More

    23ರಿಂದ ಕದಂಬ ನಗೆ ನಾಟಕೋತ್ಸವ

    ಮೈಸೂರು: ಕದಂಬ ರಂಗ ವೇದಿಕೆಯಿಂದ ಮೇ 23, 24 ಮತ್ತು 25 ರಂದು ನಗರದ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ‘ಕದಂಬ ನಗೆ ನಾಟಕೋತ್ಸವ’ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದರು.

    ಪ್ರತಿದಿನ ಸಂಜೆ 7 ಗಂಟೆಗೆ ನಾಟಕ ಪ್ರದರ್ಶನ ನಡೆಯಲಿದೆ. 23 ರಂದು ಸಂಜೆ 6.30ಕ್ಕೆ ಪಂಚಾಕ್ಷರ ನಾಟ್ಯ ಸಂಘದ ಮಾಲೀಕ ಜೇವರ್ಗಿ ರಾಜಣ್ಣ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಕಲಾವಿದ ಮೈಸೂರು ಆನಂದ್ ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    23 ರಂದು ಶಶಿರಾಜ್ ರಾವ್ ಕಾವೂರು ರಚನೆಯ ಜೀವನ್‌ಕುಮಾರ್ ಹೆಗ್ಗೋಡು ನಿರ್ದೇಶನದ ‘ನೆಮ್ಮದಿ ಅಪಾರ್ಟ್‌ಮೆಂಟ್’ ನಾಟಕ ಪ್ರದರ್ಶನ ನಡೆಯಲಿದೆ. 24 ರಂದು ಶೈಲೇಶ್ ಕುಮಾರ್ ನಿರ್ಮಾಣದ ಭರತ್ ಸ.ಜಗನ್ನಾಥ್ ರಚಿಸಿ ನಿರ್ದೇಶಿಸಿರುವ ‘ಈ ಪ್ರೇಮಲೋಕ ಗೀತೆ’ ನಾಟಕ, 25 ರಂದು ಅಂತರಂಗ ಬಹಿರಂಗ ತಂಡದ ಎಸ್.ವಿಕಾಸ್ ನಿರ್ದೇಶನದ ‘ಅನುಮಾನದ ಅವಾಂತರ’ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.
    ಹಿರಿಯ ರಂಗಕರ್ಮಿ ಮೈಮ್ ರಮೇಶ್ ನಾಟಕೋತ್ಸವದ ಭಿತ್ತಿಚಿತ್ರ ಬಿಡುಗಡೆಗೊಳಿಸಿದರು. ಅಶ್ವಥ್ ಕದಂಬ, ಸೂರಜ್ ರಮೇಶ್, ಸುನೀತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts