ಚೆನ್ನೈ: ಕಾಲಿವುಡ್ ಸೂಪರ್ಸ್ಟಾರ್ ವಿಶಾಲ್ ಅವರಿಗೆ ವಯಸ್ಸು ನಲವತ್ತು ಮೀರಿದ್ದರೂ ಇನ್ನೂ ಬ್ಯಾಚುಲರ್ ಆಗೇ ಉಳಿದಿದ್ದಾರೆ. ಈಗಾಗಲೇ ಹಲವು ಬಾರಿ ಅವರ ಮದುವೆ ವಿಚಾರ ಸುದ್ದಿಯಾಗಿತ್ತು. ಹಲವು ನಟಿಯರ ಜತೆ ವಿಶಾಲ್ ಹೆಸರು ಕೇಳಿಬಂದಿತ್ತು. ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಹಾಗೂ ಶರತ್ ಕುಮಾರ್ ಅವರ ಪುತ್ರಿ ವರಲಕ್ಷ್ಮೀ ಅವರನ್ನು ಮದುವೆಯಾಗಲಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ, ಇದೆಲ್ಲ ವದಂತಿ ಎಂಬುದು ತದನಂತರದಲ್ಲಿ ತಿಳಿದುಬಂದಿತ್ತು. ಇದೀಗ ಮತ್ತೊಮ್ಮೆ ವಿಶಾಲ್ ಮದುವೆ ವಿಚಾರ ಮುನ್ನೆಲೆಗೆ ಬಂದಿದೆ.
ಇದೀಗ ಬಂದಿರುವ ವರದಿಯ ಪ್ರಕಾರ ವಿಶಾಲ್ ಅವರು ತಮಿಳು ಚಿತ್ರರಂಗದ ಯುವ ನಟಿಯನ್ನು ಮದುವೆ ಆಗಲಿದ್ದಾರಂತೆ. ಆ ಯುವ ನಟಿ ಬೇರೆ ಯಾರೂ ಅಲ್ಲ. ಅವರೇ ಲಕ್ಷ್ಮೀ ಮೆನನ್.
ಅಂದಹಾಗೆ ವಿಶಾಲ್, ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಕನ್ನಡಿಗರಿಗೂ ವಿಶಾಲ್ ಪರಿಚಯವಿದೆ. ಕರ್ನಾಟಕದಲ್ಲೂ ಅವರ ಸಿನಿಮಾಗಳನ್ನು ವೀಕ್ಷಿಸುವ ಒಂದು ಬಳಗವಿದೆ. ಹಲವಾರು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವ ವಿಶಾಲ್, ನಟರಾಗಿ ಜನಮನ್ನಣೆ ಗಳಿಸಿದ್ದಾರೆ. ಆನ್ ಸ್ಕ್ರೀನ್ ಮಾತ್ರವಲ್ಲದೆ ಆಫ್ ಸ್ಕ್ರೀನ್ನಲ್ಲಿ ತಮ್ಮ ಸಾಮಾಜಿಕ ಕಾರ್ಯಗಳಿಂದ ವಿಶಾಲ್ ಸುದ್ದಿಯಾಗಿದ್ದಾರೆ. ಅವರ ಮಾನವೀಯತೆ ಕಾರ್ಯವನ್ನು ಎಲ್ಲರು ಮೆಚ್ಚಿಕೊಂಡಿದ್ದಾರೆ. ಅಪ್ಪು ಮರಣ ಹೊಂದಿದ ಸಮಯದಲ್ಲಿ ಅವರ ಸಾವಿಗೆ ಕಂಬನಿ ಮಿಡಿದಿದ್ದ ವಿಶಾಲ್, ಅಪ್ಪು ಮುನ್ನಡೆಸುತ್ತಿದ್ದ ಮೈಸೂರಿನ ಶಕ್ತಿಧಾಮದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ.
ಸದ್ಯ ವಿಶಾಲ್ ಅವರಿಗೆ 45 ವರ್ಷ ವಯಸ್ಸು. ಇಂದಿಗೂ ಮದುವೆಯಾಗದೇ ಆಗೇ ಉಳಿದಿದ್ದಾರೆ. ಕರೊನಾಗೂ ಮುಂಚೆ ಅನಿಶಾ ಎಂಬಾಕೆಯ ಜತೆ ವಿಶಾಲ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಆದರೆ, ಈ ಸಂಬಂಧ ಹೆಚ್ಚು ಮದುವೆವರೆಗೂ ಮುಂದುವರಿಯಲಿಲ್ಲ. ಮಧ್ಯದಲ್ಲೇ ಸಂಬಂಧ ಮುರಿದುಬಿತ್ತು. ಅಂದಿನಿಂದ ವಿಶಾಲ್ ಎಲ್ಲಿ ಹೋದರು ಮದುವೆ ಯಾವಾಗ ಎಂದು ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ಕೇಳುತ್ತಲೇ ಇರುತ್ತಾರೆ. ಇತ್ತೀಚೆಗೆ ಹಲವು ಸಂದರ್ಭಗಳಲ್ಲಿ ವಿಶಾಲ್ಗೆ ಈ ಪ್ರಶ್ನೆ ಕೇಳಲಾಗಿತ್ತು.
ಇದೀಗ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ವಿಶಾಲ್ ಅವರು ಪಾಂಡಿಯಾ ನಾಡು ಸಿನಿಮಾದ ಸಹ ನಟಿ ಲಕ್ಷ್ಮೀ ಮೆನನ್ ಅವರನ್ನು ವರಿಸಲಿದ್ದಾರೆ. ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ಆದರೆ, ಕಾಲಿವುಡ್ನಲ್ಲಿ ಈ ಒಂದು ಸುದ್ದಿ ಭಾರೀ ಚರ್ಚೆಯಾಗುತ್ತಿದೆ. ಈ ಬಗ್ಗೆ ವಿಶಾಲ್ ಅಥವಾ ಲಕ್ಷ್ಮಿ ಮೆನನ್ ಪ್ರತಿಕ್ರಿಯಿಸಿದರೆ ಈ ವದಂತಿಗಳಿಗೆ ತೆರೆ ಬೀಳುವ ಸಾಧ್ಯತೆ ಇದೆ.
ಸಿನಿಮಾ ವಿಚಾರಕ್ಕೆ ಬಂದರೆ, ಲಕ್ಷ್ಮಿ ಮೆನನ್ ಪ್ರಸ್ತುತ ಚಂದ್ರಮುಖಿ 2 ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. ವಿಶಾಲ್ ಅವರು ಮಾರ್ಕ್ ಆ್ಯಂಟೋನಿ ಸಿನಿಮಾದ ಚಿತ್ರೀಕರಣ ಪೂರ್ಣಗೊಳಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್)
ಬಾಡಿಗೆ ಹಣ ಕೇಳಿದ್ದಕ್ಕೆ ಮಹಿಳೆಯ ಮುಖವನ್ನೇ ಕೊಯ್ದ ಬಾಡಿಗೆದಾರ: ಬಂಡೆಪಾಳ್ಯ ಪೊಲೀಸರ ವಿರುದ್ಧವೂ ಆರೋಪ
ಅತಿಯಾಗಿ ನೀರು ಕುಡಿದ್ರೆ ಏನಾಗುತ್ತೆ? ಈಕೆಯ ದುರಂತ ಸಾವಿಗೆ ಕಾರಣ ತಿಳಿದ್ರೆ ಶಾಕ್ ಆಗ್ತೀರಾ!