ಕಲಬುರಗಿ: ಕಲಬುರಿಯ ಸೂಪರ್ ಮಾರ್ಕೆಟ್ನಲ್ಲಿ ಈತ ಮಾಡಿದ ಕೆಲಸಕ್ಕೆ ಜನರು ಭಯಭೀತರಾಗಿದ್ದಾರೆ. ಕಡೆಗೆ ವಿಧಿಯಿಲ್ಲದೇ ಪೊಲೀಸರು ಈತನ ಕಾಲಿಗೆ ಗುಂಡು ಹೊಡೆದು ಸೆರೆ ಹಿಡಿದಿದ್ದಾರೆ.
ಕಲಬುರಗಿ ನಗರದ ಅಬ್ದುಲ್ ಜಾಫರ್ ಸಾಬ್ ಎನ್ನುವಾತ ಮಾನಸಿಕ ಅಸ್ವಸ್ಥತೆಯಿಂದನ ಬಳಲುತ್ತಿದ್ದು ಸೂಪರ್ ಮಾರ್ಕೆಟ್ನೊಳಗೆ ಈತ ಚಾಕು ಹಿಡಿದು ಜನರೊಗೆ ಇರಿಯುವುದಾಗಿ ಬೆದರಿಕೆ ಹಾಕುತ್ತಿದ್ದ. ಇದರಿಂದ ಭಯಭೀತರಾದ ಜನರು ತಕ್ಷಣ ಪೊಲೀಸರನ್ನು ಕರೆದಿದ್ದಾರೆ.
ಕೂಡಲೆ ಕಾರ್ಯಪ್ರವೃತ್ತರಾದ ಪೊಲೀಸರು ಸೂಪರ್ ಮಾರ್ಕೆಟ್ಗೆ ಬಂದು ಈತನಲ್ಲಿ ಚಾಕು ಬಿಸಾಡುವಂತೆ ಸಾಕಷ್ಟು ಬಾರಿ ವಿನಂತಿಸಿದ್ದಾರೆ. ಆದರೆ ಇದ್ಯಾವುದಕ್ಕೂ ಜಾಫರ್ ಸಾಬ್ ಕ್ಯಾರೆ ಅನ್ನಲಿಲ್ಲ. ಬದಲಾಗಿ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾನೆ.
ಹೀಗಾಗಿ ವಿಧಿ ಇಲ್ಲದೇ ಪೊಲೀಸರು ಆತ್ಮರಕ್ಷಣೆ ಸಲುವಾಗಿ ಅಬ್ದುಲ್ ಜಾಫರ್ ಮೇಲೆ ಫೈರಿಂಗ್ ನಡೆಸಿದ್ದಾರೆ. ಈ ಸಂದರ್ಭ ಪಿಎಸ್ಐ ವಾಹಿದ್ ಕೊತ್ವಾಲ್ ಒಟ್ಟು ಮೂರಿ ಬಾರಿ ಅಬ್ದುಲ್ ಜಾಫರ್ ಕಾಲಿಗೆ ಗುಂಡು ಹಾರಿಸಿದ್ದು ಗಾಯಗೊಂಡ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.