More

    ಇಲ್ಲಿ ಹುತ್ತಕ್ಕೆ ಹಾಲೆರೆಯಲ್ಲ, ಕೋಳಿಯನ್ನೇ ಬಲಿ ಕೊಡ್ತಾರೆ!; ವಿಶಿಷ್ಟವಾಗಿ ಷಷ್ಠಿ ಆಚರಣೆ…

    ಚಾಮರಾಜನಗರ: ಸುಬ್ರಹ್ಮಣ್ಯ ಷಷ್ಠಿ ಎಂದರೆ ರಾಜ್ಯದ ಹಲವೆಡೆಯ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ, ನಾಗಸನ್ನಿಧಿಗಳಲ್ಲಿ ವಿಶೇಷ ಪೂಜೆ ನೆರವೇರುತ್ತದೆ. ಅದರಲ್ಲೂ ನಾಗಬನಗಳಲ್ಲಿ ಹುತ್ತಕ್ಕೆ ಹಾಲೆರೆದು ಹಬ್ಬ ಆಚರಿಸಲಾಗುತ್ತದೆ. ಆದರೆ ಇಲ್ಲೊಂದು ಕಡೆ ಹುತ್ತಕ್ಕೆ ಹಾಲೆರೆಯುವ ಬದಲು ಕೋಳಿಗಳನ್ನು ಬಲಿ ಕೊಡಲಾಗಿದೆ. ಆ ಮೂಲಕ ವಿಶಿಷ್ಟವಾಗಿ ಷಷ್ಠಿ ಆಚರಿಸಲಾಗಿದೆ.

    ಚಾಮರಾಜನಗರ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಈ ರೀತಿಯಲ್ಲಿ ಷಷ್ಠಿ ಆಚರಣೆ ಮಾಡಲಾಗಿದೆ. ಚಾಮರಾಜನಗರದ ಮಲ್ಲಯ್ಯನಪುರ, ಉತ್ತುವಳ್ಳಿ, ಉಪ್ಪಾರ ಬಡಾವಣೆ ಮುಂತಾದ ಗ್ರಾಮಗಳಲ್ಲಿ ಹುತ್ತಕ್ಕೆ ಕೋಳಿ ಬಲಿ ಕೊಡಲಾಗಿದೆ.

    ಇದನ್ನೂ ಓದಿ: ಆಯ್ತು ಬನ್ನಿ ಅಂದ್ರಂತೆ ಮನುರಂಜನ್ ರವಿಚಂದ್ರನ್​, ಅಭಿಮಾನಿಗಳಿಗೆ ಖುಷಿಯೋ ಖುಷಿ…

    ಕೋಳಿಯನ್ನು ಬಲಿ ಕೊಟ್ಟು ಹುತ್ತಕ್ಕೆ ರಕ್ತ ಹಾಗೂ ಮೊಟ್ಟೆಯನ್ನಿಟ್ಟು ಷಷ್ಠಿಯನ್ನು ಆಚರಿಸಲಾಗಿದೆ. ಕೋಳಿ ಬಲಿ ಕೊಟ್ಟು ಪೂಜೆ ಮಾಡಿದರೆ ಸರ್ಪ ಸಂಬಂಧಿ ದೋಷ ಪರಿಹಾರವಾಗುವ ನಂಬಿಕೆ ಇಲ್ಲಿನ ಜನರಲ್ಲಿದೆ.

    ಹೆಲಿಕಾಪ್ಟರ್​ ದುರಂತದಲ್ಲಿ ಹುತಾತ್ಮರಾದವರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಆ್ಯಂಬುಲೆನ್ಸ್ ಅಪಘಾತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts