್ಗೆ ಅಸಮಾಧಾನ ಹಾಕಿದ್ದಾರೆ.

    ಇದೀಗ ಬಾಲಿವುಡ್​ನೊಳಗೇ ನಿರ್ದೇಶಕರ ನಡುವೆ ಜಟಾಪಟಿಗೆ ಕಾರಣವಾಗಿದೆ. ಈಗ ಕಾಶ್ಮೀರ್​ ಫೈಲ್ಸ್​ ನಿರ್ದೇಶಕ ವಿವೇಕ್​ ರಂಜನ್​ ಅಗ್ನಿಹೋತ್ರಿ ಹಾಗೂ ಅನುರಾಗ್​ ಕಶ್ಯಪ್​ ನಡುವೆ ಕಿತ್ತಾಟ ಶುರುವಾಗಿದೆ.

    ಸಂದರ್ಶದಲ್ಲಿ ಅನುರಾಗ್​ ಕಶ್ಯಪ್​ ‘ಎಲ್ಲರೂ ಈಗ ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಯಶಸ್ಸಿನ ಪ್ರಮಾಣ ಕೇವಲ 5-10 ಪರ್ಸೇಂಟ್​​​​ ಅಷ್ಟೆ. ‘ಕಾಂತಾರ’ ಹಾಗೂ ‘ಪುಷ್ಪ’ದಂತಹ ಸಿನಿಮಾಗಳು ಬಾಲಿವುಡ್​ ಇಂಡಸ್ಟ್ರಿಯನ್ನ ಹಾಳು ಮಾಡುತ್ತವೆ’ ಎಂದು ಸಂದರ್ಶನವೊಂದ್ರಲ್ಲಿ ಹೇಳಿಕೊಂಡಿದ್ದರು.

    ಇದಕ್ಕೆ ವಿವೇಕ್​ ಅಗ್ನಿಹೋತ್ರಿ ಕೌಂಟರ್​ ಕೊಟ್ಟಿದ್ದು ‘ಈ ಅಭಿಪ್ರಾಯವನ್ನು ನಾನು ಒಪ್ಪೋದಿಲ್ಲ. ‘ನೀವಿದನ್ನ ಒಪ್ಪುತೀರಾ’ ಅಂತ ವಿವೇಕ್​ ಟ್ವೀಟ್​ ಮೂಲಕ ಅಭಿಮಾನಿಗಳಲ್ಲಿ ಕೇಳಿದ್ದರು.

    ಇದನ್ನು ಇನ್ನೂ ಮುಂದುವರೆಸಿದ ಅನುರಾಗ್​ ಕಶ್ಯಪ್​, ‘ಸರ್, ಇದು ನಿಮ್ಮ ತಪ್ಪಲ್ಲ. ನಮ್ಮ ಸಂಭಾಷಣೆಯ ರೀತಿಯಲ್ಲೇ ನಿಮ್ಮ ಚಲನಚಿತ್ರಗಳ ರಿಸರ್ಚ್​ ಕೂಡ ಇದೆ. ನಿಮ್ಮ ಮತ್ತು ನಿಮ್ಮ ಮಾಧ್ಯಮದ ಸ್ಥಿತಿಯೂ ಅದೇ. ಮುಂದಿನ ಬಾರಿ ಸ್ವಲ್ಪ ಗಂಭೀರವಾದ ಸಂಶೋಧನೆ ಮಾಡಿ’ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts