More

    ಹೃದಯ ಚೆನ್ನಾಗಿ ಕೆಲಸ ಮಾಡ್ಬೇಕು ಅಂದ್ರೆ ಬಾದಾಮಿ ತಿನ್ಬೇಕಂತೆ…

    ನವದೆಹಲಿ: ಹೃದಯ ಚೆನ್ನಾಗಿ ಕೆಲಸ ಮಾಡಬೇಕು ಅಂದ್ರೆ ಬಾದಾಮಿ ಬೀಜ ತಿನ್ನಬೇಕು ಅಂತಿದೆ ಅಧ್ಯಯನ ವರದಿ. ವಿಶೇಷವಾಗಿ ಮೆಂಟಲ್ ಸ್ಟ್ರೆಸ್ ಉಂಟುಮಾಡುವ ಹಾರ್ಟ್ ರೇಟ್ ವೇರಿಯೆಬಿಲಿಟಿ(ಎಚ್​ಆರ್​ವಿ) ಅಥವಾ ಹೃದಯ ಬಡಿತದ ವ್ಯತ್ಯಾಸವನ್ನು ಕಡಿಮೆ ಮಾಡುತ್ತದೆ ಎಂಬುದು ಅಧ್ಯಯನದಲ್ಲಿ ಕಂಡುಬಂದ ಮುಖ್ಯ ಅಂಶ.

    ಎಚ್​ಆರ್​ವಿ ಎಂಬುದು ಎರಡು ನಿರಂತರ ಹೃದಯ ಬಡಿತಗಳ ನಡುವಿನ ಅಂತರದ ಸಮಯದಲ್ಲಾಗುವ ವ್ಯತ್ಯಾಸವನ್ನು ಅಳೆಯುವ ಮಾಪನ. ಶರೀರದ ಚಯಾಪಚಯದ ಬೇಡಿಕೆಗಳನ್ನು ಈಡೇರಿಸುವ ಹೃದಯದ ಸಾಮರ್ಥ್ಯವೇ ಕಾರ್ಡಿಯಾಕ್ ಫಂಕ್ಷನ್​ ಅಥವಾ ಹೃದಯದ ಕೆಲಸ ಎನ್ನುತ್ತಾರೆ.

    ಇದನ್ನೂ ಓದಿ:  ಎದೆಹಾಲಿಗೆ ಮುಗಿಬಿದ್ದ ಪುರುಷರು; ತೂಕ ಇಳಿಕೆ, ಶಕ್ತಿ ವರ್ಧನೆ ಕಾರಣ..! ತಜ್ಞರು ಹೇಳೋದೇನು?

    ಅಮೆರಿಕನ್ ಜರ್ನಲ್​ ಆಫ್ ಕ್ಲಿನಿಕಲ್ ನ್ಯೂಟ್ರಿಷನ್​ ನಲ್ಲಿ ಪ್ರಕಟವಾದ ವರದಿ ಪ್ರಕಾರ, ಕಾರ್ಡಿಯೋವಾಸ್ಕುಲರ್ ಡಿಸೀಸ್​(ಸಿವಿಡಿ)ಗೆ ಮೆಂಟಲ್​ ಸ್ಟ್ರೆಸ್ ​ಪ್ರಮುಖ ಕಾರಣವಾಗಿದ್ದು, ಜೀವನ ಶೈಲಿ, ಆಹಾರ ಕ್ರಮಗಳೂ ಪರಿಣಾಮಬೀರುತ್ತದೆ. ಸ್ಟ್ರೆಸ್​ಗೆ ಕಾರ್ಡಿಯೋವಾಸ್ಕುಲರ್ ವ್ಯವಸ್ಥೆ ಪ್ರತಿಕ್ರಿಯಿಸುವ ಪ್ರಮುಖ ಸಂಕೇತವೇ ಎಚ್​ಆರ್​ವಿಯಾಗಿದೆ.

    ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಕ್ಕಳ ಸೋಗಿನಲ್ಲಿ ಭಾರೀ ವಂಚನೆ

    ಬ್ರಿಟನ್​ನ ಕಿಂಗ್ಸ್ ಕಾಲೇಜು ಲಂಡನ್​ನ ಸಂಶೋಧಕರು ಈ ಅಧ್ಯಯನವನ್ನು ನಡೆಸಿದ್ದು, ಹೆಚ್ಚಿನ ಎಚ್​ಆರ್​ವಿ ಇದೆ ಎಂದಾದರೆ ಪರಿಸರಾತ್ಮಕ ಮತ್ತು ಸೈಕಾಲಾಜಿಕಲ್ ಸವಾಲುಗಳನ್ನು ಎದುರಿಸುವ ಹೃದಯದ ಸಾಮರ್ಥ್ಯ ಹೆಚ್ಚಿದೆ ಎಂದರ್ಥ. ಇದೇ ವೇಳೆ, ಎಚ್​ಆರ್​​ವಿ ಕಡಿಮೆ ಇದೆ ಎಂದರೆ ಕಾರ್ಡಿಯೋವಾಸ್ಕುಲರ್​ ಡಿಸೀಸ್​ ಮತ್ತು ಸಡನ್ ಆಗಿ ಕಾರ್ಡಿಯಾಕ್ ಡೆತ್ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ ಎಂದರ್ಥ ಎಂದು ಅವರು ವಿವರಿಸಿದ್ದಾರೆ. (ಏಜೆನ್ಸೀಸ್)

    ಹೆಚ್ಚುವರಿ ಅಡ್ವೋಕೇಟ್ ಜನರಲ್​ ಆಗಿ ಅರುಣ ಶ್ಯಾಮ ನೇಮಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts