More

    ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು; ‘ಆನಂದ’ದಲ್ಲಿ ತಲೆದೂಗಿದ ಸಚಿವ…

    ವಿಜಯನಗರ: ಕನಕದಾಸರ ಜಯಂತಿ ಹಿನ್ನೆಲೆಯಲ್ಲಿ ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿರುವ ಕ‌ನಕದಾಸ ವೃತ್ತದಲ್ಲಿ ಪುತ್ಥಳಿ ಅನಾವರಣ ಮಾಡಲಾಯಿತು. ಈ ಸಂದರ್ಭದಲ್ಲಿ ಸಚಿವ ಆನಂದ್​ ಸಿಂಗ್​ ವಿಶಿಷ್ಟವಾಗಿ ಜನರ ಗಮನ ಸೆಳೆದದ್ದು ಸುಳ್ಳಲ್ಲ.

    ಕನಕದಾಸರ ಪುತ್ಥಳಿ ಅನಾವರಣದ ಸಭಾ ಕಾರ್ಯಕ್ರಮದಲ್ಲಿ ಆನಂದ್​ ಸಿಂಗ್​ ತಮ್ಮ ಮೊಬೈಲ್​ನಲ್ಲಿದ್ದ ಹಾಡನ್ನು ವೇದಿಕೆಯ ಮುಂಭಾಗದಲ್ಲಿದ್ದ ಜನರಿಗೆ ಕೇಳಿಸಿದ್ದಾರೆ. ತಮ್ಮ ಭಾಷಣದ ನಡುವೆ ನಿನ್ನಂತಾಗಬೇಕು ಕನಕ ನಿನ್ನಂತಾಗಬೇಕು ಎನ್ನುವ ಹಾಡನ್ನು ಜನರಿಗೆ ಕೇಳಿಸಿದಾಗ ಜನರೂ ಉತ್ತಮ ಸ್ಪಂದನೆ ನೀಡಿದರು.

    ಹಾಡನ್ನು ಪ್ಲೇ ಮಅಡುವ ಸಂದರ್ಭ ಈ ಗೀತೆಗೆ ಸಚಿವ ಆನಂದ್ ಸಿಂಗ್ ತಲೆಯಾಡಿಸುತ್ತಾ ಸಣ್ಣಗೆ ಧ್ವನಿ ಸೇರಿಸಿದರು. ಗೀತೆಯನ್ನು ಕೇಳುತ್ತಿದ್ದಂತೆಯೇ ಜನರು ಚಪ್ಪಾಳೆ ಮತ್ತು ಸಿಳ್ಳೆ ಕೇಕೆ ಹೊಡೆದರು. ಈ ಹಾಡನ್ನು ಕೇಳಿಸಿದ ನಂತರ ‘ನೀವು ಕೂಡ ಹೀಗೇ ಆಗಬೇಕು’ ಎಂದು ಜನರಿಗೆ ಆನಂದ್​ ಸಿಂಗ್​ ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts