More

    ಅನ್ನ ಹಾಕೋ ಕೈಯನ್ನೇ ಕಚ್ಚಬೇಡಿ … ಕಂಗನಾಗೆ ಜಯಾ ಬಚ್ಚನ್​ ಸಲಹೆ

    ನವದೆಹಲಿ: ಕಳೆದ ಕೆಲವು ತಿಂಗಳುಗಳಿಂದ ಬಾಲಿವುಡ್​ನಲ್ಲಿ ಅಷ್ಟೆಲ್ಲಾ ಸಂಚಲನಗಳು ಉಂಟಾಗುತ್ತಿದ್ದರೂ, ಹಿರಿಯ ನಟಿ ಜಯಾ ಬಚ್ಚನ್​ ಮಾತ್ರ ಎಲ್ಲೂ ಕಾಣಿಸಿಕೊಂಡಿರಲಿಲ್ಲ, ಏನೊಂದೂ ಮಾತನಾಡಿರಲಿಲ್ಲ. ಈಗ ಅವರು ಮೊದಲ ಬಾರಿಗೆ, ಅವರು ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ.

    ಇದನ್ನೂ ಓದಿ: ಈ ಸಲದ ಹಿಂದಿ ಬಿಗ್​ಬಾಸ್​ಗೆ ಸಲ್ಮಾನ್​ ಜತೆ ಇನ್ನೊಬ್ಬ ನಿರೂಪಕ

    ಸಮಾಜವಾದಿ ಪಕ್ಷದ ಸಂಸದೆಯಾಗಿರುವ ಜಯಾ ಬಚ್ಚನ್​ ಅವರು ಸಂಸತ್​ ಅಧಿವೇಶನದಲ್ಲಿ ಈ ಕುರಿತು ಮಾತನಾಡಿದ್ದಾರೆ. ರಾಜ್ಯಸಭೆಯ ಜೀರೋ ಹವರ್​ನಲ್ಲಿ ಮಾತನಾಡಿರುವ ಅವರು, ‘ಸೋಷಿಯಲ್​ ಮೀಡಿಯಾದಲ್ಲಿ ಚಿತ್ರರಂಗದವರನ್ನು ಹರಿದು ಮುಕ್ಕುತ್ತಿದ್ದಾರೆ. ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವವರೇ ಗಟಾರ ಎಂದು ಕರೆಯುತ್ತಿದ್ದಾರೆ. ಅಂತಹ ಶಬ್ಧಗಳನ್ನು ಉಪಯೋಗಿಸುವುದಕ್ಕೆ ಬಿಡಬಾರದು’ ಎಂದು ಯಾರ ಹೆಸರನ್ನು ಪ್ರಸ್ತಾಪಿಸದೆಯೇ ಹೇಳಿದ್ದಾರೆ.

    ಕೆಲವು ದಿನಗಳ ಹಿಂದಷ್ಟೇ ನಟಿ ಕಂಗನಾ ರಣಾವತ್​ ಅವರು ಬಾಲಿವುಡ್​ ಗಟಾರವಾಗುತ್ತಿದೆ ಮತ್ತು ಚಿತ್ರರಂಗದಲ್ಲಿರುವ ಶೇ 99ರಷ್ಟು ಜನ ಡ್ರಗ್ಸ್​ ತೆಗೆದುಕೊಳ್ಳುತ್ತಾರೆ ಎಂದು ಆರೋಪಿಸಿದ್ದರು.

    ಈ ಕುರಿತು ಇನ್ನಷ್ಟು ಮಾತನಾಡಿರುವ ಅವರು, ‘ಯಾರೋ ಒಬ್ಬಿಬ್ಬರು ಮಾಡಿರುವ ತಪ್ಪಿಗೆ ಇಡೀ ಚಿತ್ರರಂಗವನ್ನು ದೂಷಿಸುವುದು ತಪ್ಪು. ನಿನ್ನೆಯಷ್ಟೇ ಚಿತ್ರರಂಗದವರೇ ಆದ ಒಬ್ಬರು, ಚಿತ್ರರಂಗದ ವಿರುದ್ಧ ಮಾತನಾಡಿದರು. ಇದು ನಾಚಿಕೆ ಪಡಬೇಕಾದ ವಿಷಯ’ ಎಂದು ಜಯಾ ಬಚ್ಚನ್​ ಹೇಳಿದ್ದಾರೆ.

    ಇದನ್ನೂ ಓದಿ: ರಾಗಿಣಿ ಕೈಯಲ್ಲಿ ‘ರಾಮಾಯಣ’ನಾ?

    ಸೋಮವಾರವಷ್ಟೇ ನಟ ಮತ್ತು ಸಂಸದ ರವಿಕಿಶನ್​ ಸಂಸತ್ತಿನಲ್ಲಿ ಮಾತನಾಡಿದ್ದರು. ‘ದೇಶದ ಯುವಜನತೆಯನ್ನು ದಿಕ್ಕುತಪ್ಪಿಸಲು ನೆರೆರಾಷ್ಟ್ರಗಳು ಸಂಚು ರೂಪಿಸುತ್ತಿವೆ. ಪಾಕಿಸ್ತಾನ ಮತ್ತು ಚೀನಾದಿಂದ ಅಕ್ರಮವಾಗೊ ಪಂಜಾಬ್​ ಮತ್ತು ನೇಪಾಳದ ಮೂಲಕ ಇಲ್ಲಿಗೆ ಡ್ರಗ್ಸ್​ ತರಲಾಗುತ್ತಿದೆ. ಡ್ರಗ್ಸ್​ ಚಟ ಹೆಚ್ಚಾಗುತ್ತಿದೆ. ಅದರಲ್ಲೂ ಚಿತ್ರರಂಗದಲ್ಲೂ ಜಾಸ್ತಿಯಾಗಿದೆ. ಈ ವಿಷಯವಾಗಿ ಎನ್​ಸಿಬಿ ಒಳ್ಳೆಯ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಇನ್ನೂ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದ್ದರು.

    ನಟನೆ ಜತೆ ಹೊಸ ಕೆಲಸಕ್ಕೆ ಕೈ ಹಾಕಿದ ಕಣ್ಸನ್ನೆ ಸುಂದರಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts