ಬೆಂಗಳೂರು: ವಿಧಾನಸೌಧಕ್ಕೂ ವ್ಯಾಪಿಸಿರುವ ಕರೊನಾ ಸೋಂಕು ಇದೀಗ ವಿಧಾನಸಭಾಧ್ಯಕ್ಷ-ಸಭಾಪತಿಗೂ ಸೋಕಿದೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಇಬ್ಬರಲ್ಲೂ ಕೋವಿಡ್-19 ಸೋಂಕು ದೃಢಪಟ್ಟಿದೆ.
ಕೋವಿಡ್-19 ಪರೀಕ್ಷಾ ವರದಿ ಪಾಸಿಟಿವ್ ಬಂದಿರುವುದು ತಿಳಿಯುತ್ತಿದ್ದಂತೆ ಕಾಗೇರಿಯವರು ತಮ್ಮ ಊರಾದ ಶಿರಸಿಯ ಮನೆಯಲ್ಲೇ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಆದರೆ ಬಸವರಾಜ ಹೊರಟ್ಟಿ ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ತಮ್ಮ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಕೋವಿಡ್ ಟೆಸ್ಟ್ಗೆ ಒಳಗಾಗಿ ಸೂಕ್ತ ಮುನ್ನೆಚ್ಚರಿಕೆ ವಹಿಸಬೇಕು ಎಂದು ಇಬ್ಬರೂ ಕೋರಿಕೊಂಡಿದ್ದಾರೆ.
ಪ್ರಧಾನಿ ಮೋದಿಯವರ ಹತ್ತಿರದ ಸಂಬಂಧಿ ಕೋವಿಡ್ಗೆ ಬಲಿ; ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲೇ ಕೊನೆಯುಸಿರು..
ಆತಂಕ ಮೂಡಿಸಿದೆ ಡಬಲ್ ಮ್ಯೂಟೆಂಟ್ ವೈರಸ್!; ರಾಜ್ಯದಲ್ಲಿ 20 ಮಂದಿಯಲ್ಲಿ ಸೋಂಕು ದೃಢ..
ಮನೆ ಮುಂದೆ ಕಸ ಗುಡಿಸಿಲ್ಲ, ರಂಗೋಲಿ ಬಿಡಿಸಿಲ್ಲ ಎಂದರೆ ಹುಷಾರು!; ಈ ಕಳ್ಳ ‘ಚಪಾತಿ-ಮೀನು’ಗಳಿಗೆ ಇದೇ ನಿಸೂರು..!!!