ಸುಡಾನ್: ಸೇನಾಪಡೆ ಹಾಗೂ ಅರೆಸೇನಾಪಡೆ ನಡುವಿನ ಘರ್ಷಣೆಯಿಂದಾಗಿ ದಾಳಿ-ಪ್ರತಿದಾಳಿ ಆಗುತ್ತಿರುವ ಕಾರಣ ಭಾರತೀಯರು ದೇಶದ ಮಿಷನ್ನಿಂದ ಆಶ್ರಯ ಪಡೆಯುವಂತೆ ಸರ್ಕಾರ ಸೂಚಿಸಿದೆ.
ಕಳೆದ ಕೆಲವು ದಿನಗಳಿಂದ ಸುಡಾನ್ನಲ್ಲಿ ಸೇನೆ ಹಾಗೂ ಅರೆಸೇನಾಪಡೆ ನಡುವೆ ಘರ್ಷಣೆ ನಡೆಯುತ್ತಿದ್ದು ಈ ನಿಟ್ಟಿನಲ್ಲಿ ಸರ್ಕಾರ ಸೂಚಿಸಿರುವ ತಾಣಗಳಲ್ಲಿ ಜನತೆಗೆ ಆಶ್ರಯ ಪಡೆಯುವಂತೆ ಸೂಚಿಸಿದೆ.
ಮುನ್ನೆಚ್ಚರಿಕ ಕ್ರಮ ವಹಿಸುವಂತೆ ಸೂಚನೆ
ಈ ಕುರಿತು ಇಂಡಿಯಾ ಇನ್ ಸುಡಾನ್ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದ್ದು ಸೇನೆ ಹಾಗೂ ಅರೆಸೇನಾ ಪಡೆಗಳ ನಡುವಿನ ಘರ್ಷಣೆಯಿಂದ ಎಲ್ಲಾ ಭಾರತೀಯರು ಹೆಚ್ಚಿನ ಮುನ್ನೆಚ್ಚರಿಕ ಕ್ರಮ ವಹಿಸಿ.
ತಕ್ಷಣವೇ ಜಾರಿಗೆ ಬರುವಂತೆ ಎಲ್ಲರೂ ಮನೆಯಲ್ಲಿ ಇರಬೇಕು ಮತ್ತು ಅನಾವಶ್ಯಕವಾಗಿ ಹೊರಗೆ ಹೋಗುವುದನ್ನು ನಿಲ್ಲಿಸಿ. ಎಲ್ಲರೂ ಶಾಂತವಾಗಿರಿ ಮತ್ತು ಮುಂದಿನ ಅಪ್ಡೇಟ್ಗಾಗಿ ಕಾಯುತ್ತಿರಿ ಎಂದು ಟ್ವೀಟ್ ಮಾಡಲಾಗಿದೆ.
ಇದನ್ನೂ ಓದಿ: VIDEO| ಡೇಟಿಂಗ್ ಮಾಡಲೆಂದೇ ಕೋಟಿ ರೂಪಾಯಿ ಖರ್ಚು ಮಾಡಿದ ಭೂಪ
ಸೇನಾ-ಅರೆಸೇನಾಪಡೆ ನಡುವೆ ಘರ್ಷಣೆ
ಸೇನಾ ನಾಯಕ ಅಬ್ದೆಲ್ ಫತ್ತಾಹ್ ಅಲ್-ಬುರ್ಹಾನ್ ಮತ್ತು ಅರೆಸೇನಾಪಡೆ ನಾಯಕ ಮೊಹಮ್ಮದ್ ಹಮ್ದಾನ್ ಡಾಗ್ಲೋ ನಡುವಿನ ಭಿನ್ನಾಬಿಪ್ರಾಯ ಸ್ಪೋಟಗೊಂಡಿದ್ದು ಇದು ಘರ್ಷನೆಯಾಗಿ ಮಾರ್ಪಟ್ಟಿದೆ.