More

    ವಿಜಯ್ ದೇವರಕೊಂಡ ಹೆಸರೇಳದ ಜೂ.ಎನ್ಟಿಆರ್! ‘ಫ್ಯಾಮಿಲಿ ಸ್ಟಾರ್’​ ಬಗ್ಗೆಯೂ ಒಂದು ಮಾತಾಡಲಿಲ್ಲ…

    ಆಂಧ್ರಪ್ರದೇಶ: ತೆಲುಗು ನಟ, ಜೂ. ಎನ್‌ಟಿಆರ್ ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಟಿಲ್ಲು ಸ್ಕ್ವೇರ್‌ ಚಿತ್ರದ ಸಕ್ಸಸ್​ ಮೀಟ್ ಸಮಾರಂಭದಲ್ಲಿ ಭಾಗಿಯಾಗಿ, ಸಿನಿಮಾ ತಂಡವನ್ನು ಹಾಗೂ ಕಲಾವಿದರುನ್ನು ಪ್ರತ್ಯೇಕವಾಗಿ ಹೆಸರಿಸಿ ಶುಭಕೋರಿದರು. ವಿಶೇಷವಾಗಿ ಚಿತ್ರದ ನಾಯಕ ಸಿದ್ದು ಜೊನ್ನಲಗಡ್ಡ ಮತ್ತು ನಟಿ ಅನುಪಮಾ ಪರಮೇಶ್ವರನ್ ಅಭಿನಯಕ್ಕೆ ಅಭಿನಂದನೆ ಸಲ್ಲಿಸಿದರು.

    ಇದನ್ನೂ ಓದಿ: ಗೃಹಲಕ್ಷ್ಮೀ ಯೋಜನೆಯ ಹಣದಲ್ಲಿ ರೆಫ್ರಿಜರೇಟರ್ ಖರೀದಿ; 17,500 ರೂಪಾಯಿ ಕೊಟ್ಟು ಪ್ರೀಡ್ಜ್ ಖರೀದಿಸಿದ ಶಿಗ್ಗಾಂವಿ ಮಹಿಳೆ; ಡಿಸಿಎಂ ಡಿಕೆಶಿ ಟ್ವೀಟ್ :

    ಸದ್ಯ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರ ವಿಶ್ವದಾದ್ಯಂತ 100 ಕೋಟಿ ರೂ.ಗೂ ಹೆಚ್ಚು ಆದಾಯ ಗಳಿಸಿದೆ. ಈ ಮೂಲಕ ಸೆನ್ಸೇಷನಲ್ ಹಿಟ್ ಚಿತ್ರವಾಗಿ ಹೊರಹೊಮ್ಮಿದೆ. ಚಿತ್ರತಂಡವು ನಡೆಸಿದ ಸಕ್ಸಸ್ ಮೀಟ್‌ನಲ್ಲಿ ಇತರೆ ಸೆಲೆಬ್ರಿಟಿಗಳೊಂದಿಗೆ ಎನ್‌ಟಿಆರ್ ಭಾಗವಹಿಸಿ, ವೇದಿಕೆ ಮೇಲೆ ಹಲವು ವಿಷಯಗಳನ್ನು ಮಾತನಾಡಿದರು. ಟಿಲ್ಲು ಸ್ಕ್ವೇರ್​ ಸಿನಿಮಾ ಜತೆಗೆ ಬೇರೆ ತೆಲುಗು ಚಿತ್ರಗಳನ್ನು ಗಣನೆಗೆ ತೆಗೆದುಕೊಂಡು ಮಾತನಾಡಿದ ಎನ್​ಟಿಆರ್, ಇತ್ತೀಚೆಗೆ ತೆರೆಕಂಡಂತಹ ವಿಜಯ್ ದೇವರಕೊಂಡ ಅಭಿನಯದ ಫ್ಯಾಮಿಲಿ ಸ್ಟಾರ್ ಚಿತ್ರದ ಬಗ್ಗೆ ಏನು ಹೇಳದೆ ಹೋಗಿದ್ದು ಇದೀಗ ಅನೇಕರಿಗೆ ಗೊಂದಲ ಹುಟ್ಟುಹಾಕಿದೆ.

    ಇದೇ ಏಪ್ರಿಲ್ 5ರಂದು ಬಿಡುಗಡೆಯಾದ ಫ್ಯಾಮಿಲಿ ಸ್ಟಾರ್ ಇನ್ನೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಆದರೆ ಎನ್‌ಟಿಆರ್ ವೇದಿಕೆಯ ಮೇಲೆ ನಟ ವಿಜಯ್ ದೇವರಕೊಂಡ ಬಗ್ಗೆ ಆಗಲಿ ಅಥವಾ ಅವರ ಸಿನಿಮಾದ ಕುರಿತಾಗಿ ಆಗಲಿ ಒಂದೇ ಒಂದು ವಿಷಯವನ್ನು ಪ್ರಸ್ತಾಪಿಸಲಿಲ್ಲ. ಇದನ್ನು ಗಮನಿಸಿದ ಹಲವರು ಬಹುಶಃ ಎನ್​ಟಿಆರ್​ಗೆ ವಿಜಯ್ ದೇವರಕೊಂಡ ಬಗ್ಗೆ ಮಾತನಾಡದಿರಲು ನಿರ್ಧರಿಸಿದ್ದರು ಅನಿಸುತ್ತದೆ ಎಂದೇ ಭಾವಿಸಿದ್ದಾರೆ.

    ಇದನ್ನೂ ಓದಿ: ಎಚ್ಡಿಕೆ ತೋಟದ ಮನೆಯಲ್ಲಿ ಹೊಸತೊಡಕು ಅಧಿಕಾರಿಗಳಿಂದ ತಡೆ

    ನಟ ಸಿದ್ದು ಜೊನ್ನಲಗಡ್ಡ ಮತ್ತು ವಿಶ್ವಕ್ ಸೇನ್ ಇಬ್ಬರನ್ನೂ ವೇದಿಕೆಗೆ ಕರೆಸಿ ಮೆಚ್ಚಿ ಮಾತನಾಡಿದ ಎನ್​ಟಿಆರ್​, ವಿಜಯ್ ದೇವರಕೊಂಡ ಹೆಸರನ್ನು ಒಮ್ಮೆಯೂ ತೆಗೆದುಕೊಳ್ಳಲಿಲ್ಲ. ಇದು ಅನೇಕರಲ್ಲಿ ಅಚ್ಚರ ತಂದಿದೆ. ವಿಜಯ್​ ಹೆಸರನ್ನು ನಿಜಕ್ಕೂ ನಟ ಮರೆತಿದ್ದರೋ ಅಥವಾ ಅವರ ಹೆಸರನ್ನು ತರಲು ಬಯಸಲಿಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.

    ಫ್ಯಾಮಿಲಿ ಸ್ಟಾರ್ ನಿರ್ಮಾಪಕರಾದ ದಿಲ್ ರಾಜು ಎನ್‌ಟಿಆರ್ ಅವರ ಆಪ್ತ ಸ್ನೇಹಿತರು. ಹೀಗಿರುವಾಗ ಟಿಲ್ಲು ಸ್ಕ್ವೇರ್‌ನ ಯಶಸ್ಸಿನ ಬಗ್ಗೆ ಮಾತನಾಡಿದ ಎನ್‌ಟಿಆರ್, ಅವರದ್ದೇ ಸಿನಿಮಾ ಆದ ಫ್ಯಾಮಿಲಿ ಸ್ಟಾರ್ ಇನ್ನೂ ಥಿಯೇಟರ್‌ಗಳಲ್ಲಿ ಓಡುತ್ತಿರುವಾಗ ಏಕೆ ಪರಿಗಣಿಸಲಿಲ್ಲ ಎಂಬುದು ವಿಜಯ್ ದೇವರಕೊಂಡ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ. ಸದ್ಯ ಈ ಬಗ್ಗೆ ಮುಂದಿನ ದಿನಗಳಲ್ಲಿ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).

    ಕುಡಿದದ್ದು ಒಂದೇ ಒಂದು ಎಳನೀರು, ಕೊಟ್ಟಿದ್ದು ಮಾತ್ರ 50,000 ರೂ.! ಶಾಕಿಂಗ್ ವಿಡಿಯೋ ವೈರಲ್

    ಎಕ್ಕೆ ಎಲೆ ನೋಡಿ ರೈತರು ಹೇಳ್ತಾರೆ ಭವಿಷ್ಯ! ಇದು ಯುಗಾದಿ ಹಬ್ಬದಂದು ಮಾತ್ರ ಸಾಧ್ಯ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts