ಚೆನ್ನೈ: ದೀಪಾವಳಿ ಸನಿಹದಲ್ಲಿರುವಾಗಲೇ ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ವಿ.ಪಾರ್ಥಿಬನ್ ಅವರು ಉಲ್ಲೇಖಿಸಿದ ‘ಪಟಾಕಿ ಸಿಡಿಸೋದು ದೀಪಾವಳಿ ಹಬ್ಬದ ಅವಿಭಾಜ್ಯ ಅಂಗ’ ಎಂಬ ಐತಿಹಾಸಿಕ ಆಬ್ಸರ್ವೇಶನ್ ದೇಶದ ಗಮನಸೆಳೆದಿದೆ. ಕುತೂಹಲ ಕೆರಳಿಸಿದ ಉದ್ಯೋಗ ನೇಮಕಾತಿ ವಿವಾದ ಪ್ರಕರಣದ ತೀರ್ಪಿನಲ್ಲಿ ಇದು ಉಲ್ಲೇಖವಾಗಿದೆ.
ಎ.ಬಾಲಾಜಿ ವರ್ಸಸ್ ದ ಚೇರ್ಮನ್ ತಮಿಳುನಾಡು ಯೂನಿಫಾರ್ಮ್ಡ್ ಸರ್ವೀಸಸ್ ರಿಕ್ರೂಟ್ಮೆಂಟ್ ಬೋರ್ಡ್ ಚೆನ್ನೈ ಪ್ರಕರಣ ಇದಾಗಿದ್ದು, ಸೆಪ್ಟೆಂಬರ್ 5 ರಂದು 30 ಪುಟಗಳ ಆದೇಶವನ್ನು ಕೋರ್ಟ್ ನೀಡಿದೆ. ಎ.ಬಾಲಾಜಿ ಗ್ರೇಡ್ 2 ಪೊಲೀಸ್ ಕಾನ್ಸ್ಟೆಬಲ್ ಹುದ್ದೆಗೆ ನೇಮಕ ಬಯಸಿದ್ದರು. ಅಗತ್ಯ ಹಂತಗಳ ಪರೀಕ್ಷೆಗಳಲ್ಲಿ ಉತ್ತೀರ್ಣರಾದಾಗ್ಯೂ, ಪಟಾಕಿ ಸಿಡಿಸುವ ವಿಚಾರ ಅಪರಾಧವೆಂದು ಪರಿಗಣಿಸಲ್ಪಟ್ಟಿರುವ ಐಪಿಸಿ ಸೆಕ್ಷನ್ 285ರ ಬಗ್ಗೆ ಕೊಟ್ಟ ವಿಶ್ಲೇಷಣಾತ್ಮಕ ವಿವರಣೆಯ ಕಾರಣಕ್ಕೆ ಉದ್ಯೋಗ ನಿರಾಕರಿಸಿತ್ತು ನೇಮಕ ಮಂಡಳಿ.
ಇದನ್ನೂ ಓದಿ: ಹೃದಯ ಚೆನ್ನಾಗಿ ಕೆಲಸ ಮಾಡ್ಬೇಕು ಅಂದ್ರೆ ಬಾದಾಮಿ ತಿನ್ಬೇಕಂತೆ…
ಸಕಾರಣವಿಲ್ಲದೆ ಉದ್ಯೋಗ ನಿರಾಕರಿಸಿದ್ದನ್ನು ಪ್ರಶ್ನಿಸಿ ಎ. ಬಾಲಾಜಿ ಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆ ನಂತರದಲ್ಲಿ ಕೋರ್ಟ್, ನೇಮಕ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದೆ. ನೇಮಕ ಪ್ರಕ್ರಿಯೆಯಲ್ಲಿ ವಿಕ್ಟೋರಿಯನ್ ಕಾಲದ ಮಾನದಂಡ ಮತ್ತು ಉಟೋಪಿಯನ್ ನಿರೀಕ್ಷೆಗಳನ್ನು ಇರಿಸಿಕೊಂಡು ನೇಮಕಾತಿ ಪ್ರಕ್ರಿಯೆ ನಡೆಸುತ್ತಿರುವುದು ಸರಿಯಲ್ಲ ಎಂದು ಛಾಟಿ ಬೀಸಿದೆ. ಅಲ್ಲದೆ, ಪಟಾಕಿ ಸಿಡಿಸೋದು ದೀಪಾವಳಿ ಹಬ್ಬದ ಅವಿಭಾಜ್ಯ ಅಂಗ. ಅದು ನಮ್ಮ ಸಂಸ್ಕೃತಿಯಲ್ಲಿ ಬೇರೂರಿದೆ ಎಂಬುದನ್ನು ನಿರ್ಲಕ್ಷಿಸಿರುವುದು ಸರಿಯಲ್ಲ ಎಂದು ಆದೇಶದಲ್ಲಿ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಮಾಹಿತಿ – ಒಪಿಇಂಡಿಯಾ (ಏಜೆನ್ಸೀಸ್)
ರೈಲ್ವೆ ಟಿಕೆಟ್ ಕನ್ಫರ್ಮ್ ಮಾಡ್ತಾ ಇದ್ದ ‘ರಿಯಲ್ ಮ್ಯಾಂಗೋ’ ಆರ್ಪಿಎಫ್ ಬಲೆಗೆ