ನವದೆಹಲಿ: ಪೂರ್ವ ಲಡಾಖ್ನ ಪ್ಯಾಂಗೋಂಗ್ ಸರೋವರದ ದಕ್ಷಿಣ ತೀರದ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಭಾರತ-ಚೀನಾ ನಡುವೆ ಮತ್ತೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಇಂದು ಭಾರತ ಮತ್ತು ಚೀನಾ ನಡುವೆ ಕಮಾಂಡರ್ ಮಟ್ಟದ ಮಾತುಕತೆ ನಡೆಯುತ್ತಿದೆ. ಆದರೆ ಇತ್ತ ಗಡಿಯಲ್ಲಿ ಎರಡೂ ದೇಶಗಳ ಸೈನಿಕರು, ಸುಸಜ್ಜಿತ ಅಸ್ತ್ರಗಳು, ಯುದ್ಧದ ಟ್ಯಾಂಕ್ಗಳೊಂದಿಗೆ ಪರಸ್ಪರ ಗುಂಡಿನ ದಾಳಿ ನಡೆಸುವಷ್ಟು ಅಂತರದಲ್ಲಿ ಬೀಡುಬಿಟ್ಟಿವೆ.
ಚೀನಾದ ಯುದ್ಧದ ಟ್ಯಾಂಕ್ಗಳು, ಶಸ್ತ್ರಾಸ್ತ್ರಗಳನ್ನೊಳಂಡ ವಾಹನಗಳು ಭಾರತೀಯ ಸೈನಿಕರು ಆಕ್ರಮಿಸಿಕೊಂಡಿರುವ ಕಾಲಾ ಟಾಪ್ ತಪ್ಪಲು ಪ್ರದೇಶದ ಬಳಿ ಬಂದು ನಿಂತಿವೆ. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯೂ ಸಜ್ಜುಗೊಂಡಿದೆ. ಸೈನಿಕರು ಕಾಲಾ ಟಾಪ್ ಬಳಿ ಫಿರಂಗಿ, ಯುದ್ಧದ ಟ್ಯಾಂಕ್ ಮತ್ತು ಅಗತ್ಯ ಶಸ್ತ್ರಾಸ್ತ್ರಗಳನ್ನು ಸಿದ್ಧ ಮಾಡಿಕೊಂಡು ನಿಂತಿದ್ದಾರೆ.
ಗಡಿಯಲ್ಲಿ ಮತ್ತೆ ಹೊಸದಾಗಿ ಉದ್ವಿಗ್ನತೆ ಸೃಷ್ಟಿಯಾದ ಹಿನ್ನೆಲೆಯಲ್ಲಿ ಭಾರತೀಯ ಯುದ್ಧ ಟ್ಯಾಂಕ್ಗಳನ್ನು ಸ್ಪ್ಯಾಂಗೂರ್ ತ್ಸೋ ಮತ್ತು ಚುಶುಲ್ ನಡುವಿನ ಸೂಕ್ಷ್ಮ ಪ್ರದೇಶವಾದ ನೈಋತ್ಯ ಬಯಲು ಪ್ರದೇಶಗಳಲ್ಲಿ ಭಾರತೀಯ ಯುದ್ಧ ಟ್ಯಾಂಕ್ಗಳನ್ನೂ ಸನ್ನದ್ಧ ಸ್ಥಿತಿಯಲ್ಲಿ ನಿಯೋಜಿಸಲಾಗಿದೆ. ಇದನ್ನೂ ಓದಿ: ಸುದೀಪ್ ಮತ್ತು ಇಂದ್ರಜಿತ್ ಒಟ್ಟಿಗೆ ಸಿದ್ಧಗಂಗಾ ಮಠಕ್ಕೆ ಭೇಟಿ!; ಇದರ ಹಿಂದಿನ ಮರ್ಮವೇನು?
ಭಾರತ-ಚೀನಾ ನಡುವೆ ಈಗಾಗಲೇ ಮಾತುಕತೆ ನಡೆದಿದೆ. ಆದರೂ ಚೀನಾ ಪ್ರಚೋದನಾಕಾರಿ ಚಟುವಟಿಕೆಗಳನ್ನು ನಡೆಸುತ್ತಿದೆ. ಆಗಸ್ಟ್ 29-30 ರ ಮಧ್ಯರಾತ್ರಿ ಚೀನಾ ಸೈನಿಕರು ಪ್ಯಾಂಗೋಂಗ್ ಸರೋವರದ ದಕ್ಷಿಣ ತೀರದ ಬಳಿ ಏಕಪಕ್ಷೀಯವಾಗಿ ವಾಸ್ತವ ಸ್ಥಿತಿ ಬದಲಿಸಲು ಪ್ರಚೋದನಕಾರಿ ಪ್ರಯತ್ನಗಳನ್ನು ಮಾಡಿದ್ದರು. ಅವರನ್ನು ಭಾರತೀಯ ಸೇನೆ ಸಮರ್ಥವಾಗಿ ಹಿಮ್ಮೆಟ್ಟಿಸಿದೆ ಎಂದು ನಿನ್ನೆ ರಕ್ಷಣಾ ಸಚಿವಾಲಯ ಹೇಳಿತ್ತು. ಚೀನಾದ ಉಪಟಳ ಮುಂದುವರಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 9 ಗಂಟೆಯಿಂದ ಎರಡೂ ದೇಶಗಳ ನಡುವೆ ಕಮಾಂಡರ್ ಮಟ್ಟದ ಮಾತುಕತೆ ನಡೆಯುತ್ತಿದೆ. (ಏಜೆನ್ಸೀಸ್)
‘ಅಂದು ಏನು ನಡೆಯಿತೋ..ಅದು ಭಯಾನಕತೆಯನ್ನೂ ಮೀರಿದ್ದು…’ ಸುರೇಶ್ ರೈನಾ ಟ್ವೀಟ್