More

    ಧೋನಿ…ಧೋನಿ ಎನ್ನುವಾಗ ಜಡೇಜಾ ಎಂಟ್ರಿ! ಯಾಕಿಂಗೆ ಮಾಡ್ತೀರಾ? ಫ್ಯಾನ್ಸ್ ಗರಂ

    ಚೆನ್ನೈ: ನಿನ್ನೆ (ಏ.08) ಚೆಪಾಕ್ ಸ್ಟೇಡಿಯಂನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್​ ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳ ನಡುವೆ ನಡೆದ ಭಾರೀ ಹಣಾಹಣಿಯಲ್ಲಿ 7 ವಿಕೆಟ್​ಗಳ ಅಂತರದಿಂದ ರುತುರಾಜ್ ನಾಯಕತ್ವದ ಸಿಎಸ್​ಕೆ ಪಡೆ ಭರ್ಜರಿ ಗೆಲುವು ದಾಖಲಿಸಿತು. ಕೆಕೆಆರ್​ ನೀಡಿದ್ದ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಪಡೆಯ ವಿಕೆಟ್​ಗಾಗಿ ದೇವರನ್ನು ಬೇಡುತ್ತಿದ್ದವರು ಕೆಕೆಆರ್​ ಫ್ಯಾನ್ಸ್​ ಅಥವಾ ಆಟಗಾರರಲ್ಲ ಬದಲಿಗೆ ಧೋನಿ ಅಭಿಮಾನಿಗಳು.

    ಇದನ್ನೂ ಓದಿ: ಸಕ್ಕರೆ ನಾಡಿಗೆ ಮತ್ತೆ ಮೋಹಕ ತಾರೆ ಎಂಟ್ರಿ! ಎಚ್​ಡಿಕೆ ವಿರುದ್ಧ ಪ್ರಚಾರಕ್ಕೆ ರಮ್ಯಾ ಸಜ್ಜು?

    ನಾಲ್ಕನೇ ಕ್ರಮಾಂಕದಲ್ಲಿ ಅಬ್ಬರದ ಬ್ಯಾಟಿಂಗ್​ ಆಡುತ್ತಿದ್ದ ಶಿವಂ ದುಬೆ ಎಂದಿನಂತೆ ಈ ಪಂದ್ಯದಲ್ಲಿಯೂ ಸಹ ಸಿಕ್ಸರ್​ಗಳನ್ನು ಸಿಡಿಸಿದರು. ಇನ್ನೇನು ದುಬೆ ಮ್ಯಾಚ್​ ವಶಪಡಿಸಿಕೊಳ್ಳುತ್ತಾರೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ, ಅಷ್ಟರೊಳಗೆ ವೈಭವ್​ಗೆ ವಿಕೆಟ್ ಒಪ್ಪಿಸಿದರು. ಶಿವಂ ಔಟ್ ಆಗಿದ್ದಕ್ಕೆ ಬೇಸರ ವ್ಯಕ್ತಪಡಿಸದ ಸಿಎಸ್​ಕೆ ಅಭಿಮಾನಿಗಳು, ಧೋನಿ….ಧೋನಿ ಎಂದು ಕೂಗಲು ಪ್ರಾರಂಭಿಸಿದರು.

    ಈ ವೇಳೆ ಕ್ಯಾಪ್ಟನ್ ಕೂಲ್​ ಎಂಟ್ರಿಗಾಗಿ ಕಾಯುತ್ತಿದ್ದ ಫ್ಯಾನ್ಸ್​ಗೆ ಭಾರೀ ಆಘಾತವಾಗಿದ್ದು, ಗ್ಲೌಸ್​ ಧರಿಸಿ, ಕ್ರೀಡಾಂಗಣಕ್ಕೆ ಎಂಟ್ರಿ ಕೊಡಲು ಬಂದ ಜಡೇಜಾರನ್ನು ನೋಡಿ. ಕೂಡಲೇ ತನ್ನ ಕಡೆ ನೋಡಿ ಸಿಟ್ಟಾದ ಫ್ಯಾನ್ಸ್​ಗಳನ್ನು ಗಮನಿಸಿದ ಜಡೇಜಾ, ತಕ್ಷಣವೇ ಹಿಂತಿರುಗಿದರು. ಈ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಧೋನಿ ಕ್ರೇಜ್​ ಇಂದು…ನಾಳೆ ಮುಗಿಯುವುದಲ್ಲ ಎಂಬುದು ಈ ದೃಶ್ಯ ನೋಡಿದವರಿಗೆ ಅನಿಸುವುದು ಸಹಜ,(ಏಜೆನ್ಸೀಸ್).

    ಎಕ್ಕೆ ಎಲೆ ನೋಡಿ ರೈತರು ಹೇಳ್ತಾರೆ ಭವಿಷ್ಯ! ಇದು ಯುಗಾದಿ ಹಬ್ಬದಂದು ಮಾತ್ರ ಸಾಧ್ಯ…

    ಧೋನಿ ಪ್ರಯತ್ನ ವಿಫಲವಾದ್ರೂ ಬಿಡಲಿಲ್ಲ ಫ್ಯಾನ್ಸ್​ ಕಿರುಚಾಟ! ಶಾಕ್ ಆದ ದೈತ್ಯ ಆಟಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts