ಬೆಂಗಳೂರು: ಕಾಂತಾರ ಸಿನಿಮಾ ಜಗತ್ತಿನಾದ್ಯಂತ ಜನರ ಗಮನ ಸೆಳೆಯುತ್ತಾ ಕೋಟಿ ಕೋಟಿ ಬಾಚುತ್ತಿದೆ. ಇನ್ನೂ ಈ ಸಿನಿಮಾ ಬಗ್ಗೆ ಮಾತುಗಳು ನಿಲ್ಲುತ್ತಿಲ್ಲ. ಇತ್ತೀಚೆಗಷ್ಟೆ ಜಯಾ ಬಚ್ಚನ್, ರಿಷಭ್ ಶೆಟ್ರ ಡ್ರೆಸ್ ಕೋಡ್ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಕೆಲ ದಿನಗಳ ಹಿಂದೆ, ಸಂದರ್ಶನ ಒಂದರಲ್ಲಿ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಕಾಂತಾರ ಹಾಗೂ ಪುಷ್ಪಾ ಸಿನಿಮಾಗಳ ಬಗ್ಗೆ ಅಸಮಾಧಾನ ಹಾಕಿದ್ದಾರೆ.
ಇದೀಗ ಬಾಲಿವುಡ್ನೊಳಗೇ ನಿರ್ದೇಶಕರ ನಡುವೆ ಜಟಾಪಟಿಗೆ ಕಾರಣವಾಗಿದೆ. ಈಗ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ರಂಜನ್ ಅಗ್ನಿಹೋತ್ರಿ ಹಾಗೂ ಅನುರಾಗ್ ಕಶ್ಯಪ್ ನಡುವೆ ಕಿತ್ತಾಟ ಶುರುವಾಗಿದೆ.
ಸಂದರ್ಶದಲ್ಲಿ ಅನುರಾಗ್ ಕಶ್ಯಪ್ ‘ಎಲ್ಲರೂ ಈಗ ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದ್ರೆ ಯಶಸ್ಸಿನ ಪ್ರಮಾಣ ಕೇವಲ 5-10 ಪರ್ಸೇಂಟ್ ಅಷ್ಟೆ. ‘ಕಾಂತಾರ’ ಹಾಗೂ ‘ಪುಷ್ಪ’ದಂತಹ ಸಿನಿಮಾಗಳು ಬಾಲಿವುಡ್ ಇಂಡಸ್ಟ್ರಿಯನ್ನ ಹಾಳು ಮಾಡುತ್ತವೆ’ ಎಂದು ಸಂದರ್ಶನವೊಂದ್ರಲ್ಲಿ ಹೇಳಿಕೊಂಡಿದ್ದರು.
ಇದಕ್ಕೆ ವಿವೇಕ್ ಅಗ್ನಿಹೋತ್ರಿ ಕೌಂಟರ್ ಕೊಟ್ಟಿದ್ದು ‘ಈ ಅಭಿಪ್ರಾಯವನ್ನು ನಾನು ಒಪ್ಪೋದಿಲ್ಲ. ‘ನೀವಿದನ್ನ ಒಪ್ಪುತೀರಾ’ ಅಂತ ವಿವೇಕ್ ಟ್ವೀಟ್ ಮೂಲಕ ಅಭಿಮಾನಿಗಳಲ್ಲಿ ಕೇಳಿದ್ದರು.
ಇದನ್ನು ಇನ್ನೂ ಮುಂದುವರೆಸಿದ ಅನುರಾಗ್ ಕಶ್ಯಪ್, ‘ಸರ್, ಇದು ನಿಮ್ಮ ತಪ್ಪಲ್ಲ. ನಮ್ಮ ಸಂಭಾಷಣೆಯ ರೀತಿಯಲ್ಲೇ ನಿಮ್ಮ ಚಲನಚಿತ್ರಗಳ ರಿಸರ್ಚ್ ಕೂಡ ಇದೆ. ನಿಮ್ಮ ಮತ್ತು ನಿಮ್ಮ ಮಾಧ್ಯಮದ ಸ್ಥಿತಿಯೂ ಅದೇ. ಮುಂದಿನ ಬಾರಿ ಸ್ವಲ್ಪ ಗಂಭೀರವಾದ ಸಂಶೋಧನೆ ಮಾಡಿ’ ಎಂದಿದ್ದಾರೆ.