More

    ಕಾಲಭೈರವೇಶ್ವರ ಬಸಪ್ಪನ ಪವಾಡ: ಮಾತು ಕೇಳಿದವನಿಗೆ ಪಾಠ ಕಲಿಸಿ, ಅರ್ಚಕನಾಗಿ ನೇಮಕ ಮಾಡಿದ ಬಸಪ್ಪ!

    ಮಂಡ್ಯ: ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯ ಕಾಲಭೈರವೇಶ್ವರಸ್ವಾಮಿ ಬಸಪ್ಪ, ಈರೇಗೌಡನದೊಡ್ಡಿಯಲ್ಲಿ ಅರ್ಚಕನನ್ನು ನೇಮಿಸಿ ಮತ್ತೊಂದು ಪವಾಡ ಮೆರೆದಿದೆ.

    ಈರೇಗೌಡನದೊಡ್ಡಿಯ ಮಾರಮ್ಮ ದೇವಸ್ಥಾನಕ್ಕೆ ಅರ್ಚಕನನ್ನು ನೇಮಕ ಮಾಡಲು ಗ್ರಾಮಸ್ಥರಲ್ಲಿದ್ದ ಗೊಂದಲ ಉಂಟಾಗಿತ್ತು. ಹೀಗಾಗಿ ಗೊಂದಲ‌ ಬಗೆಹರಿಸಿಕೊಳ್ಳಲು ಗ್ರಾಮಸ್ಥರು ಕಾಲಭೈರವೇಶ್ವರಸ್ವಾಮಿ ಬಸಪ್ಪನ ಮೊರೆ ಹೋಗಿದ್ದರು.

    ಇದನ್ನೂ ಓದಿರಿ: ಅಂತ್ಯಸಂಸ್ಕಾರವಾದ ನಾಲ್ಕು ದಿನಗಳ ಬಳಿಕ ಬದುಕಿಬಂದ ಗಂಡನನ್ನು ನೋಡಿ ಪತ್ನಿಗೆ ಶಾಕ್​..!

    ಈ ವೇಳೆ ಬಸಪ್ಪ ಈರೇಗೌಡನದೊಡ್ಡಿಯ ಕೃಷ್ಣ ಎಂಬುವವರನ್ನು ಅರ್ಚಕರನ್ನಾಗಿ ಆಯ್ಕೆ ಮಾಡಿದೆ. ಆದರೆ, ಆರಂಭದಲ್ಲಿ ಕೃಷ್ಣ, ಬಸಪ್ಪನ ಆಯ್ಕೆಯನ್ನು ತಿರಸ್ಕರಿಸಿದದ್ದ. ನನಗೆ ಸಾಕಷ್ಟು ಕಷ್ಟಗಳು ಇವೆ. ನಾನು ಅರ್ಚಕ ಆಗಲ್ಲ ಎಂದಿದ್ದ. ಇದಕ್ಕೆ‌ ಕೋಪಗೊಂಡ ಬಸಪ್ಪ, ಕೆಳಕ್ಕೆ ನೂಕಿ ಕೃಷ್ಣನಿಗೆ ಪಾಠ ಕಲಿಸಿತು. ಅಂತಿಮವಾಗಿ ಕೃಷ್ಣ ಬಸಪ್ಪನ ತೀರ್ಪು ಒಪ್ಪಿಕೊಂಡ.

    ಇದಾದ ಬಳಿಕ ಕೃಷ್ಣನನ್ನು ಗ್ರಾಮದ ಕಲ್ಯಾಣಿಗೆ ನೂಕಿ ಅರ್ಚಕ ಎಂದು ಬಸಪ್ಪ ನೇಮಕ‌ ಮಾಡಿತು. ಬಸಪ್ಪನ ಪವಾಡ ನೋಡಿ ಗ್ರಾಮಸ್ಥರು ಪೂಜೆ ಮಾಡಿ ಗೌರವ ಸಲ್ಲಿಸಿದರು. (ದಿಗ್ವಿಜಯ ನ್ಯೂಸ್​)

    ಲೈವ್​ನಲ್ಲೇ ವಿಷ ಕುಡಿದ ಅರ್ಚಕ! 3 ದಿನದ ಬಳಿಕ ಸೆಲ್ಫಿವಿಡಿಯೋ ವೈರಲ್​, ಡೆತ್​ನೋಟ್​ನಲ್ಲಿದೆ ಸ್ಫೋಟಕ ರಹಸ್ಯ

    ಎಲ್ಲರಿಗೂ ಸಿಗಲ್ಲ ಇಂಥ ಚಾನ್ಸ್​! ಇಬ್ಬರು ಪ್ರಿಯತಮೆಯರನ್ನು ಒಂದೇ ಮಂಟಪದಲ್ಲಿ ಮದುವೆಯಾದ ಭೂಪ!

    ಹಕ್ಕಿ ಜ್ವರದ ಎಫೆಕ್ಟ್​ ಚಿಕನ್​ ಬೆಲೆಯಲ್ಲಿ ಕುಸಿತ: ಬಾಯ್ಲರ್​ ಕೋಳಿ ಕೆಜಿಗೆ 15 ರೂ.!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts