More

    ವಂಚನೆ ಪ್ರಕರಣ ನಡೆಸಲು ಅನೈತಿಕವಾಗಿ ವರ್ತಿಸುವಂತೆ ಹೇಳಿದ ಆರೋಪ; ಇನ್​ಸ್ಪೆಕ್ಟರ್​​ಗೆ ಶಾಕ್​ ನೀಡಿದ ಮಹಿಳೆ

    ಬೆಂಗಳೂರು: ವಂಚನೆ ಪ್ರಕರಣ ನಡೆಸಲು ಮಂಚಕ್ಕೆ ಬರಲು ಕರೆದ ಆರೋಪದ ಮೇಲೆ ಇನ್​ಸ್ಪೆಕ್ಟರ್​ ಮೇಲೆ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ. ಈ ಇನ್ಸ್​ಪೆಕ್ಟರ್​, ಬೆಂಗಳೂರಿನ ಕೊಡಿಗೆಹಳ್ಳಿಯವರಾಗಿದ್ದು ಅವರ ಮೇಲೆ ಮಹಿಳೆ ಯಲಹಂಕ ಎಸಿಪಿಗೆ ದೂರು ನೀಡಿದ್ದಾರೆ.

    ಈ ಮಹಿಳೆ ಚಿಕ್ಕಮಗಳೂರು ಮೂಲದವರಾಗಿದ್ದು ಹಿಂದೆ ವಂಚನೆ ಪ್ರಕರಣವನ್ನ ಹೊತ್ತು ಕೊಡಿಗೆಹಳ್ಳಿ ಠಾಣೆಗೆ ಹೋಗಿದ್ದರು. ಈ ಮಹಿಳೆ, ಇನ್ಸ್​ಪೆಕ್ಟರ್​ ಮೊದಮೊದಲು ಕೇಸಿನ ಬಗ್ಗೆ ಮಾತನಾಡಿ ನಂತರ ಬೆಡ್ ರೂಂನ ಮಾತು ಆಡುತ್ತಿದ್ದರು ಎಂದು ಆರೋಪಿಸಿದ್ದಾರೆ.

    ಇದರಿಂದಾಗಿ ಇನ್ಸ್​ಪೆಕ್ಟರ್​ ರಾಜಣ್ಣ ಸದ್ಯ ಸಸ್ಪೆಂಡ್ ಭೀತಿಯಲ್ಲಿದ್ದಾರೆ. ಸದ್ಯ ಪೊಲೀಸ್ ಆಯುಕ್ತರಿಗೆ ಅಮಾನತು ಮಾಡುವಂತೆ ಈಶಾನ್ಯ ವಿಭಾಗದ ಡಿಸಿಪಿ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts