ನವದೆಹಲಿ: ಕೋವಿಡ್-19 ಪಿಡುಗು ಹಿನ್ನೆಲೆಯಲ್ಲಿ ಗೃಹ, ವಾಹನ ಹಾಗೂ ಮತ್ತಿತರ ಸಾಲ ಮರುಪಾವತಿಯನ್ನು ವಿಳಂಬಿಸಲು (Moratorium) ಆಗಸ್ಟ್ 31ರವರೆಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ, ಸಾಲ ಮರುಪಾವತಿ ಮೇಲಿನ ಬಡ್ಡಿಗೂ ವಿನಾಯ್ತಿ ನೀಡಿದರೆ ಬ್ಯಾಂಕ್ಗಳಿಗೆ 2 ಲಕ್ಷ ಕೋಟಿ ರೂ. ನಷ್ಟವಾಗುವ ಸಾಧ್ಯತೆ ಇದೆ. ಇದರಿಂದ ಬ್ಯಾಂಕ್ಗಳ ಆರ್ಥಿಕ ಸ್ಥಿತಿ ಏರುಪೇರಾಗುವ ಅಪಾಯವಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಸುಪ್ರೀಂಕೋರ್ಟ್ಗೆ ಪ್ರಮಾಣಪತ್ರ ಸಲ್ಲಿಸಿದೆ.
ಸಾಲ ಮರುಪಾವತಿ ವಿಳಂಬಕ್ಕೆ ಅವಕಾಶ ನೀಡಿರುವುದರಿಂದ ಉಂಟಾಗಬಹುದಾದ ತೊಂದರೆಯನ್ನು ನೀಗಿಸಿಕೊಳ್ಳಲು ಬ್ಯಾಂಕ್ಗಳಿಗೆ ಎಲ್ಲ ರೀತಿಯ ಸಹಾಯವನ್ನು ಒದಗಿಸಲಾಗುತ್ತಿದೆ. ಆದರೆ, ಬಡ್ಡಿಗೂ ವಿನಾಯ್ತಿ ನೀಡುವಂತೆ ಬ್ಯಾಂಕ್ಗಳನ್ನು ಬಲವಂತಪಡಿಸಿದರೆ, ಮುಂದೆ ಬ್ಯಾಂಕ್ಗಳ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಜತೆಗೆ ನಿಶ್ಚಿತ ಠೇವಣಿ ಸೇರಿ ವಿವಿಧ ಠೇವಣಿಗಳಲ್ಲಿ ಹಣತೊಡಿಗಿಸುರುವ ಗ್ರಾಹಕರಿಗೆ ಬಡ್ಡಿ ನೀಡಲು ತೊಂದರೆಯಾಗುತ್ತದೆ ಎಂದು ಆರ್ಬಿಐ ಆತಂಕ ವ್ಯಕ್ತಪಡಿಸಿದೆ.
ಇದನ್ನೂ ಓದಿ: 2019ರ ನವೆಂಬರ್ನಲ್ಲೇ ಭಾರತ ಪ್ರವೇಶಿಸಿದ್ದ ಕರೊನಾ ವೈರಾಣು
ಸಾಲ ಮರುಪಾವತಿ ವಿಳಂಬದ ಅವಧಿಯಲ್ಲಿ ಬಾಕಿವುಳಿಸಿಕೊಳ್ಳುವ ಸಾಲದ ಮೇಲೆ ಬ್ಯಾಂಕ್ಗಳು ಹೆಚ್ಚುವರಿ ಬಡ್ಡಿ ವಿಧಿಸಲಿವೆ. ಇದರಿಂದ ಗ್ರಾಹಕರಿಗೆ ತೊಂದರೆಯಾಗುತ್ತದೆ. ಹಾಗಾಗಿ, ಸಾಲ ಮರುಪಾವತಿಗೂ ಕೊಟ್ಟಂತೆ ಬಡ್ಡಿ ಪಾವತಿಗೂ ವಿನಾಯ್ತಿ ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್ಗೆ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ವೇಳೆ ಆರ್ಬಿಐ ಈ ಹೇಳಿಕೆ ನೀಡಿದೆ.
ಸಾಲ ಮರುಪಾವತಿಯನ್ನು ವಿಳಂಬಿಸಲು ಅವಕಾಶ ನೀಡಲಾಗಿದೆಯೇ ಹೊರತು, ಸಾಲವನ್ನು ಸಂಪೂರ್ಣವಾಗಿ ಮಾಫಿ ಮಾಡಲಾಗಿಲ್ಲ ಎಂದು ಅದು ಸುಪ್ರೀಂಕೋರ್ಟ್ಗೆ ಸ್ಪಷ್ಟಪಡಿಸಿದೆ.
ಜನಪ್ರತಿನಿಧಿಗಳು ಕದ್ದುಮುಚ್ಚಿ ಮಾಡುವುದನ್ನೂ ತಿಳಿಯುವ ಹಕ್ಕು ಮತದಾರರಿಗಿದೆ ಎಂದ ಹೈಕೋರ್ಟ್